ವೈರಲ್ ವಿಡಿಯೋ: ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕುವ ಸುಸಂಸ್ಕೃತ ನಾಯಿ
ಧಾರ್ಮಿಕ ಬಿಕ್ಕಟ್ಟು, ಕೋಮು ಗಲಭೆ, ಕ್ರೈಂ, ಘರ್ಷಣೆ ಇವೆಲ್ಲದರ ಮಧ್ಯೆ ಕೊಂಚ ಮನಸ್ಸಿಗೆ ಖುಷಿ ನೀಡುವಂತಹ ಸುದ್ದಿಗಳಿದ್ದರೆ ಅದೆಷ್ಟು ಚಂದ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮನಸ್ಸಿಗೆ ಮುದ ನೀಡುವಂತಹ ಹಾಗೂ ಮೈಂಡ್ ರಿಲೀಫ್ ಮಾಡುವ ವಿಡಿಯೋಗಳು ಕಾಣ ಸಿಗುತ್ತವೆ.
ಅಂದಹಾಗೆ ನಮ್ಮ ನಡುವೆ ಹಲವಾರು ಜನ ಪ್ರಾಣಿ ಪ್ರಿಯರಿದ್ದಾರೆ. ಸಾಕುಪ್ರಾಣಿಗಳಿಗಾಗಿನೇ ಪ್ರತ್ಯೇಕ ಕೋಣೆ, ಎಸಿ, ಬಾತ್ರೂಮ್ ನಿರ್ಮಾಣ ಮಾಡಿ ಪ್ರತ್ಯೇಕವಾಗಿ ವೈದ್ಯರನ್ನಿಟ್ಟು ಮನುಷ್ಯರಿಗಿಂತ ಹೆಚ್ಚು ಚೆನ್ನಾಗಿ ನೋಡಿಕೊಳ್ಳುವವರಿದ್ದಾರೆ. ತಮ್ಮಷ್ಟೇ ಐಷಾರಾಮಿ ಜೀವನದಲ್ಲಿ ಪ್ರಾಣಿಗಳನ್ನು ಸಾಕುವಂತವರಿದ್ದಾರೆ.
ಇಂಥೆಲ್ಲಾ ಪ್ರಾಣಿಗಳನ್ನು ನೋಡುವುದೇ ಒಂದು ಖುಷಿ. ಕೆಲ ಪ್ರಾಣಿಗಳ ತುಂಟಾಟ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ. ಆದರೆ ಇಂಥ ಪ್ರಾಣಿಗಳಿಗೂ ಸಂಸ್ಕಾರ ಕಳಿಸಬಹುದು ಅಂದ್ರ ನೀವು ನಂಬುತ್ತೀರಾ? ಅಥವಾ ಎಲ್ಲದರೂ ನೋಡಿದ್ದೀರಾ? ಅಂಥಹ ಒಂದು ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಸಾಮಾನ್ಯವಾಗಿ ಸಾಕು ನಾಯಿಗಳು ತನ್ನ ಮಾಲೀಕರಿಗೆ ರಕ್ಷಣೆ ನೀಡುವುದನ್ನು ಕಲಿತ್ತಿರುತ್ತವೆ. ತನ್ನನ್ನು ಸಾಕಿದ ಮನೆಗೆ ಕಾವಲುಗಾರನಾಗಿರುತ್ತದೆ. ಮಕ್ಕಳೊಂದಿಗೆ ಆಟ, ಹಿರಿಯರೊಂದಿಗೆ ತುಂಟಾಟ, ಪರರ ಮೇಲೆ ದಾಳಿ, ಮಾಲೀಕ ಹೇಳಿದಂತೆ ನಡೆದುಕೊಳ್ಳುವುದು ಅದರ ಲಕ್ಷಣಗಳಾಗಿರುತ್ತವೆ.
ಆದರೆ ಇಲ್ಲೊಂದು ನಾಯಿ ಪ್ರತಿನಿತ್ಯ ತುಳಿಸಿಕಟ್ಟೆಗೆ ಪ್ರದಕ್ಷಣೆ ಹಾಕುತ್ತದೆ. ಎರಡು ಸುತ್ತು ಹಾಕಿ ನಮಸ್ಕರಿಸುತ್ತದೆ. ಈ ವಿಡಿಯೋ ಯಾವ ಸ್ಥಳದೆಂದು ತಿಳಿದು ಬಂದಿಲ್ಲ. ಆದರೆ ಈ ಅದ್ಬುತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮನೆಯಿಂದ ಓರ್ವ ಮಹಿಳೆ ತುಳಿಸಿಕಟ್ಟೆಗೆ ದೀಪವನ್ನು ಇಡುತ್ತಾರೆ.

ನಂತರ ಅವರು ನಮಸ್ಕರಿಸುತ್ತಿದ್ದಂತೆ ನಾಯಿ ಕೂಡ ಅವರೊಂದಿಗೆ ಪ್ರದಕ್ಷಿಣೆ ಹಾಕುತ್ತದೆ. ಮಹಿಳೆಯೊಂದಿಗೆ ಎರಡು ಬಾರಿ ತುಳಸಿಕಟ್ಟೆಯನ್ನು ಸುತ್ತಿ ನಂತರ ಮತ್ತೊಮ್ಮೆ ನಮಸ್ಕರಿಸುತ್ತದೆ. ಈ ವಿಡಿಯೋಕ್ಕೆ 600 ಹೆಚ್ಚು ಕಾಮೆಂಟ್ಗಳು ಬಂದಿದ್ದು ಕೆಲವರು ಇದೊಂದು ಸುಸಂಸ್ಕೃತ ನಾಯಿ ಎಂದು ಬರೆದಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗಿದು 767K ವೀಕ್ಷಣೆ ಪಡೆದುಕೊಂಡಿದೆ.
ತುಳಸಿ ಪೂಜೆಗಿರುವ ಮಹತ್ವ
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆಯ ಸ್ಥಾನ ಸಿಕ್ಕಿದೆ. ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ತುಳಸಿಯನ್ನು ವರ್ಷವಿಡೀ ಪೂಜಿಸಲಾಗುತ್ತಿದ್ದರೂ, ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡಿ ಮತ್ತು ತುಳಸಿಯ ಮುಂದೆ ದೀಪ ದಾನ ಮಾಡುವುದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
-
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು












Click it and Unblock the Notifications