ಮದುವೆ ಮನೆಗೂ ಬಂತು ಬುಲ್ಡೋಜರ್: ಅಳಿಯನಿಗೆ ಮಾವ ಕೊಟ್ಟ ಉಡುಗೊರೆ
ಹಮೀರ್ಪುರ ಡಿಸೆಂಬರ್ 17: ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. ಅದರ ಬಗ್ಗೆ ಕೇಳಿದರೆ ನೀವು ಶಾಕ್ ಆಗ್ತೀರಾ. ವಾಸ್ತವವಾಗಿ, ಹುಡುಗಿಯ ತಂದೆ ವರನಿಗೆ ಬೈಕು ಅಥವಾ ಕಾರನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಹಮೀರ್ಪುರ ಜಿಲ್ಲೆಯಲ್ಲಿ ವಧುವಿನ ತಂದೆ ವರ ಯೋಗೇಂದ್ರನಿಗೆ 'ಬುಲ್ಡೋಜರ್' ಉಡುಗೊರೆಯಾಗಿ ನೀಡಿದ್ದಾರೆ. ವರದಕ್ಷಿಣೆಗಾಗಿ ಬುಲ್ಡೋಜರ್ಗಳನ್ನು ವರದಕ್ಷಿಣೆಯಾಗಿ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮದುವೆಯಲ್ಲಿ ವರನಿಗೆ ಬುಲ್ಡೋಜರ್ ಕೊಡುವ ಮೊದಲ ಪ್ರಕರಣ ಇದಾಗಿದೆ. ಹೀಗಾಗಿ ಈ ಮದುವೆ ಆ ಪ್ರದೇಶದಲ್ಲಿ ಮಾತ್ರವಲ್ಲದೆ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ. ಯುಪಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬುಲ್ಡೋಜರ್ಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಆದರೆ, ಈಗ ಬುಲ್ಡೋಜರ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮದುವೆಯಲ್ಲಿ ವರನಿಗೆ ಬುಲ್ಡೋಜರ್ ನೀಡಿದ ನಂತರ ಈ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಹಮೀಪುರ್ ಜಿಲ್ಲೆಯ ಡೆವೆಲಪ್ಮೆಂಟ್ ಬ್ಲಾಕ್ನ ಸುಮೇರ್ಪುರ ಗ್ರಾಮ ದೇವಗಾಂವ್ನಲ್ಲಿ ಈ ವಿಶಿಷ್ಟ ವಿವಾಹ ನಡೆದಿದೆ. ವರದಿಗಳ ಪ್ರಕಾರ, ಗ್ರಾಮದ ನಿವಾಸಿ ನಿವೃತ್ತ ಯೋಧ ಪರಶುರಾಮ್ ಅವರ ಪುತ್ರಿ ನೇಹಾ ಅವರನ್ನು ಡಿಸೆಂಬರ್ 15 ರಂದು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ಸೋಂಖಾರ್ ನಿವಾಸಿ ಯೋಗೇಂದ್ರ ಅಲಿಯಾಸ್ ಯೋಗಿ ಪ್ರಜಾಪತಿ ಅವರೊಂದಿಗೆ ವಿವಾಹ ಮಾಡಲಾಗಿತ್ತು. ಸುಮೇರ್ಪುರದ ಅತಿಥಿಗೃಹದಲ್ಲಿ ವಿವಾಹ ಸಮಾರಂಭ ನಡೆಯಿತು. ಮದುವೆಯಲ್ಲಿ ನಿವೃತ್ತ ಯೋಧ ವರದಕ್ಷಿಣೆಯಲ್ಲಿ ವರನಿಗೆ ಐಷಾರಾಮಿ ಕಾರು ನೀಡದೆ ಬುಲ್ಡೋಜರ್ ನೀಡಿದ್ದಾನೆ.

ಡಿಸೆಂಬರ್ 16 ರಂದು ಮಗಳು ಬುಲ್ಡೋಜರ್ನಲ್ಲಿ ಕುಳಿತು ಗಂಡನ ಮನೆಗೆ ಹೊರಟಾಗ ಜನರು ಅದನ್ನು ಕಣ್ತುಂಬಿಕೊಳ್ಲುತ್ತಿದ್ದರು. ಮಗಳು ಪ್ರಸ್ತುತ ಯುಪಿಎಸ್ಸಿಗೆ ತಯಾರಿ ನಡೆಸುತ್ತಿದ್ದಾಳೆ ಎಂದು ನೇಹಾ ತಂದೆ ಪರಶುರಾಮ್ ಪ್ರಜಾಪತಿ ಹೇಳುತ್ತಾರೆ. ಕಾರು ಕೊಟ್ಟರೆ ನಿಂತಿರುತ್ತಿತ್ತು, ಬುಲ್ಡೋಜರ್ ಕೆಲಸ ಮಾಡುತ್ತೆ, ನನ್ನ ಮಗಳಿಗೆ ಬೆಲೆ ಸಿಗುತ್ತೆ ಎಂದರು. ಮತ್ತೊಂದೆಡೆ, ಯೋಗಿ ಪಡೆದ ಬುಲ್ಡೋಜರ್ನ ಚರ್ಚೆ ಜನರ ಬಾಯಲ್ಲಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications