Best Employee: ಕೆಲಸ ಮಾಡುವ ಸ್ಥಳದಲ್ಲಿ ಆತಂಕ ಬೇಡ; ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಲಹೆಗಳು
ಹೊಸ ಪ್ರದೇಶ, ಜನ, ವಾತಾವರಣಕ್ಕೆ ಹೋದಾಗ ಸಹಜವಾಗಿ ಎಲ್ಲರಿಗೂ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುವುದು ಸಹಜ. ನಗರ ಪ್ರದೇಶದ ಜನ ಕೆಲವರು ಬೇಗನೆ ಹೊಸ ಜಾಗ, ಜವಾಬ್ದಾರಿ, ಕೆಲಸಕ್ಕೆ ಹೊಂದಿಕೊಂಡುಬಿಡುತ್ತಾರೆ. ಆದರೆ, ಗ್ರಾಮೀಣ ಭಾಗದ ಮಂದಿ ಹೊಂದಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಬಹುತೇಕ ಮಂದಿ ಆತಂಕದಿಂದ ಹೊಂದಿಕೊಳ್ಳಲಾಗದೆ ಆ ಪ್ರದೇಶದಿಂದಲೇ ಪಲಾಯನಗೈಯ್ಯುತ್ತಾರೆ.
ಸಾಮಾನ್ಯ ಸಂದರ್ಭಗಳಲ್ಲಿ ಕೆಲವು ಪ್ರದೇಶಗಳಿಂದ ಹೊರ ಹೋದರೆ ನಷ್ಟವೇನು ಇಲ್ಲ. ಆದರೆ, ಕೆಲಸ ಮಾಡುವ ವಾತಾವರಣದಲ್ಲಿ ಆತಂಕದಿಂದ ಹೊರಬಾರಲಾಗದಿದ್ದರೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಹೀಗಾಗಿ ಆತಂಕವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಚಿಕ್ಕ ಕೆಲಸಕ್ಕೂ ಇರಲಿ ಪ್ರಾಮುಖ್ಯತೆ
ಸಾಮಾನ್ಯವಾಗಿ ನಾವು ದೊಡ್ಡ ದೊಡ್ಡ ವಿಷಯ, ಕೆಲಸಗಳ ಬಗ್ಗೆ ಗಮನ ಕೊಡುವಷ್ಟು ಸಾಮಾನ್ಯ ಎನ್ನುವಂತಹ ಚಿಕ್ಕ ಚಿಕ್ಕ ಕೆಲಸಗಳ ಬಗ್ಗೆ ಅಷ್ಟೊಂದು ಗಮನ ಕೊಡುವುದಿಲ್ಲ. ಆದರೆ, ಆ ಚಿಕ್ಕ ವಿಷಯಗಳೆ ನಮಗೆ ಹಲವು ಬಾರಿ ಆತಂಕಕ್ಕೆ ದೂಡುತ್ತಿರುತ್ತವೆ.
ಉದಾಹರಣೆಗೆ ಹೇಳುವುದಾದರೆ, ಕಂಪೆನಿಯೊಂದರ ಎಚ್.ಆರ್ ಹುದ್ದೆಗೆ ಸಂದರ್ಶನಕ್ಕೆ ಹೋಗುವಾಗ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲದಕ್ಕೂ ತಯಾರಿ ಆಗಿರುತ್ತೇವೆ. ಆದರೆ, ದೈಹಿಕವಾಗಿ ನಮ್ಮನ್ನು ನಾವು ಸಂದರ್ಶಕರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ಸ್ವಲ್ಪ ಎಡವಿರುತ್ತೇವೆ. ಹಲ್ಲಿನ ಸ್ವಚ್ಛತೆ ಬಗ್ಗೆ ಕೆಲವರು ಕಾಳಜಿ ವಹಿಸುವುದಿಲ್ಲ, ದಂತ ವೈದ್ಯರಿಗೆ ಆ ಕರೆ ಹೋಗಲಾಡಿಸಲು ಐದು ನಿಮಿಷ ಸಾಕು. ಆದರೆ, ನಾವು ಹೋಗಿರುವುದಿಲ್ಲ. ಇನ್ನೇನು ಸಂದರ್ಶನಕ್ಕೆ ಹೋಗಬೇಕು ಎನ್ನುವ ಸಂದರ್ಭದಲ್ಲಿ ಆ ಹಲ್ಲುಗಳ ನೋಡಿ ನಮಗೆ ನಾವೆ ಕೀಳರಮೆ ಅನುಭವಿಸುತ್ತೇವೆ. ತಕ್ಷಣವೇ ಆತಂಕಕ್ಕೆ ಒಳಗಾಗುತ್ತೇವೆ. ಅದೊಂದು ಕೊರಗು ಸಂದರ್ಶಕರನ್ನು ಎದುರಿಸುವಾಗ ಕಾಡುತ್ತಿರುತ್ತದೆ.
ಬಟ್ಟೆಯ ಮೇಲಿರಲಿ ಕಾಳಜಿ
ನಾವು ತೊಡುವ ಉಡುಪು ದುಬಾರಿ ಬೆಲೆಯೊದ್ದೊ ಎನ್ನುವುದಕ್ಕಿಂತ ಆ ಬಟ್ಟೆ ನಮ್ಮ ದೇಹಕ್ಕೆ ಕಂಫರ್ಟ್ ಆಗಿದೆಯಾ ಅನ್ನುವುದು ಮುಖ್ಯವಾಗಿರುತ್ತದೆ. ದುಬಾರಿಯಾದರೂ ಅದು ನಮಗೆ ಸರಿಯಾಗಿ ಹೊಂದದಿದ್ದರೆ ಅಭಾಸವಾಗುತ್ತದೆ. ತೀರಾ ಬಿಗಿಯಾದ ಅಥವಾ ಸಡಿಲವಾದ ಬಟ್ಟೆಗಳ ಬದಲು ನಿಮಗೆ ಕಂಫರ್ಟ್ ಅನಿಸುವ, ನೋಡಲು ಆಕರ್ಷವಾಗಿಸುವ, ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತಹ ಬಟ್ಟೆಗಳನ್ನು ಧರಿಸುವತ್ತ ಗಮನಹರಿಸಿ.
ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಒಡನಾಟ
ನಾವು ಯಾರ ಜೊತೆಗೆ ಇರುತ್ತೇವೆಯೋ ಅವರಂತೆ ಆಗುತ್ತೇವೆ ಎಂಬುದು ಸುಪ್ರಸಿದ್ದವಾದ ನಾಣ್ಣುಡಿ. ಅದು ಅಕ್ಷರಶಃ ನಿಜವಾದ ಮಾತು. ನಾವು ನಮ್ಮ ನಮ್ಮ ಜೀವನದಲ್ಲಿ ಮಾಡಿ ಕಲಿಯುವುದು ಎಷ್ಟು ಇರುತ್ತದೆಯೋ ಅಷ್ಟೆ ನೋಡಿ ಕಲಿಯುವುದು ಅಷ್ಟೆ ಇರುತ್ತದೆ. ಹೀಗಾಗಿ ಉತ್ತಮ ವ್ಯಕ್ತಿತ್ವವುಳ್ಳವರ, ಆತ್ಮವಿಶ್ವಾಸವುಳ್ಳವರ, ಮಹಾತ್ವಾಕಾಂಕ್ಷೆವುಳ್ಳವರ ಜೊತೆಗಿದ್ದರೆ ದಿನ ಕಳೆದಂತೆ ನಾವು ಕೂಡ ಅದೇ ದಾರಿ ಸಾಗುವಂತೆ ಪ್ರೇರಣೆಯಾಗುತ್ತದೆ. ನಮ್ಮ ಸಮಸ್ಯೆಗಳನ್ನು, ಆತಂಕಗಳನ್ನು ಮುಕ್ತವಾಗಿ ಅವರೊಂದಿಗೆ ಹಂಚಿಕೊಂಡು ಬಗೆ ಹರಿಸಿಕೊಳ್ಳುವಂತಹ ಮನಃಸ್ಥಿತಿಯನ್ನು, ವಾತಾವರಣವನ್ನು ಸೃಷ್ಟಿಸಿಕೊಳ್ಳಿ.
ಕಲಿಕೆಗೆ ಕೊನೆಯಿಲ್ಲ!
ಅದು ಯಾವುದೇ ಕ್ಷೇತ್ರವಿರಲಿ. ಕಲಿಕೆ ಎನ್ನುವುದು ನಿರಂತರವಾದದ್ದು. ಅದರಲ್ಲೂ ದಿನ ದಿನಕ್ಕೂ ಹೊಸ ಹೊಸ ಆವಿಷ್ಕಾರಗಳಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ನಿಂತ ನೀರಿನಂತೆ ಇದ್ದರೆ ಒಂದೇ ದಿನದಲ್ಲಿ ಸಾಕಷ್ಟು ಹಿಂದೆ ಹೋಗಿಬಿಡುತ್ತೇವೆ. ಇದರಿಂದ ಕೆಲಸದಲ್ಲಿ ಎಡವಟ್ಟುಗಳಾಗುತ್ತವೆ. ಸಹಜವಾಗಿ ನಮ್ಮ ಮುಖದಲ್ಲಿ. ಮಾತಿನಲ್ಲಿ ಆತಂಕ ಎನ್ನುವುದು ಸುಲಭವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಆತಂಕ ನಿವಾರಣೆಯಾಗಬೇಕಾದರೆ ನಿರಂತರವಾದ ಕಲಿಕೆಯೊಂದೆ ಸೂತ್ರವಾಗಿದೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications