Sucess: ಸಾಧನೆಗೆ ಈ ಒಂದು ಸರಳ ಸೂತ್ರ ಅನುಸರಿಸಿ...!
ಬಡವನಾಗಿ ಹುಟ್ಟುವುದು ಯಾರೊಬ್ಬರ ಆಯ್ಕೆಯಾಗಿರುವುದಿಲ್ಲ. ಆದರೆ, ಬಡವನಾಗಿಯೇ ಜೀವಿಸುವುದು, ಸಾಯುವುದು ಬಹುತೇಕ ನಮ್ಮದೇ ತಪ್ಪು ಆಯ್ಕೆ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಈಗಾಗಲೇ ಸಾಧಕರಾಗಿರುವವರ ಪಟ್ಟಿಯನ್ನು ಗಮಹಿಸಿದರೆ ಬಹುತೇಕರು ಬಡತನದಲ್ಲಿ ಹುಟ್ಟಿ ತಮ್ಮ ಸ್ವಪ್ರಯತ್ನದಿಂದ ಸಾಧಕರ ಹಂತಕ್ಕೆ ತಲುಪಿರುತ್ತಾರೆ. ಅಂತಹ ಸಾಧನೆಗೆ ಬಹುಮುಖ್ಯವಾಗಿ ಈ ಒಂದು ಸರಳ ಸೂತ್ರ ಕಡ್ಡಾಯವಾಗಿ ಪಾಲಿಸುತ್ತಾರೆ. ಅದು ಯಾವುದು ಅಂತಿರಾ, ಈ ಸ್ಟೋರಿ ನೋಡಿ.
ಮುಂಜಾನೆಯ ಆರಂಭ
ಸೂರ್ಯ ಸಂಜೆ ಮುಳುಗಿ, ಬೆಳಗ್ಗೆ ಏಳುವಾಗ ಹೊಸ ಪ್ರಪಂಚವನ್ನೆ ಸೃಷ್ಟಿಯಾಗಿರುತ್ತದೆ. ಪ್ರತಿದಿನವೂ ಹೂ ಗಿಡಗಳಲ್ಲಿ ಹೂವುಗಳು ಅರಳುವಂತೆ ಮಾಡುತ್ತಾನೆ. ಕಾಯಿಗಳು ಹಣ್ಣಾಗುತ್ತವೆ. ಇದಕ್ಕಾಗಿಯೇ ಕಾದು ಕುಳಿತಿರುವ ಹಕ್ಕಿಗಳು ಆ ದಿನದ ಹಣ್ಣುಗಳನ್ನು ತಿಂದು, ನಾಳೆಯ ಹೊಸ ಹಣ್ಣಿಗಾಗಿ ಕಾದಿರುತ್ತದೆ. ಈ ಹೂವು ಬಿಡುವುದು ಸೇರಿದಂತೆ ಎಲ್ಲ ಫಲವತ್ತತೆಯ ಪ್ರಕ್ರಿಯೆಯು ಬೆಳಗ್ಗೆಯೇ ಘಟಿಸುವುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ.

ಮುಂಜಾನೆಯೇ ಏಳುವ ಅಭ್ಯಾಸ
ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ದಾಪುಗಾಲು ಇಟ್ಟಿರುವ ಬಹುತೇಕರ ಜೀವನ ವಿಧಾನವನ್ನು ಗಮನಿಸಿದ್ದೆ ಆದರೆ, ಅವರ ದಿನನಿತ್ಯದ ಚುಟುವಟಿಕೆಯು ಬೆಳಗ್ಗೆ 4 ರಿಂದ 5 ಗಂಟೆಯೊಳಗೆ ಪ್ರಾರಂಭವಾಗುತ್ತದೆ. ಇಡೀ ಪ್ರಕೃತಿ ನಮ್ಮ ಚಿಂತನೆಗಳಿಗೆ, ಯೋಜನೆಗಳಿಗೆ ಅಸ್ತು ಎನ್ನಲು ಕಾದುಕುಳಿತಿರುವಂತಹ ಸಮಯ ಅದಾಗಿರುತ್ತದೆ. ಈ ಸಮಯದಲ್ಲಿ ನಾವು ಏನೇ ಯೋಜನೆ ಮಾಡಿದರೂ ಅದು ಯಶಸ್ವಿಯಾಗುವು ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಯಶಸ್ವಿ ಉದ್ಯಮಿಗಳ ಅಭಿಪ್ರಾಯವಾಗಿದೆ.
ಪಾಸಿಟಿವ್ ಎನರ್ಜಿಯ ಸಮಯ
ಬೆಳಗ್ಗೆ 4, 5ಗಂಟೆಯ ಸಮಯದಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಶುದ್ಧವಾದ ಗಾಳಿ ಸೇವನೆ ಮಾಡುತ್ತಿದ್ದಂತೆ ಮೆದುಳು ಚುರುಕಾಗುತ್ತದೆ. ಹಾಗೆಯೇ ಒಂದಷ್ಟು ಹೊತ್ತು ಧ್ಯಾನ ಮಾಡಿದರೆ ಪಾಸಿಟಿವ್ ಎನರ್ಜಿ ಸಿಗುತ್ತದೆ. ಈ ಎನರ್ಜಿ ಇಡೀ ದಿನ ನಮ್ಮೊಳಗಿದ್ದು ನಮ್ಮೆಲ್ಲ ಕೆಲಸಗಳು ಸರಾಗವಾಗಿ ಆಗುವಂತೆ ಪ್ರೇರೇಪಿಸುತ್ತದೆ.
ಪ್ರಕೃತಿ ಜೊತೆ ಬೆರೆಯಲು ಸಕಾಲ
ಪ್ರಕೃತಿಯನ್ನು ನಾವು ಗುರುವೆಂದು ಭಾವಿಸಿದರೆ, ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಚಲನವಲನಗಳಿಂದಲೂ ಏನನ್ನಾದರು ಕಲಿಯಬಹುದು. ಈ ಕಲಿಕೆಗೆ ಸೂಕ್ತವಾದ ಸಮಯವೆಂದರೆ ಅದು ಬೆಳಗ್ಗೆಯೇ ಆಗಿರುತ್ತದೆ. ಕೋಳಿ ಕೂಗುವುದು, ಹಕ್ಕಿಗಳು ಚಿಲಿಪಿಲಿ ಗುಟ್ಟುವುದು, ಹೂ ಹರಳುವುದು ಬೆಳಗ್ಗೆಯೇ ಆಗಿದೆ. ಅವುಗಳಿಗೆಯೇ ಬೆಳಗ್ಗೆ ಎಂಬುದು ಅಮೃತಗಳಿಗೆಯೆಂದು ತಿಳಿದಿರುವಾಗ ಬುದ್ಧಿವಂತರೆಂದು ಹೇಳಿಕೊಳ್ಳುವ ನಾವು ಬೆಳಗಿನ ಸಮಯದ ಪ್ರಾಮುಖ್ಯತೆಯನ್ನು ಅರಿಯದಿದ್ದರೆ ಹೇಗೆ. ನಮ್ಮೆಲ್ಲ ಸಾಧನೆಗೆ ಬೆಳಗ್ಗೆ 5ರಲ್ಲಿದೆ ಗುಟ್ಟು ಎಂದರೆ ತಪ್ಪಾಗಲಾರದು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications