ಭಾರತದ ಹೊಸ ಭೂಪಟ ಪ್ರಕಟ, 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶ
ನವದೆಹಲಿ, ಆಗಸ್ಟ್ 05: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂವಿಧಾನದ 370ನೇ ಪರಿಚ್ಛೇದ ರದ್ದುಗೊಳಿಸುವ ಮಹತ್ವ ನಿರ್ಧಾರ ಕೈಗೊಂಡ ಬಳಿಕ ಭಾರತ ಭೂಪಟ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ, ರಾಜ್ಯ ಆಡಳಿತ ಅಧಿಕಾರ ರದ್ದಾಗಿದೆ. ಹೀಗಾಗಿ, ಭಾರತದಲ್ಲಿರುವ ಒಟ್ಟು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಹೊಸ ಲೆಕ್ಕಾಚಾರ ಬದಲಾಗಿದೆ. ಭಾರತದ ಅಧಿಕೃತ ನಕ್ಷೆಯನ್ನು ಭಾರತ ಸರ್ಕಾರ ಪ್ರಕಟಿಸಿದೆ.
ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ ಹಾಗೂ ಒಂದು ರಾಷ್ಟ್ರಧ್ವಜ ಎಂಬ ಪರಿಕಲ್ಪನೆಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಿ, ಲಡಾಕ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಲಡಾಖ್ ವಿಭಾಗಕ್ಕೆ ಕಾರ್ಗಿಲ್ ಹಾಗೂ ಲೆಹ್ ಜಿಲ್ಲೆ ಸೇರಲಿದೆ. ಮಿಕ್ಕ ಎಲ್ಲಾ ಭಾಗಗಳು ಅಂದರೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್-ಬಾಲ್ಟಿಸ್ತಾನ ಎಲ್ಲವನ್ನು ಭಾರತದ ಗಡಿಯಲ್ಲಿ ಸೇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಒಕೆ ರಾಜಧಾನಿ ಮುಝಾಫರಬಾದ್ ಇದ್ದರೆ, ಲಡಾಖ್ ನೊಳಗೆ ಗಿಲ್ಬಿಟ್- ಬಾಲ್ಟಿಸ್ತಾನ ಸೇರಿದೆ.
ಕೇಂದ್ರಾಡಳಿತ ಪ್ರದೇಶ ಎಂಬುದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.

ಸಂವಿಧಾನದ 370ನೇ ಪರಿಚ್ಛೇದ ರದ್ದು
ಸಂವಿಧಾನದ 370ನೇ ಪರಿಚ್ಛೇದ ಜಾರಿ ಇದ್ದ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಖ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ.

ಅಕ್ಟೋಬರ್ 31, 2019ರಿಂದ ಜಾರಿ
ಇದರ ಜೊತೆಗೆ ಅರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಶೇ10ರಷ್ಟು ಮೀಸಲಾತಿ ಒದಗಿಸುವ ವಿಧೇಯಕವನ್ನು ಅಮಿತ್ ಶಾ ಮಂಡಿಸಿ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡರು. ಇದಕ್ಕೆ ಸರಳ ಬಹುಮತ ಸಾಕಾಗಿತ್ತು, ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ಹೊಸ ಸೌಲಭ್ಯವು ಅಕ್ಟೋಬರ್ 31, 2019ರಿಂದ ಜಾರಿಗೊಂಡಿದೆ.

1947ರಲ್ಲಿ ಮ್ಯಾಪ್ ಹೇಗಿತ್ತು
1947ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 14 ಜಿಲ್ಲೆಗಳಿದ್ದವು, ಕಥುವಾ, ಜಮ್ಮು, ಉಧಂಪುರ್, ರೇಸಿ, ಅನಂತ್ ನಾಗ್, ಬಾರಾಮುಲ್ಲಾ, ಪೂಂಛ್, ಮೀರ್ ಪುರ್, ಮುಜಫರಾಬಾದ್, ಲೇಹ್, ಲಡಾಖ್, ಗಿಲ್ಗಿಟ್, ಗಿಲ್ಗಿಟ್ ವಜರತ್, ಚಿಲಾಸ್ ಹಾಗೂ ಬುಡಕಟ್ಟು ಪ್ರದೇಶ.

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ
2019ರಲ್ಲಿ ಸರ್ಕಾರದ ಪ್ರಕಟಣೆಯ ನಕ್ಷೆಯಂತೆ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆಯಾಗಿದ್ದು, 14ರ ಬದಲಿಗೆ 28 ಜಿಲ್ಲೆಗಳಾಗಿವೆ. ಕುಪ್ವಾರ, ಬಂಡೀಪೋರ್, ಗಂದೇರ್ ಬಾಲ್, ಶ್ರೀನಗರ, ಪುಲ್ವಾಮಾ, ಶೋಪಿಯಾನ್, ಕುಲ್ಗಾಮ್, ರಜೋರಿ, ರಾಮ್ ಬಾನ್, ದೋಡಾ, ಕಿಶ್ತ್ ವಾರ್, ಸಾಂಬಾ ಹಾಗೂ ಕಾರ್ಗಿಲ್ ಹೊಸ ಸೇರ್ಪಡೆಯಾಗಿದೆ.

ಭಾರತದ ಒಟ್ಟು ರಾಜ್ಯಗಳು 28
* ಆಂಧ್ರಪ್ರದೇಶ
* ಅರುಣಾಚಲ ಪ್ರದೇಶ
* ಅಸ್ಸಾಂ
* ಬಿಹಾರ
* ಛತ್ತೀಸ್ ಗಢ
* ಗೋವಾ
* ಗುಜರಾತ್
* ಹರ್ಯಾಣ
* ಹಿಮಾಚಲ ಪ್ರದೇಶ
* ಜಾರ್ಖಂಡ್
* ಕರ್ನಾಟಕ
* ಕೇರಳ
* ಮಧ್ಯಪ್ರದೇಶ
* ಮಹಾರಾಷ್ಟ್ರ
* ಮಣಿಪುರ
* ಮೇಘಾಲಯ
* ಮಿಜೋರಾಂ
* ನಾಗಾಲ್ಯಾಂಡ್
* ಒಡಿಶಾ
* ಪಂಜಾಬ್
* ರಾಜಸ್ಥಾನ
* ಸಿಕ್ಕಿಂ
* ತಮಿಳುನಾಡು
* ತೆಲಂಗಾಣ
* ತ್ರಿಪುರ
* ಉತ್ತರಪ್ರದೇಶ
* ಉತ್ತರಾಖಂಡ್
* ಪಶ್ಚಿಮ ಬಂಗಾಳ

ಭಾರತದ ಕೇಂದ್ರಾಡಳಿತ ಪ್ರದೇಶಗಳು: 9
* ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
* ಚಂದೀಗಢ
* ದಾದ್ರ ಮತ್ತು ನಗರ್ ಹವೇಲಿ
* ದಮನ್ ಮತ್ತು ದಿಯು
* ಲಕ್ಷದ್ವೀಪ
* ಲಡಾಖ್
ವಿಧಾನಸಭೆ ಹೊಂದಬಹುದಾದ ಕೇಂದ್ರಾಡಳಿತ ಪ್ರದೇಶಗಳು
* ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ
* ಪುದುಚೇರಿ
* ಜಮ್ಮು ಮತ್ತು ಕಾಶ್ಮೀರ
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications