ಪಿಎಂ ಕಿಸಾನ್ಗೆ ಇ-ಕೆವೈಸಿ ಕಡ್ಡಾಯ; ಅಪ್ಡೇಟ್ ಮಾಡುವುದು ಹೇಗೆ?
ರೈತರ ಸಬಲೀಕರಣಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇ-ಕೆವೈಸಿ ಮಾಡಿಸುವುದು ಈಗ ಬಹಳ ಮುಖ್ಯವಾಗಿದೆ. ಸರ್ಕಾರವು ಮತ್ತೆ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಅಡಿಯಲ್ಲಿ ರೈತರು ಇ-ಕೆವೈಸಿ ಪೂರ್ಣಗೊಳಿಸಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆಯಬೇಕು.
ಒಂದು ವೇಳೆ ಇ-ಕೆವೈಸಿಯನ್ನು ಮಾಡಿಸುವುದನ್ನು ಬಿಟ್ಟರೆ ಸರ್ಕಾರದ ಯೋಜನೆ ಪ್ರಯೋಜನ ಪಡೆದುಕೊಳ್ಳುವಲ್ಲಿ ವಿಳಂಬವಾಗಲಿದೆ ಹಾಗೂ ಅನೇಕ ಸಮಸ್ಯೆಗಳನ್ನು ರೈತರು ಎದುರಿಸಬೇಕಿದೆ. ಹಾಗಾಗಿ ಇ-ಕೆವೈಸಿ ಮಾಡಲು ಜುಲೈ 31ರವರಿಗೆ ಸರ್ಕಾರ ಗಡುವು ನೀಡಿದೆ.
ರೈತರು ಇ-ಕೆವೈಸಿ ಪ್ರಕ್ರಿಯೆಯು ಮುಂದಿನ 5 ದಿನದಲ್ಲಿ ಜುಲೈ 31ರೊಳಗೆ ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಪಿಎಂ ಕಿಸಾನ್ ಹಣ ಸಿಗುವುದಿಲ್ಲ. ಇ-ಕೆವೈಸಿ ಇಲ್ಲದಿದ್ದರೆ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನಿಂದ ವಂಚಿತರಾಗಬಹುದು. ಹಾಗಾಗಿ ರೈತರು ಇ-ಕೆವೈಸಿ ಹೇಗೆ ಮಾಡಬೇಕಾಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ದೇಶದಲ್ಲಿ ಎಲ್ಲೋ ಒಂದು ಕಡೆ ಬರಗಾಲದಂತಹ ಪರಿಸ್ಥಿತಿ ಮತ್ತು ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಿಎಂ ಕಿಸಾನ್ನ 12ನೇ ಕಂತು ಅವರ ನೋವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಆಗಸ್ಟ್ನಲ್ಲಿ ಹಣ ಬಿಡುಗಡೆಯಾದಾಗ ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ರೈತರು ಯೋಜನೆಯಡಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಪಿಎಂ ಕಿಸಾನ್ನ 12ನೇ ಅಥವಾ ಮುಂದಿನ ಕಂತುಗಾಗಿ ಕೋಟ್ಯಾಂತರ ರೈತರು ಕಾಯುತ್ತಿದ್ದಾರೆ. ಈ ವರ್ಷ ಏಪ್ರಿಲ್-ಜುಲೈ ತಿಂಗಳ ಕಂತು ಕೇವಲ 10,83,69,179 ರೈತರ ಖಾತೆಗಳಿಗೆ ತಲುಪಿದೆ. ಆದರೆ ಹಿಂದಿನ ಕಂತು 11,14,85,888 ರೈತರ ಖಾತೆಗಳಿಗೆ ತಲುಪಿದೆ. ಆಧಾರ್ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿರುವುದು ಕಂತು ವಿಳಂಬದ ಹಿಂದಿನ ದೊಡ್ಡ ಕಾರಣ. ಇ-ಕೆವೈಸಿ ತಪ್ಪಿದರೆ, ಈ ಬಾರಿ ಹಲವು ರೈತರ ಕೈಗೆ ಹಣ ಸಿಗುವುದಿಲ್ಲ.

ಪಿಎಂ ಕಿಸಾನ್ ಇ-ಕೆವೈಸಿಗೆ ರೈತರಿಗೆ ಮನವಿ
ಕರ್ನಾಟಕ ಸರ್ಕಾರವು ಪಿಎಂ ಕಿಸಾನ್ ಇ-ಕೆವೈಸಿಯ ಕುರಿತು ಮಾಹಿತಿ ನೀಡಿದ್ದು ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡಿದೆ. ಆಗಸ್ಟ್, ನವಂಬರ್ ಆರ್ಥಿಕ ನೆರವನ್ನು ರೈತರು ಪಡೆದುಕೊಳ್ಳಲು ಆರ್ಥಿಕ ವರ್ಗಾವಣೆಗಾಗಿ ಮುಂದಿನ ಐದು ದಿನಗಳ ಅಂದರೆ 31 ಜುಲೈ, 2022ರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರಿಗೆ ಮನವಿ ಮಾಡಲಾಗಿದೆ. 12ನೇ ಕಂತಿಗೆ ಇ-ಕೆವೈಸಿ ಅಗತ್ಯವಾಗಿದ್ದು ರೈತರು ಕೂಡಲೇ ಹತ್ತಿರದ ಗ್ರಾಮ ಪಂಚಾಯತಿ ಹಾಗೂ ಅಥವಾ ಸೈಬರ್ ಕೇಂದ್ರಗಳಿಗೂ ಭೇಟಿ ನೀಡಿ ನೀವು ಇ-ಕೆವೈಸಿಯನ್ನು ಪೂರ್ಣಗೊಳಿಸಿಬಹುದು.
ಇತ್ತೀಚೆಗೆ ಕೇಂದ್ರ ಸರ್ಕಾರವು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ ಆದರೆ ಈಗ ರೈತರು 12 ನೇ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಹಾಗಾಗಿ ರೈತರು ಬಹುಬೇಗ ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ರೀತಿ ಇ-ಕೆವೈಸಿ ಪೂರ್ಣಗೊಳಿಸಿ.
ರೈತರು ನಾಗರಿಕ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಇ-ಕೆವೈಸಿಯನ್ನು ಹಾಗೂ ಒಟಿಪಿ (ಸಂದೇಶ ಆಧಾರಿತ OTP)ಆಧಾರಿತ ಇ-ಕೆವೈಸಿಯನ್ನು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಪೊರ್ಟಲ್ನ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಲು ಕೋರಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಸಮಸ್ಯೆಯಿಂದಾಗಿ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಕಛೇರಿಗಳನ್ನು ತಪ್ಪದೇ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ರೈತರು ಇ-ಕೆವೈಸಿಗೆ ಮಾಡಬಹುದು
ರೈತರು 2 ರೀತಿಯಲ್ಲಿ ಇ-ಕೆವೈಸಿ ಮಾಡಬಹುದು. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಇ-ಕೆವೈಸಿಯನ್ನು ಸಹ ನೀವು ಪಡೆಯಬಹುದು ಮತ್ತು ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ಮಾಧ್ಯಮದ ಮೂಲಕ ನಿಮ್ಮ ಇ-ಕೆವೈಸಿಯನ್ನು ಮಾಡಬಹುದು.
ಹಂತ 1: ಇದಕ್ಕಾಗಿ, ಮೊದಲು ಗೊಗಲ್ನಂತಹ ನಿಮ್ಮ ಮೊಬೈಲ್ ಫೋನ್ ಬ್ರೌಸರ್ನ ಐಕಾನ್ನ್ನು ಟ್ಯಾಪ್ ಮಾಡಿ ಮತ್ತು ಅಲ್ಲಿ pmkisan.gov.in ಎಂದು ಟೈಪ್ ಮಾಡಿ. ಈಗ ನೀವು PM ಕಿಸಾನ್ ಪೋರ್ಟಲ್ನ ಮುಖಪುಟವನ್ನು ಪಡೆಯುತ್ತೀರಿ, ಅದರ ಕೆಳಭಾಗಕ್ಕೆ ಹೋಗಿ ಮತ್ತು ನೀವು ಇ-ಕೆವೈಸಿ ಬರೆಯುವುದನ್ನು ಕಾಣಬಹುದು. ಇದನ್ನು ಟ್ಯಾಪ್ ಮಾಡಿ ಮತ್ತು ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ 2: ಈಗ ಅದರಲ್ಲಿ ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ 4 ಅಂಕಿಗಳ OTP ಬರುತ್ತದೆ. ಒದಗಿಸಿದ ಪೆಟ್ಟಿಗೆಯಲ್ಲಿ ಅದನ್ನು ಟೈಪ್ ಮಾಡಿ.
ಹಂತ 3: ಇದರ ನಂತರ ಮತ್ತೊಮ್ಮೆ ಆಧಾರ್ ದೃಢೀಕರಣಕ್ಕಾಗಿ ಬಟನ್ ಅನ್ನು ಟ್ಯಾಪ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಅದನ್ನು ಟ್ಯಾಪ್ ಮಾಡಿ ಮತ್ತು ಈಗ ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಮತ್ತೊಂದು 6 ಅಂಕಿಯ OTP ಬರುತ್ತದೆ. ಅದನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಟ್ಯಾಪ್ ಮಾಡಿ.
ಎಲ್ಲವೂ ಸರಿಯಾಗಿ ನಡೆದರೆ ಇ-ಕೆವೈಸಿ ಪೂರ್ಣಗೊಳ್ಳುತ್ತದೆ ಇಲ್ಲದಿದ್ದರೆ ಅಮಾನ್ಯವಾಗುತ್ತದೆ. ಇದು ಸಂಭವಿಸಿದಲ್ಲಿ ನಿಮ್ಮ ಕಂತು ವಿಳಂಬವಾಗಬಹುದು. ನೀವು ಅದನ್ನು ಆಧಾರ್ ಸೇವಾ ಕೇಂದ್ರದಲ್ಲಿ ಸರಿಪಡಿಸಿಕೊಳ್ಳಬಹುದು. ನಿಮ್ಮ ಇ-ಕೆವೈಸಿಯು ಈಗಾಗಲೇ ಪೂರ್ಣಗೊಂಡಿದ್ದರೆ, ಇ-ಕೆವೈಸಿಯ ಈಗಾಗಲೇ ಮುಗಿದಿದೆ ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದಲ್ಲಿ 12 ಕೋಟಿ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ

ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ..
pmkisan.gov.inಗೆ ಹೋಗಿ ಮತ್ತು e-kyc ಆಯ್ಕೆಯನ್ನು ಆರಿಸಿ
ಈಗ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದರ ನಂತರ ಆಧಾರ್ OTP ಬರುತ್ತದೆ
ಆಧಾರ್ ಒಟಿಪಿ ಭರ್ತಿ ಮಾಡಿದ ನಂತರ ಪ್ರಕ್ರಿಯೆ ಪೂರ್ಣವಾಗುತ್ತದೆ.
ರೈತರು ಮತ್ತೆ ಸ್ಥಿತಿಯನ್ನು ಪರಿಶೀಲಿಸಲು ಈ ವಿಧಾನವನ್ನು ಅನುಸರಿಸಿಬೇಕಾಗುತ್ತದೆ ಪಿಎಂ ಕಿಸಾನ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ನೀವು ಈ ವಿಧಾನವನ್ನು ಬಳಸಬಹುದು. ಮೊದಲಿಗೆ ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in ಭೇಟಿ ನೀಡಬೇಕು ನಂತರ ಇಲ್ಲಿ ನೀವು ರೈತರ ಕಾರ್ನರ್ ಆಯ್ಕೆಯನ್ನು ಕಾಣಸಿಕೊಳ್ಳುತ್ತದೆ ರೈತರ ಕಾರ್ನರ್ ವಿಭಾಗದಲ್ಲಿ ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ಡ್ರಾಪ್-ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ಇದಾದ ನಂತರ, ನೀವು 'ರಿಪೋರ್ಟ್ ಪಡೆಯಿರಿ' ಇದ್ದನ್ನು ಕ್ಲಿಕ್ ಮಾಡಿದ ತಕ್ಷಣವೇ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ಪಿಎಂ ಕಿಸಾನ್ ಸಹಾಯವಾಣಿ ಸೇವೆಗಳು
ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
ಪಿಎಂ ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
ಪಿಎಂ ಕಿಸಾನ್ನ ಹೊಸ ಸಹಾಯವಾಣಿ: 011-24300606
ಪಿಎಂ ಕಿಸಾನ್ ಮತ್ತೊಂದು ಸಹಾಯವಾಣಿ: 0120-6025109
ಇ-ಮೇಲ್ ಐಡಿ: [email protected]
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications