ಕೊರೊನಾದ ಕರಿನೆರಳಿನಲ್ಲಿ ಅಪ್ಪನ ನೆನೆಯುತ್ತಾ...
ಮಧ್ಯಪ್ರಾಯಸ್ಥ.
ಅಪ್ಪಾ, ಹೆಮ್ಮೆಯಿಂದ ಹೇಳುತ್ತಿರುವೆ. ನನಗೀಗ 46 ವರ್ಷ ವಯಸ್ಸು. ಹೌದು, ಈಗ ನಿಂಗೆಷ್ಟು ವಯಸ್ಸು? ಹಾಗೇ, ಲೋಕಾಭಿರಾಮ, ನಿನ್ನ ವಯಸ್ಸು ಕೇಳಿದೆ. ಸಿಟ್ಟಾಗಿ ಬಡಗಿ ತಗೊಂಡು, ಬೆನ್ನು ಬಾಸುಂಡೆ ಬರೋಂಗ ರೆಪಾರೆಪಾ ಅಂತಾ ಹೊಡೀಬೇಡ. ನನಗಂತೂ ವಯಸ್ಸಾಯ್ತು ನೋಡು. ಅದಕ್ಕಾ, ಚೀರಾಕ ಬರಾಂಗಿಲ್ಲ, ಹೊದ್ರಾಕಂತೂ ಆಗಂಗೂ ಇಲ್ಲ. ನಿನ್ನ ಏಟುಗಳ ಸಬ್ದಾ ದಾಟಿ, ನನ್ನ ಕೂಗು ಯಾರಿಗೂ ಮುಟ್ಟಾಂಗಿಲ್ಲ. ನಾನು, ಚೀರಿದ್ದು ಯಾರಿಗೂ ಕೇಳ್ದೇ, ನಿನ್ನ ಬಡಿಗೆ ಏಟುನಾಗೇ ನಾನೂ ಒಂದೀಟು ಮರೆಯಾಗುತೀನಿ ನೋಡು. ಅದಕ್ಕಾ. ಅಪ್ಪಾ, ನಂಗಂತೂ ವಯಸ್ಸಾಯ್ತು. ಹೊಡೀಬ್ಯಾಡ.
Recommended Video
ಅದಕ್ಕೇ, ಈ ಪತ್ರ ಬಿರೀತಿದೀನಿ ನೋಡು.
ಒಂದದಿನೈದು ವರ್ಷಾತುನೋಡು, ನಿನ್ನ ಕಂಡೇ ಇಲ್ಲ. ಡೈಲಿ ನಿಂದೇ ಮಾತು, ನಿಂದೇ ನೆಪ್ಪು, ಆಗೊಮ್ಮೆ - ಈಗೊಮ್ಮೆ ಕಣ್ಣಾಗ ಕಣ್ಣಾಗಿ ರೆಪ್ಪೆ ಮರೆಯಾಗೇ ಒದ್ದೆಯಾಗಿ, ಮಸುಕು ಮಸುಕಾಗಿ ಕಾಣತೀ. ಕೈಹಿಡಿದು ಮಾತು ಶುರುವಾಗುವಷ್ಟರಲ್ಲೇ ನೀನಿದ್ದ ಜಾಗ, ಖಾಲಿ ಖಾಲಿ. ನಿನ್ನ ಜೊತೆ ಮಾತಾಡೋ ನನ್ನ ಖಯಾಲಿ ಮಾತ್ರ ಇನ್ನೂ ಕೈಬಿಟ್ಟಿಲ್ಲ ನೋಡು. ಒಂದು ನಿಮಿಷ, ಅವ್ವ, ಚೆಂದಾಗವ್ಳೆ. ಆರೋಗ್ಯ ಸಾಕಷ್ಟು ಸುಧಾರಿಸಿದೆ.

ಅದೇನೋ, ನೀನು ಕಥೆಕಟ್ಟಿ, ಕೈಮಾಡಿ, ಕಣ್ಣಗಲಿಸಿ, ದೊಡ್ಡ ದನಿಯಲ್ಲಿ ಬಣ್ಣಬಣ್ಣವಾಗಿ ಹೇಳ್ತಿದ್ದೀಯಲ್ಲ, ಅದೇ, ಸಿಡುಬು, ದಢಾರ, ಪ್ಲೇಗ್, ಪೋಲಿಯೋ, ಅಂಥದ್ದೇ ಅದ್ಯಾವುದೋ ಕೊರೊನಾ ಅಂತ ನಮ್ಮನ್ನೆಲ್ಲಾ ಸಿಕ್ಕಾಪಟ್ಟೆ ಕಾಡ್ತಿದೆ. ಕೊರೊನಾ ಮುದುಕುರುಗೇ ಹೆಚ್ಚು ಕಾಡ್ತದಂತೆ, ಅದಕ್ಕೇ ನಿನ್ನ ಹುಡುಕಾಡ್ತಲೇ ಇದ್ದೀನಿ, ಎಲ್ಲಿದ್ದೀಯಿ ಹೇಳು? ಕೆಟ್ಟು ಕೊರೊನಾ ಕಣ್ಣು ನಿನ್ನ ಮೇಲೆ ಬೀಳದಿರಲಿ ಅಂತಾ ನಮ್ಮೂರು ದುರ್ಗಮ್ಮಗೇ ಕೈಮುಗಿದೀನಿ. ಹೌದು, ದುರ್ಗಮ್ಮನ ಆಶೀರ್ವಾದ ನಿನ್ನ ಮೇಲೈತೆ ಅಲ್ಲವಾ?
