ಉಚಿತವಾಗಿ "ಏನ್ರೀ ಮೀಡಿಯಾ" ಶರ್ಟ್ ವಿತರಣೆ: ಈ ಸಮಾಜ ಸೇವೆಗೆ ಸಿಕ್ಕಿದ್ದೇನು ಗೊತ್ತಾ?
ದರ್ಶನ್ ಅವರದ್ದು ಎನ್ನಲಾದ ಏನ್ರೀ ಮೀಡಿಯಾ ಡೈಲಾಗ್ ಹಲವು ವರ್ಷಗಳಷ್ಟು ಹಳೆಯದಾದ್ರೂ ಅದು ಟ್ರೆಂಡ್ ಆಗಿದ್ದು ಇತ್ತೀಚೆಗೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ ಬಳಿಕ ಅವರ ಕಟ್ಟಾಭಿಮಾನಿಗಳು ಮಾಧ್ಯಮಗಳ ಮೇಲೆ ಮುಗಿಬಿದ್ದಿದ್ದರು. ನಟನಿಗೆ ಹೀಗಾಯ್ತಲ್ಲ ಅಂತ ನೋವಿನಲ್ಲಿ ಎಲ್ಲೆಲ್ಲೂ ಏನ್ರೀ ಮೀಡಿಯಾ ಅನ್ಕೊಂಡು ತಿರುಗಾಡ್ತಿದ್ರು. ಈಗ ಏನ್ರೀ ಮೀಡಿಯಾ ಅಂದೋರ ಕಥೆ ಪೊಲೀಸ್ ಠಾಣೆವರೆಗೆ ಕರೆದೊಯ್ದಿದೆ.
ನಟನ ಮೇಲಿನ ಅಭಿಮಾನದ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಸಿಕ್ಕದಕ್ಕೆಲ್ಲ ಏನ್ರೀ ಮೀಡಿಯಾ ಅಂತಿದ್ರು. ಗಾಡಿಗಳ ಮೇಲೆ ಸ್ಟಿಕರ್ ಕೂಡ ಹಾಕಿಸಿಕೊಂಡು ಮೆರೆಯುತ್ತಿದ್ರು. ಇದಕ್ಕೆ ಆಗಾಗ ತಕ್ಕ ಶಾಸ್ತಿಯೇನೋ ಆಗುತ್ತಿತ್ತು. ಆದರೆ ಮೈಸೂರಿನಲ್ಲಿ ಏನ್ರೀ ಮೀಡಿಯಾ ಹೆಸರಲ್ಲಿ ಎಲ್ಲರ ಗಮನ ಸೆಳೆಯೋಣ ಅಂತ ಮಾಡಿರೋ ಪ್ಲ್ಯಾನ್ ಇದೀಗ ಅವರನ್ನು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

