ವಿವಾದದಲ್ಲಿ ದೃಷ್ಟಿ ಐಎಎಸ್ ಸಂಸ್ಥಾಪಕ ವಿಕಾಸ್, ಯಾರು ಈ ದಿವ್ಯಕೀರ್ತಿ?
ನವದೆಹಲಿ, ನವೆಂಬರ್ 13: ದೇಶದ ಅಗ್ರಗಣ್ಯ ಐಎಎಸ್ ತರಬೇತುದಾರರಲ್ಲಿ ಒಬ್ಬರಾದ ವಿಕಾಸ್ ದಿವ್ಯಕೀರ್ತಿ ಅವರು ತಮ್ಮ ತರಬೇತಿ ನೀಡುತ್ತಿರುವ ವಿಡಿಯೋಗಳಲ್ಲಿ ಒಂದರಲ್ಲಿ ಸೀತೆ ಕುರಿತು ಟೀಕೆಗಳನ್ನು ಮಾಡಿದ ಆರೋಪದ ಮೇಲೆ ವಿವಾದಕ್ಕೆ ಒಳಗಾಗಿದ್ದಾರೆ.
ಇದರಲ್ಲಿ ಭಗವಾನ್ ರಾಮನು ಸೀತಾ ದೇವಿಯನ್ನು ನಾಯಿ ನೆಕ್ಕಿದ ತುಪ್ಪದೊಂದಿಗೆ ಹೋಲಿಸುವ ಪ್ಯಾರಾಗ್ರಾಫ್ ಅನ್ನು ದಿವ್ಯಕೀರ್ತಿ ಪುಸ್ತಕದಿಂದ ಉಲ್ಲೇಖಿಸುವುದನ್ನು ವಿಡಿಯೋದಲ್ಲಿ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ವಿಕಾಸ್ ದಿವ್ಯಕೀರ್ತಿ ಯಾರು? ಯಾಕೆ ಅವರು ಅಷ್ಟು ಪ್ರಸಿದ್ಧನಾಗಿದ್ದಾರೆ? ವಿವಾದದ ನಡುವೆ ಅವರು ಹೇಗೆ ಸಿಲುಕಿಕೊಂಡರು? ಎಂದು ನೋಡೋಣ.
ಡಾ ವಿಕಾಸ್ ದಿವ್ಯಕೀರ್ತಿ ಅವರು ದೇಶದ ಅತ್ಯಂತ ಜನಪ್ರಿಯ ಶಿಕ್ಷಕರಲ್ಲಿ ಒಬ್ಬರು. ದೃಷ್ಟಿ ಐಎಎಸ್ ಎಂಬ ದೆಹಲಿ ಮೂಲದ ಐಎಎಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಪ್ರಿಯರಾಗಿದ್ದಾರೆ. ಅವರು ತಮ್ಮ ಯೂಟ್ಯೂಬ್ ಚಾನಲ್ಗಳಲ್ಲಿ 10 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಅವರ ಧ್ವನಿಮುದ್ರಿತ ಉಪನ್ಯಾಸಗಳನ್ನು ಪ್ರತಿದಿನ ಲಕ್ಷಾಂತರ ಮಂದಿ ವೀಕ್ಷಣೆ ಮಾಡುತ್ತಾರೆ.
ದಿವ್ಯಕೀರ್ತಿ ಅವರ ತಂಡವು ಈ ಉಪನ್ಯಾಸಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತದೆ. ಅವರು ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ, ಧರ್ಮ, ಭೂರಾಜಕೀಯ ಮತ್ತು ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡುತ್ತಾರೆ. ದಿವ್ಯಕೀರ್ತಿ 1973ರಲ್ಲಿ ಮಧ್ಯಮ ವರ್ಗದ ಮನೆಯಲ್ಲಿ ಜನಿಸಿದವರು. ಅವರ ತಂದೆ ತಾಯಿ ಇಬ್ಬರೂ ಹಿಂದಿ ಪ್ರಾಧ್ಯಾಪಕರಾಗಿದ್ದರು. ಅವರಿಗೆ ಹಿಂದಿ ಭಾಷೆಯ ಮೇಲೆ ಅಪಾರ ಹಿಡಿತವಿದೆ. ಅವರು ಹಿಂದಿ ಸಾಹಿತ್ಯದಲ್ಲಿ ತಮ್ಮ ಎಂಎ, ಎಂ ಫಿಲ್ ಮತ್ತು ಪಿಎಚ್ಡಿ ಪೂರ್ಣಗೊಳಿಸಿದ್ದಾರೆ. ಅವರು ತಮ್ಮ ಅಧ್ಯಾಪಕ ವೃತ್ತಿಯನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿದರು.
1996ರಲ್ಲಿ ಅವರು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದು ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿದ್ದರು. ಇದು ಅವರ ಅಪರೂಪದ ಸಾಧನೆಯಾಗಿದೆ. ಅವರನ್ನು ಗೃಹ ವ್ಯವಹಾರಗಳ ಇಲಾಖೆಗೆ ನೇಮಿಸಲಾಯಿತು. ಆದಾಗ್ಯೂ, ಒಂದು ವರ್ಷದೊಳಗೆ ಅವರು ಪ್ರತಿಷ್ಠಿತ ಅಖಿಲ ಭಾರತೀಯ ಸೇವೆ ಹುದ್ದೆಗೆ ರಾಜೀನಾಮೆ ನೀಡಿ ಐಎಎಸ್ ಅಭ್ಯರ್ಥಿಗಳಿಗೆ ಬೋಧನೆ ಮಾಡಲು ಬಯಸಿದರು.

2018-19ರ ವೈರಲ್ ವಿಡಿಯೋ
1999ರಲ್ಲಿ ಅವರು ದೆಹಲಿಯಲ್ಲಿ ದೃಷ್ಟಿ ಐಎಎಸ್ ತರಗತಿಗಳನ್ನು ಪ್ರಾರಂಭಿಸಿದರು. ಇದು ದೇಶದ ಅತ್ಯಂತ ಪ್ರಸಿದ್ಧ ಐಎಎಸ್ ಕೋಚಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಅವರ ಹಲವಾರು ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಾಗಿ ಆಯ್ಕೆಯಾದರು. ದಿವ್ಯಕೀರ್ತಿ ಅವರು 2018-19ರಲ್ಲಿ ವೈರಲ್ ವಿಡಿಯೋವನ್ನು ಪ್ರಕಟಿಸಿದರು. ಅದರಲ್ಲಿ ಅವರು ಒಂದು ಪುಸ್ತಕದ ಭಾಗವನ್ನು ಓದಿದರು. ಈ ಕ್ಲಿಪ್ ಅನ್ನು ಈ ವಾರದ ಆರಂಭದಲ್ಲಿ ಆರ್ಎಸ್ಎಸ್ ನಾಯಕಿ ಸಾಧ್ವಿ ಪ್ರಾಚಿ ಹಂಚಿಕೊಂಡಿದ್ದರು. ಇದರಲ್ಲಿ ರಾಮನು ಸೀತೆಗೆ "ಹೇ ಸೀತೆ ನಾನು ನಿನಗಾಗಿ (ರಾಕ್ಷಸ ರಾಜ ರಾವಣನ ವಿರುದ್ಧ) ಈ ಯುದ್ಧವನ್ನು ಮಾಡಿದ್ದೇನೆ ಎಂದು ನೀವು ಭಾವಿಸಿದರೆ, ನೀವು ಸ್ಪಷ್ಟವಾಗಿ ತಪ್ಪಾಗಿ ಭಾವಿಸುತ್ತೀರಾ. ನಾನು ಈ ಯುದ್ಧವನ್ನು ನನ್ನ ಮನೆ ಹೆಸರು ಮತ್ತು ಪೂರ್ವಜರ ಗೌರವಕ್ಕಾಗಿ ಮಾಡಿದ್ದೇನೆ. ನಿಮ್ಮ ಮಟ್ಟಿಗೆ ಹೇಳುವುದಾದರೆ, ನಾಯಿ ನೆಕ್ಕುವ ತುಪ್ಪವನ್ನು ಸೇವಿಸಲಾಗುವುದಿಲ್ಲ. ನೀನು ನನಗೆ ಯೋಗ್ಯವಲ್ಲ'' ಎಂದು ಹೇಳಿದರು.

ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದ ದಿವ್ಯಕೀರ್ತಿ
ಪಠ್ಯವನ್ನು ಓದಿದ್ದಕ್ಕಾಗಿ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ದಿವ್ಯ ಕೀರ್ತಿ ಅವರನ್ನು ದೂಷಿಸಿದರು. ಮತ್ತೊಂದೆಡೆ, ಅವರನ್ನು ಬೆಂಬಲಿಸುವವರು ಅವರನ್ನು ಸಂದರ್ಭದಿಂದ ಉಲ್ಲೇಖಿಸಲಾಗಿದೆ ಎಂದು ಹೇಳಿದರು. ವಿವಾದದ ಬಗ್ಗೆ ಸ್ಪಷ್ಟೀಕರಣವನ್ನು ನೀಡುತ್ತಾ, ದಿವ್ಯಕೀರ್ತಿ ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ಗುರಿಯಾಗಿಸುವವರಷ್ಟೇ ಹಿಂದೂ ಎಂದು ಹೇಳಿದ್ದಾರೆ. ವಿಡಿಯೋವನ್ನು 2018 ಅಥವಾ 2019 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಉಂಟಾದ ವಿವಾದದಿಂದಾಗಿ ಅವರ ಕುಟುಂಬವು ಸುರಕ್ಷತೆಯಿಲ್ಲದೆ ಹೆದರುವಂತಾಗಿದೆ ಎಂದು ಅವರು ಹೇಳಿದರು.

ಟೀಕೆ ಮಾಡಿದ್ದು ಅವರಲ್ಲ ಲೇಖಕರು
ಜೆಎನ್ಯುನ ಮಾಜಿ ಪ್ರೊಫೆಸರ್ ಮತ್ತು ಯುಪಿಎಸ್ಸಿ ಸದಸ್ಯ ಪುರುಷೋತ್ತಮ್ ಅಗರ್ವಾಲ್ ಬರೆದ ವರ್ಚಸ್ವ ಏವಂ ಪ್ರತಿರೋಧ್ ಪುಸ್ತಕದಿಂದ ನಾನು ಉಲ್ಲೇಖಿಸುತ್ತಿದ್ದೇನೆ ಎಂದು ಅವರು ಹೇಳಿದರು. ಟೀಕೆ ಮಾಡಿದ್ದು ಅವರಲ್ಲ ಲೇಖಕರು ಉತ್ತರ ರಾಮಾಯಣವನ್ನು ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು.
|
ವಿದ್ಯಾರ್ಥಿಗಳ ನಗುವಿಗೆ ಆಕ್ರೋಶ
ಏತನ್ಮಧ್ಯೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಯಾಸೇಜ್ ಅನ್ನು ಓದಿದ ರೀತಿಯಲ್ಲಿ ಅಸಮಾಧಾನಗೊಂಡಿದ್ದಾರೆ. ಅವರು ಮೇಲಿನ ಹೇಳಿಕೆಯನ್ನು ಓದಿದಾಗ ವಿದ್ಯಾರ್ಥಿಗಳು ನಗುತ್ತಿದ್ದರು ಎಂದು ಅವರು ಆಕ್ಷೇಪಿಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಅವರ ವಿರುದ್ಧ ದೂರು ನೀಡುವಂತೆ ಹಲವರು ಒತ್ತಾಯಿಸಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications