Tirupati Dog: ಓಯಿ...ನಾಯಿ ಒಂದು ಚಾಕಲೇಟ್ ಕೊಡು....: ತಿರುಪತಿಯಲ್ಲಿ ಶ್ವಾನದ ದಿನಸಿ ಅಂಗಡಿ
ಓಯಿ...ನಾಯಿ ಒಂದು ಚಾಕಲೇಟ್ ಕೊಡು... ಅಂತ ನೀವು ಕೇಳಲು ಸಾಧ್ಯನಾ? ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಜೋಕ್ ಮಾಡಿದರೂ ಕೂಡ ನಿಮ್ಮೊಂದಿಗೆ ಜಗಳ ಆಗಬಹುದು. ಆದರೆ ಈ ಅಂಗಡಿಯಲ್ಲಿ ನೀವು ಹಾಗೇ ಕೇಳಬೇಕು. ಯಾಕೆ ಗೊತ್ತಾ ಇಲ್ಲಿ ಶ್ವಾನವೇ ಅಂಗಡಿ ಮಲೀಕ.
ಶಾಕ್ ಆದ್ರಾ? ಶಾಕ್ ಆಗಲೇಬೇಕು ಬಿಡಿ. ಯಾಕೆಂದರೆ ತಿರುಪತಿಯಲ್ಲಿರುವ ಈ ಒಂದು ದಿನಸಿ ಅಂಗಡಿಗೆ ಶ್ವಾನವೇ ಮಾಲೀಕ. ತನ್ನ ಮಾಲೀಕನಿಲ್ಲದ ಸಮಯದಲ್ಲಿ ಈ ಶ್ವಾನವೇ ಅಂಗಡಿಯನ್ನು ನೋಡಿಕೊಳ್ಳುತ್ತದೆ. ಇದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.

ನಿಜಕ್ಕೂ ಇದು ಕೊಂಚ ವಿಭಿನ್ನವಾದ ವಿಷಯವೇ. ನಾಯಿ ಹೇಗೆ ಅಂಗಡಿ ನೋಡಿಕೊಳ್ಳುತ್ತೆ ಅಂತ ನೀವು ಥಟ್ ಅಂತ ಪ್ರಶ್ನೆ ಮಾಡಬಹುದು. ಅದಕ್ಕೆ ಉತ್ತರ ಈ ವೈರಲ್ ಆಗಿರುವ ಫೋಟೋ. ಇತ್ತೀಚೆಗಷ್ಟೇ ತಿರುಪತಿಯಲ್ಲಿನ ಈ ಒಂದು ಫೋಟೋವನ್ನು ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.
ಗೋವಿಂದ ರೆಡ್ಡಿ ಎಂಬ ನೆಟ್ಟಿಗ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತಿರುಪತಿ ಗೋವಿಂದರಾಜ ಸ್ವಾಮಿ ದೇವಸ್ಥಾನದ ಹಿಂದೆ ಹಳೆಯ ಬಜಾರ್ಗಳಲ್ಲಿ ಅನೇಕ ಅಂಗಡಿಗಳಿವೆ. ಅಲ್ಲಿನ ಅಂಗಡಿಯೊಂದರ ಮಾಲೀಕ ನಾಯಿಯೊಂದನ್ನು ಸಾಕಿದ್ದಾನೆ. ಇದರ ಹೆಸರು ಜಗಿಲಾ. ಈ ಜಗಿಲಾ ಮಾಲೀಕನಿಲ್ಲದ ಸಮಯದಲ್ಲಿ ಅಂಗಡಿಯನ್ನು ಕಾಯುತ್ತದೆ.
ಮಾಲೀಕ ತಾನಿಲ್ಲದ ಸಮಯದಲ್ಲಿ ಅಂಗಡಿ ಜವಬ್ದಾರಿಯನ್ನು ನಾಯಿಯ ಮೇಲೆ ಬಿಟ್ಟು ಹೋಗುತ್ತಾನೆ. ವೈರಲ್ ಆಗಿರುವ ಫೋಟೋದಲ್ಲಿ ನಾಯಿ ಮಲಗಿರುವುದನ್ನು ಕಾಣಬಹುದು.
ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ. ತನ್ನ ಸಾಕು ಮಾಲೀಕರಿಗೆ ತುಂಬಾ ಪ್ರೀತಿ ತೋರುತ್ತದೆ. ಒಂದು ತುತ್ತು ಅನ್ನ ಹಾಕಿದರೆ ಸಾಕು ಅದು ತನ್ನ ಮಾಲೀಕನಿಗೆ ಹೆಚ್ಚು ಪ್ರೀತಿ ತೋರುತ್ತದೆ. ತಿರುಪತಿಯ ಮಾರುಕಟ್ಟೆಯಲ್ಲಿನ ಈ ಶ್ವಾನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಕೆಲವು ನೆಟ್ಟಿಗರು ಈ ಫೋಟೋಗೆ ವ್ಯಂಗ್ಯವಾಡುತ್ತಿದ್ದಾರೆ. ಅಂಗಡಿ ಕಾಯದೆ ಮಾಲೀಕರು ಮಲಗುತ್ತಿದ್ದಾನೆ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ತಿರುಪತಿ ಬಗ್ಗೆ:
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು. ತಿರುಪತಿ ಬಾಲಾಜಿ ದೇವಾಲಯವು ಇಂದು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ನೀವು ಈ ದೇವಾಲಯಕ್ಕೆ ಭೇಟಿ ನೀಡಿದರೂ ಲಕ್ಷಾಂತರ ಭಕ್ತರ ಸಮೂಹವನ್ನು ನೋಡಬಹುದು.
ಹಾಗೂ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ. ಈ ರೀತಿಯಾಗಿ ಲಕ್ಷಾಂತರ ಭಕ್ತರು ತಮ್ಮ ದಾನವನ್ನು ನೀಡಲು ಇಲ್ಲಿನ ದೇವಾಲಯಕ್ಕೆ ಆಗಮಿಸುತ್ತಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications