'My daughter join a cult'- ನಿತ್ಯಾನಂದನ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ
ನವದೆಹಲಿ ಜೂನ್ 2: ನಿತ್ಯಾನಂದನ ವಿವಾದಾತ್ಮಕ ಜೀವನದ ಕುರಿತಾದ "My daughter joined a cult" ಸಾಕ್ಷ್ಯಚಿತ್ರ ಸರಣಿ ಇಂದು ಭಾರತದಾದ್ಯಂತ OTT ಯಲ್ಲಿ ಬಿಡುಗಡೆಯಾಗುತ್ತಿದೆ. ಅತ್ಯಾಚಾರ, ಅಪಹರಣ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿ ತನ್ನದೇ 'ಕೈಲಾಸ' ಎಂಬ ದೇಶ ಮಾಡಿಕೊಂಡು ಅದಕ್ಕೆ 'ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ' ಎಂಬ ಹೆಸರಿಟ್ಟಿರುವುದು ಗೊತ್ತೇ ಇದೆ.
ಸ್ವಯಂಘೋಷಿತ ಸ್ವಾಮಿಜಿ ನಿತ್ಯನಂದ ವಿವಾದಾತ್ಮಕ ಹೇಳಿಕೆಗಳಿಗೆ ಹಾಗೂ ನಂಬಲು ಅಸಾಧ್ಯವಾದ ಹೇಳಿಕೆಗಳಿಂದ ಸದಾ ಸಾಮಾಜಿಕ ಜಾಲತಾಣದಲ್ಲಿ ನಗಪಾಟಲೆಗೆ ಗುರಿಯಾಗುತ್ತಲೇ ಇರುತ್ತಾರೆ. ಹೀಗಾಗಿ ಅವರು ಮಾತನಾಡುವ ಮತ್ತು ನಗುವ ಎಲ್ಲವೂ ಯುವಜನರಿಗೆ ಮನರಂಜನೆಯಾಗಿರುತ್ತದೆ. ಅವರ ವಿವಾದಗಳು, ಹಾಸ್ಯ ಭಾಷಣಗಳು, ವೇಷಗಳು ಇತ್ಯಾದಿಗಳು ಸದ್ಯ ಸಾಕ್ಷ್ಯಚಿತ್ರವಾಗಿ ಹೊರಬರುತ್ತಿದೆ.
'ನಾಲ್ಕು ವರ್ಷ ಸಮಾಧಿಯಲ್ಲಿ ಇರುತ್ತೇನೆ, ಫೇಸ್ಬುಕ್ನಲ್ಲಿ ರಿಪ್ಲೈ ಮಾಡುತ್ತೇನೆ' ನಿತ್ಯಾನಂದ
ಸಾಕ್ಷ್ಯಚಿತ್ರ ಸರಣಿ
ನಿತ್ಯಾನಂದನ ಜೀವನ ಚರಿತ್ರೆಯನ್ನು ಸಾಕ್ಷ್ಯಚಿತ್ರ ಸರಣಿಯಾಗಿ ತೆಗೆದುಕೊಳ್ಳಲಾಗಿದೆ. ಅದಕ್ಕೆ "ನನ್ನ ಮಗಳು ಆರಾಧನೆಗೆ ಸೇರಿದಳು" ಎಂದು ಹೆಸರಿಸಲಾಗಿದೆ. ಡಿಸ್ಕವರಿ ಪ್ಲಸ್ನಲ್ಲಿ OTT ನಲ್ಲಿ ಈ ಸರಣಿಯನ್ನು ಇಂದು ಭಾರತದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಈ ಸರಣಿಯನ್ನು ವೈಸ್ ಸ್ಟುಡಿಯೋಸ್ ನಿರ್ಮಿಸಿದ್ದು, 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ.
ಹಿಂದೂ ಸಮುದಾಯ ನಿಂತಿರುವುದು ಬ್ರಾಹ್ಮಣರ 'ಡಿಎನ್ಎ'ದಿಂದ: ನಿತ್ಯಾನಂದ ಸ್ವಾಮಿ
ನಿರ್ದೇಶಕ ಯಾರು?
ಈ ಸರಣಿಯನ್ನು ನಮನ್ ಸಾರಯ್ಯ ನಿರ್ದೇಶಿಸಿದ್ದಾರೆ. ಇದು ಹಿಂದಿ, ತಮಿಳು, ತೆಲುಗು, ಇಂಗ್ಲಿಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ನಿತ್ಯಾನಂದ ಅವರು ಶಿಷ್ಯರನ್ನು ಧ್ಯಾನ ಪೀಠ ಮತ್ತು ಆಶ್ರಮಕ್ಕೆ ಆಕರ್ಷಿಸಿದಾಗಿನಿಂದ ಅವರನ್ನು ಕಿರುಕುಳ ನೀಡುವವರೆಗೂ ಮಾಜಿ ಭಕ್ತರೊಂದಿಗೆ ಸಂದರ್ಶನಗಳನ್ನು ನಡೆಸಿ ಈ ಸಾಕ್ಷ್ಯಚಿತ್ರ ತಯಾರಿಸಲಾಗುತ್ತಿದೆ.
ನಿತ್ಯಾನಂದನ ಪಲಾಯನ ಸ್ಟೋರಿ
ಈ ಸರಣಿಯು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎನ್ನುತ್ತಾರೆ ನಿರ್ದೇಶಕ ನಮನ್ ಹೇಳುತ್ತಾರೆ. ಇದರಲ್ಲಿ ನಿತ್ಯಾನಂದನ ಪತನಕ್ಕೆ ಕಾರಣವಾದ ಘಟನೆಗಳೂ ಇರಲಿದೆ. ಮಾಜಿ ಭಕ್ತರು, ವಕೀಲರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯಲು ನಿತ್ಯಾನಂದನ ಕುರಿತು ಸಾಕ್ಷ್ಯಚಿತ್ರಗಳ ಸರಣಿಯನ್ನು ನಿರ್ಮಿಸಲಾಗಿದೆ.
ನಿತ್ಯಾನಂದರ ಭಕ್ತರ ಗುಂಪು ಸೇರಿದ್ದು ಹೇಗೆ?
ಇದು ವಿವಾದಾಸ್ಪದವಾಗಿದ್ದರೂ, ಭಕ್ತರ ಗುಂಪು ಅವನ ಬಳಿಗೆ ಹೇಗೆ ಬಂದಿತು ಎಂಬುದನ್ನು ಎಲ್ಲವನ್ನೂ ಒಳಗೊಂಡಿದೆ. ನಿತ್ಯಾನಂದ ಹಾಗೂ ಆತನ ಸಂಘಟನೆಗಳ ಬಗ್ಗೆ ಸಾಕಷ್ಟು ಜನರೊಂದಿಗೆ ಮಾತನಾಡಿ ವಿವರ ನೀಡಿದ್ದೇವೆ. ಅನಾರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ನಿತ್ಯಾನಂದ ಲೈವ್ ಬಂದಿರಲಿಲ್ಲ. ಸದ್ಯ ಈ ಸಾಕ್ಷ್ಯಚಿತ್ರದ ಮೂಲಕ ನಿತ್ಯಾನಂದನ ಸಂಪೂರ್ಣ ವಿವರ ಜನರಿಗೆ ತಲುಪಲಿದೆ. ನಿತ್ಯಾನಂದನ ನಿಜ ಜೀವನದ ನಿಗೂಢತೆಗಳಿಗೆ ಈ ಸಾಕ್ಷ್ಯಚಿತ್ರ ಉತ್ತರ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
(ಒನ್ಇಂಡಿಯಾ ಸುದ್ದಿ)