ಇರು, ವಯಸ್ಸಾಯ್ತಲ್ಲಾ, ದಣಿವಾಯ್ತು. ಒಂದು ಗುಟುಕು ನೀರು ಕುಡುದು, ಬಿಸಿ ಬಿಸಿ ಛಾಯ್ ಹೀರಿ, ಬರ್ತೀನಿ.
ಜೀವಬಿಂದು ತುಂಬಿದ ಜೀವಿ. ಅಕ್ಷರ ಕಲಿಸಿದ ಗುರು. ದಿಕ್ಕೆಟ್ಟ ಬದುಕಿನ ದಿಕ್ಸೂಚಿ. ಸ್ವಾವಲಂಬನೆ, ಸ್ವಯಂ ಕೃಷಿ, ಸ್ವಯಂ ರೂಪಿತ ವ್ಯಕ್ತಿತ್ವ - ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡಿದ ಪ್ರೇರಣಾ ಶಕ್ತಿ. ಸೂಜಿಮೊನೆಯ ರಂಧ್ರದಲ್ಲೂ ವಿಶ್ವವನ್ನೇ ನೋಡುವ ಕನಸುಗಳ ಕೃಷಿಕ. ಸಾಲ ಮಾಡದ, ಕೈ ಒಡ್ಡದ, ಮೈಮರೆಯದ ಬದುಕು ನಿನ್ನದಾಗಬೇಕು ಎನ್ನುವ ವಿಚಾರಗಳಲ್ಲೇ ವ್ಯಕ್ತಿತ್ವ ರೂಪಿಸಿದ ನೀನು, ಈಗೆಲ್ಲಿದ್ದೀಯಿ? ಹೇಗಿದ್ದೀಯಿ?
ನನ್ನಮ್ಮಳ - ನಮ್ಮೆಲ್ಲರ ನೆಪ್ಪಾಗುತ್ತಿಲ್ಲವೇ? ನಿನ್ನ ಮಾನವೀಯ ಹೃದಯ ಕಲ್ಲಾಯಿತೇ?
ಇರಲಿ. ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಐಸೊಲೇಷನ್ ವಾರ್ಡ್, ಹೋಂ ಕ್ವಾರಂಟೈನ್, ಕಂಟೈನ್ಮೆಂಟ್, ಲಾಕ್ ಡೌನ್, ಸೀಲ್ ಡೌನ್ ಹೀಗೆಲ್ಲಾ ಹತ್ತಾರು ಹೊಸ ಅನುಭವಗಳನ್ನು ವಿಶ್ವ ಪಡೆಯುತ್ತಿದೆ. ಈ ಎಲ್ಲಾವುಗಳ ಮಧ್ಯೆ ಪದೇ ಪದೇ ನಿನ್ನ ನೆಪ್ಪು. ಅದ್ಹ್ಯಾಗೆ, ಆರು ಮಕ್ಕಳನ್ನು ನೀ ಸಾಕಿ ಸಲುಹಿದ್ದು?
ಹೋಟೆಲ್, ಮಾರ್ಕೆಟ್, ಸ್ಕೂಲ್, ಟ್ಯೂಷನ್, ಬಸ್, ರೈಲು, ಧ್ಯಾನ, ಮಂತ್ರ - ಜಪ - ತಪ ಎಲ್ಲೆಂದರಲ್ಲಿ ನಿನ್ನನ್ನೇ ಎಡಬಿಡದೆ ಹುಡುಕುತ್ತಿವೆ. ಕನಿಷ್ಠ ಒಮ್ಮೆ, ಈ ಕಂದನನ್ನು ಕಾಣಲಾದರೂ ಬಾ,
ನಿನಗಾಗಿ ಕಾಯುವ,
ನಿನ್ನ ಮಗ
ಮಹೇಂದ್ರ (ಮಹಿ)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications