Deepavali 2023: ನಾವು ದೀಪಾವಳಿಯನ್ನು ಏಕೆ ಆಚರಿಸುತ್ತೇವೆ? ಬೆಳಕಿನ ಹಬ್ಬದ ಇತಿಹಾಸ ಹಾಗೂ ಮಹತ್ವವೇನು? ವಿವರ ತಿಳಿಯಿರಿ
Deepavali 2023: ದೀಪಾವಳಿಯು ಹಿಂದೂಗಳಿಗೆ ಅತ್ಯಂತ ಮಹತ್ವವಾದ ಹಬ್ಬವಾಗಿದೆ. ಈ ಹಬ್ಬವನ್ನು ನವೆಂಬರ್ 12ರಿಂದ ಆಚರಿಸಲಾಗುತ್ತದೆ. ದೀಪಾವಳಿ ಎಂದೂ ಕರೆಯಲ್ಪಡುವ ದೀಪಗಳ ಹಬ್ಬವನ್ನು ದೇಶದಾದ್ಯಂತ ಸಂಭ್ರಮಿಸಲಾಗುತ್ತದೆ. ಇದು ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಮಹತ್ವವನ್ನು ಪಡೆದುಕೊಂಡ ಹಬ್ಬವಾಗಿದೆ.
ಕತ್ತಲೆಯ ವಿರುದ್ಧ ಬೆಳಕಿನ ವಿಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯ ಮತ್ತು ಅಜ್ಞಾನದ ವಿರುದ್ಧ ಜ್ಞಾನದ ವಿಜಯವನ್ನು ದೀಪಾವಳಿಯು ಸಂಕೇತಿಸುತ್ತದೆ.

ಈ ಹಬ್ಬವನ್ನು ಚಂದ್ರಮಾನ ಹಿಂದೂ ಕ್ಯಾಲೆಂಡರ್ ಪ್ರಕಾರ ಗುರುತಿಸಲಾಗಿದೆ. ಕಾರ್ತಿಕ ಮಾಸದ 15 ನೇ ದಿನದಂದು ಅಕ್ಟೋಬರ್ ಮಧ್ಯ ಮತ್ತು ನವೆಂಬರ್ ಮಧ್ಯದ ನಡುವೆ ಈ ಹಬ್ಬ ಬರುತ್ತದೆ. ಈ ಹಬ್ಬವನ್ನು ಭಾರತದಾದ್ಯಂತ ಐದು ದಿನಗಳವರೆಗೆ ಆಚರಿಸಲಾಗುತ್ತದೆ. ಈ ಹಬ್ಬವನ್ನು ನಾವು ಏಕೆ ಆಚರಿಸುತ್ತೇವೆ? ಇದರ ಇತಿಹಾಸ ಮತ್ತು ಮಹತ್ವವೇನು? ನಿಮಗೆ ತಿಳಿಯದೇ ಇರುವ ಸಂಗತಿಗಳೇನು? ಎಂಬುದರ ಕುರಿತು ತಿಳಿಯಿರಿ.
ನಾವು ದೀಪಾವಳಿಯನ್ನು ಏಕೆ ಆಚರಿಸುತ್ತೇವೆ?
ಶ್ರೀಲಂಕಾದ ರಾಜ ರಾವಣನನ್ನು ಸೋಲಿಸಿದ ನಂತರ ಶ್ರೀರಾಮ, ಸೀತಾಮಾತೆ ಹಾಗೂ ಲಕ್ಷ್ಮಣರು ಅಯೋಧ್ಯೆಗೆ ಹಿಂದಿರುಗುತ್ತಾರೆ. ಹಿಂದಿರುಗುವ ಶುಭ ಸಂದರ್ಭವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಪರಂಪರೆಯು ಮುಂದುವರಿದು ದೀಪಾವಳಿ ಹಬ್ಬವಾಗಿ ಆಚರಿಸಲ್ಪಡುತ್ತದೆ.
ಹಿಂದೂಗಳು ದೀಪಾವಳಿಯನ್ನು ವಿವಿಧ ಕಾರಣಗಳಿಗಾಗಿ ಆಚರಿಸುತ್ತಾರೆ. ಈ ಹಬ್ಬವು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುತ್ತದೆ.