ಈ ಏನ್ರೀ ಮೀಡಿಯಾ ಎಲ್ಲಿಂದ ಶುರುವಾಯ್ತೋ ಅದೇ ಸೋಶಿಯಲ್ ಮೀಡಿಯಾದಿಂದಲೇ ಆಪತ್ತು ತಲೆ ಮೇಲೆ ಎಳೆದುಕೊಂಡಿದ್ದಾರೆ. ಮೈಸೂರಿನ ಬೋಗಾದಿಯಲ್ಲಿರುವ ಬಟ್ಟೆ ಅಂಗಡಿಯವರು ದೊಡ್ಡ ಸ್ಟಾರ್ ಆಗಲು ಹೊರಟು, ಪೊಲೀಸರ ಅತಿಥಿಗಳಾಗಿದ್ದಾರೆ. ಈ ಮಳಿಗೆಯವರು ನಾವು ಏನ್ರೀ ಮೀಡಿಯಾ ಅನ್ನೋ ಟೀಶರ್ಟ್ನ ಫ್ರೀಯಾಗಿ ಕೊಡ್ತೀವಿ ಎಂದು ವಿಡಿಯೋ ಶೇರ್ ಮಾಡಿದ್ದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಏನ್ರೀ ಮೀಡಿಯಾ ಎಂದು ಪ್ರಿಂಟ್ ಆಗಿದ್ದ ಟೀಶರ್ಟ್ಗಳನ್ನು ಪ್ರದರ್ಶಿಸಿ, ಇದನ್ನು ಉಚಿತವಾಗಿ ಕೊಡ್ತೀವಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದನ್ನು ಕಂಡು ನೂರಾರು ಮಂದಿ ಟೀಶರ್ಟ್ಗಾಗಿ ಅಂಗಡಿ ಬಳಿ ಸೇರಿಕೊಂಡಿದ್ದರು. ಸಮಯ ಕಳೆದಂತೆ ಬಟ್ಟೆ ಅಂಗಡಿ ಬಳಿ ಯುವಕರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಟೀಶರ್ಟ್ ಆಸೆಗಾಗಿ ನೂಕುನುಗ್ಗಲು ಕೂಡ ಶುರುವಾಗಿತ್ತು.
ಇದು ಪೊಲೀಸರ ಗಮನಕ್ಕೆ ಬಂದಿತ್ತು. ಅಲ್ಲಿನ ಜನರ ನೂಕುನುಗ್ಗಲು ವಿಡಿಯೋ ಕೂಡ ವೈರಲ್ ಆಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಬಟ್ಟೆ ಅಂಗಡಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಏನ್ರೀ ಮೀಡಿಯಾ ಅಂದೋರನ್ನ ಪೊಲೀಸರು ಏನ್ರೀ ನಿಮ್ ಕಥೆ ಎಂದು ವಿಚಾರಿಸಿಕೊಂಡಿದ್ದಾರೆ.

ಬೋಗಾದಿಯ ಸಿಎಫ್ಟಿಆರ್ಐ ಬಡಾವಣೆಯ ಮಳಿಗೆಯಲ್ಲಿ ಹಂಚುತ್ತಿದ್ದ ಫ್ರೀ ಟೀಶರ್ಟ್ ಪಡೆಯಲು ನೂರಾರು ಯುವಕರು ತಳ್ಳಾಟ ನಡೆಸಿದ್ದರು. ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಅಂಗಡಿ ಮಾಲೀಕ ಮಂಜುನಾಥ್ ವಿರುದ್ಧ ಸರಸ್ವತಿಪುರಂ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಫಂಕಿ ವರ್ಲ್ಡ್ ಎನ್ನುವ ತಂಡದವರು ಚಾಮುಂಡಿ ಬೆಟ್ಟದಲ್ಲಿ 'ಏನ್ರೀ ಮೀಡಿಯಾ' ಎನ್ನುವ ಹೆಸರಿದ್ದ ಟೀಶರ್ಟ್ ಕೊಡ್ತೀವಿ ಎಂದು ವಿಡಿಯೋ ಮಾಡಿದ್ದರು. ಅದನ್ನು ನೋಡಿ ನೂರಾರು ಯುವಕರು ಮಳಿಗೆಯ ಬಳಿ ಜಮಾಯಿಸಿದ್ದರು. ಇವರ ನೂಕುನುಗ್ಗಲಿನಿಂದ ಸಾರ್ವಜನಿಕರ ಸಂಚಾರಕ್ಕೂ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
-
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು: ಎರಡು ಬೌಂಡರಿಗಳ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಬೂಮ್ರಾ ಬೇಸರ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
High Speed Rail: ಬೆಂಗಳೂರು-ಹೈದರಾಬಾದ್ ತಲುಪಲು 2 ಗಂಟೆ ಸಾಕು, 3 ಕಡೆ ಎಂಟ್ರಿ, ಮಹತ್ವದ ಅಪ್ಡೇಟ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ












Click it and Unblock the Notifications