ದೇಶದ ಹೊರಗಿನ ಭಾರತೀಯರು ಸಹ ಹಬ್ಬವನ್ನು ಆಚರಿಸುತ್ತಾರೆ. ಇದು ಒಗ್ಗಟ್ಟಿನ ಸಂಕೇತವೂ ಆಗಿದೆ. ಕುಟುಂಬಗಳು ಒಟ್ಟಿಗೆ ಸೇರುವ ವರ್ಷದ ಶುಭ ಸಂದರ್ಭವು ಆಗಿದೆ. ದೀಪಾವಳಿಯು ಕೆಡುಕಿನ ಮೇಲೆ ಒಳ್ಳೆಯದು ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ.
ಈ ಸಮಯದಲ್ಲಿ ಜನರು ಗಣೇಶ ಮತ್ತು ಲಕ್ಷ್ಮಿ ದೇವಿಯಂತಹ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತಾರೆ. ಇದು ಸಂಪ್ರದಾಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಬ್ಬವು ಆಧ್ಯಾತ್ಮಿಕವಾಗಿ ಜನರನ್ನು ಜಾಗೃತಗೊಳಿಸುತ್ತದೆ.
ದೀಪಾವಳಿಯು ಹಿಂದೂಗಳಿಗೆ ಮಂಗಳಕರ ಸಮಯವಾಗಿದೆ. ಅವರಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಹೀಗಾಗಿ, ಇದು ಅವರಿಗೆ ಹೊಸ ಆರಂಭವನ್ನು ಸೂಚಿಸುತ್ತದೆ. ಈ ಶುಭ ಸಂದರ್ಭದಲ್ಲಿ ಜನರು ಹೊಸ ಉದ್ಯಮಗಳು, ವ್ಯವಹಾರಗಳು ಮತ್ತು ಆರ್ಥಿಕ ವರ್ಷವನ್ನು ಪ್ರಾರಂಭಿಸುತ್ತಾರೆ.

ಜನರು ತಮ್ಮ ಮನೆಗಳನ್ನು ದೀಪಗಳು, ಮೇಣದಬತ್ತಿಗಳು ಮತ್ತು ವರ್ಣರಂಜಿತ ದೀಪಗಳಿಂದ ಅಲಂಕರಿಸುತ್ತಾರೆ. ರುಚಿಕರವಾದ ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ತಲೆಮಾರುಗಳಿಂದ ಬಂದ ಆಚರಣೆಗಳನ್ನು ಅನುಸರಿಸುತ್ತಾರೆ. ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ದಾನ ಮಾಡುತ್ತಾರೆ.
ದೀಪಾವಳಿ 2023 ಇತಿಹಾಸ ಮತ್ತು ಮಹತ್ವ
ಪುರಾಣಗಳ ಪ್ರಕಾರ, ಅಯೋಧ್ಯೆಯ ಭಗವಾನ್ ರಾಮನು 14 ವರ್ಷಗಳ ನಂತರ ವನವಾಸದಿಂದ (ಅಯೋಧ್ಯೆ) ಮನೆಗೆ ಮರಳುತ್ತಾನೆ. ಲಂಕಾದ ರಾಜನಾದ ರಾವಣನನ್ನು ಸೋಲಿಸಿ ಅಯೋದ್ಯೆಗೆ ಹಿಂದಿರುಗುತ್ತಾನೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಸೀತೆಮಾತೆ ಮತ್ತು ಲಕ್ಷ್ಮಣರು ಇರುತ್ತಾರೆ.
ಈ ಸಂದರ್ಭದಲ್ಲಿ ಅಯೋಧ್ಯೆಯ ಜನರು ಅಯೋಧ್ಯೆಯ ಬೀದಿಗಳು ಮತ್ತು ಪ್ರತಿ ಮನೆಯಲ್ಲೂ ದೀಪಗಳು ಮತ್ತು ದೀಪಗಳ ಸಾಲುಗಳನ್ನು ಬೆಳಗಿಸುವ ಮೂಲಕ ಅವರ ಹಿಂದಿರುಗುವಿಕೆಯನ್ನು ಆಚರಣೆ ಮಾಡುತ್ತಾರೆ. ಸಂಪ್ರದಾಯವು ಇಂದಿನವರೆಗೂ ಮುಂದುವರೆದಿದೆ. ಇದನ್ನು ಬೆಳಕಿನ ಹಬ್ಬ ಎಂದು ಆಚರಿಸಲಾಗುತ್ತದೆ.
ಈ ಹಬ್ಬವು ನಮ್ಮ ಜೀವನದ ಕೆಟ್ಟ ಗಳಿಗೆಗಳು, ನಕಾರಾತ್ಮಕ ವಿಚಾರಗಳು ಮತ್ತು ಅನುಮಾನಗಳ ನಿರ್ಮೂಲನೆಯನ್ನು ಸೂಚಿಸುತ್ತದೆ. ಹಬ್ಬವು ನಮ್ಮ ಅಂತರಂಗವನ್ನು ಸಕಾರಾತ್ಮಕತೆಯಿಂದ ಬೆಳಗಿಸುವ ಸಂದೇಶವನ್ನು ನೀಡುತ್ತದೆ. ಜನರು ಲಕ್ಷ್ಮಿ ಮತ್ತು ಗಣೇಶನನ್ನು ಪ್ರಾರ್ಥಿಸುವ ಮೂಲಕ, ಪ್ರೀತಿಪಾತ್ರರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು ದಾನ ಮಾಡುವ ಮೂಲಕ ಜನರು ಈ ಹಬ್ಬವನ್ನು ಆಚರಿಸುತ್ತಾರೆ.
ದೀಪಾವಳಿ 2023: ಕಡಿಮೆ ತಿಳಿದಿರುವ ಸಂಗತಿಗಳು
ದೀಪಾವಳಿಯು ಅಮಾವಾಸ್ಯೆಯ ರಾತ್ರಿಯಲ್ಲಿ ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದನ್ನು ಕಾರ್ತಿಕ ಮಾಸದಲ್ಲಿ ಅಮವಾಸ್ಯೆಯಂದು (ಚಂದ್ರರಹಿತ ರಾತ್ರಿ) ಆಚರಿಸಲಾಗುತ್ತದೆ.
ಹಬ್ಬವನ್ನು ದೇಶದಾದ್ಯಂತ ವಿವಿಧ ಹೆಸರುಗಳಿಂದ ಗುರುತಿಸಲಾಗಿದೆ. ನೇಪಾಳದಲ್ಲಿ ಇದನ್ನು ತಿಹಾರ್ ಇರ್ ಸ್ವಾಂತಿ ಎಂದು ಗುರುತಿಸಲಾಗಿದೆ. ಮಲೇಷ್ಯಾದಲ್ಲಿ ಇದನ್ನು ಹರಿ ದೀಪಾವಳಿ ಎಂದು ಕರೆಯಲಾಗುತ್ತದೆ. ಥೈಲ್ಯಾಂಡ್ನಲ್ಲಿ ಜನರು ದೀಪಾವಳಿಯನ್ನು ಲ್ಯಾಮ್ ಕ್ರಿಯಾಂಗ್ ಎಂದು ಆಚರಿಸುತ್ತಾರೆ.
ಭಾರತವನ್ನು ಹೊರತುಪಡಿಸಿ, ಯುನೈಟೆಡ್ ಕಿಂಗ್ಡಮ್ನ ಲೀಸೆಸ್ಟರ್ ನಗರದಲ್ಲಿ ದೀಪಾವಳಿ ಆಚರಣೆಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ, ಬೆಳಕು, ಸಂಗೀತ ಮತ್ತು ನೃತ್ಯದ ರಾತ್ರಿಗಳನ್ನು ಕಳೆಯಲು ಹತ್ತಾರು ಜನರು ಬೀದಿಗಳಲ್ಲಿ ಸೇರುತ್ತಾರೆ.
ಬಂಗಾಳದಲ್ಲಿ ಜನರು ದೀಪಾವಳಿಯಂದು ಎಲ್ಲಾ ದುಷ್ಟ ಶಕ್ತಿಗಳ ನಾಶಕ ಮಾ ಕಾಳಿಯನ್ನು ಪೂಜಿಸುತ್ತಾರೆ. ನೇಪಾಳದಲ್ಲಿ ಜನರು ಶ್ರೀಕೃಷ್ಣನನ್ನು ಪೂಜಿಸುತ್ತಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications