ಫ್ರೀಲಾನ್ಸ್ ಪತ್ರಕರ್ತರಾಗಬೇಕೆ? ಇಲ್ಲಿದೆ ಉತ್ತಮ ಅವಕಾಶ!
ಬರವಣಿಗೆಯೆಂಬುದು ಕೆಲವರಿಗೆ ಅಂತರ್ಗತ ಕಲೆಯಾಗಿ ಅರಳಿರುತ್ತದೆ, ಕೆಲವೊಬ್ಬರು ಬರೆದುಬರೆದೇ ಅಕ್ಷರಲೋಕದಲ್ಲಿ ತಮ್ಮದೊಂದು ಛಾಪನ್ನು ರೂಪಿಸಿಕೊಂಡಿರುತ್ತಾರೆ, ಕೆಲವರು ಬರವಣಿಗೆಯ ತುಡಿತ, ಕಲೆಗಾರಿಕೆ, ಪ್ರತಿಭೆ ಇದ್ದರೂ ಅವಕಾಶವಿಲ್ಲದೆ ಚಟಪಡಿಸುತ್ತಿರುತಾರೆ.
ಅಂಥ ಪ್ರತಿಭಾವಂತ ಹವ್ಯಾಸಿ, ಫ್ರೀಲಾನ್ಸ್ ಬರಹಗಾರರಿಗೆ ಒನ್ಇಂಡಿಯಾ ಕನ್ನಡ ಅತ್ಯುತ್ತಮ ವೇದಿಕೆಯನ್ನು ಕಲ್ಪಿಸುತ್ತಿದೆ. ತಮ್ಮ ಸುತ್ತಮುತ್ತಲ ಸುದ್ದಿಸಮಾಚಾರಗಳನ್ನು, ಆಗುಹೋಗುಗಳನ್ನು ವಿಶ್ವದಾದ್ಯಂತ ಪಸರಿಸಿರುವ ಲಕ್ಷಾಂತರ ಓದುಗರಿಗೆ ತಲುಪಿಸುವುದರ ಜೊತೆಗೆ, ದುಡಿತಕ್ಕೆ ತಕ್ಕ ಪ್ರತಿಫಲ ಪಡೆಯಲು ಕೂಡ ಇದು ಉತ್ತಮ ವೇದಿಕೆಯಾಗಲಿದೆ.
ಈಗಾಗಲೆ ಹಲವಾರು ಹವ್ಯಾಸಿ/ವೃತ್ತಿನಿರತ ಪತ್ರಕರ್ತರು ನಮ್ಮ ತಂಡ ಸೇರಿಕೊಂಡಿದ್ದಾರೆ. ನಿಮ್ಮಲ್ಲಿಯೂ ಸುದ್ದಿಯ ಹಸಿವಿದ್ದರೆ, ಆ ಸುದ್ದಿಯನ್ನು ನೆಟ್ಟಿಗರಿಗೆ ತಲುಪಿಸುವ ಹುಮ್ಮಸ್ಸಿದ್ದರೆ ಕೂಡಲೆ ನಮ್ಮ www.lekhaka.com ವೇದಿಕೆಯ ಮೂಲಕ ನಮ್ಮ ತಂಡವನ್ನು ಸೇರಿಕೊಳ್ಳಿ. ಕರ್ನಾಟಕದ ವಿವಿಧ ಜಿಲ್ಲೆಗಳ ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು.

ಗುಣಮಟ್ಟದ ಲೇಖನಗಳು
ಲೇಖಕರು ಯಾವುದೇ ಸಮಕಾಲೀನ ವಿಷಯದ ಬಗ್ಗೆ ಬರೆಯಬಹುದು. ಸ್ಥಳೀಯ ರಾಜಕೀಯ ಗುದ್ದಾಟ, ಮಾನವೀಯ ಸಂವೇದಿ ಲೇಖನಗಳು, ಎಲೆಮರೆ ಕಾಯಿಯಂಥ ವ್ಯಕ್ತಿಗಳ ವ್ಯಕ್ತಿಚಿತ್ರ, ನಿಮ್ಮೂರಿನ ಸುದ್ದಿಸ್ವಾರಸ್ಯಗಳು, ಕಟ್ಟೆಪುರಾಣಗಳು, ನೋಡತಕ್ಕ ಸ್ಥಳಗಳು, ಹೆಂಗಳೆಯರ ಗಾಸಿಪ್ಪುಗಳು...
ವಿಷಯ ಯಾವುದೇ ಇರಲಿ, ಗುಣಮಟ್ಟದಲ್ಲಿ ಮಾತ್ರ ರಾಜೀ ಮಾತೇ ಇಲ್ಲ. ವ್ಯಾಕರಣ ದೋಷ ರಹಿತ, ತಪ್ಪು ಮಾಹಿತಿಗಳಿಲ್ಲದ, ಅನವಶ್ಯಕ ಮಾಹಿತಿ ತುರುಕಿರದ, ಓದುಗರನ್ನು ಸೆಳೆಯುವ, ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ, ಈಗಾಗಲೆ ಪ್ರಕಟವಾಗಿಲ್ಲದ ತಾಜಾ ಸುದ್ದಿಸ್ವಾರಸ್ಯಗಳಿಗೆ ಹೆಚ್ಚಿನ ಆದ್ಯತೆ.
ಮಾಡಬೇಕಾಗಿರುವುದೇನು? ನಿಬಂಧನೆಗಳೇನು?
* ನಿಮ್ಮಲ್ಲಿ ಅರ್ಹತೆಯಿದ್ದಲ್ಲಿ ಸರಳವಾದ ಮತ್ತು ಸಂಪೂರ್ಣ ಮಾಹಿತಿಗಳಿಂದ ಕೂಡಿದ ನಿಮ್ಮ ಬಯೋಡೇಟಾವನ್ನು ಸಿದ್ಧಪಡಿಸಿಕೊಳ್ಳಿ. ಬಯೋಡೇಟಾ ಇಂಗ್ಲಿಷ್ ನಲ್ಲಿ ಇರಲಿ. ಪತ್ರಕರ್ತರಿಗೆ ಮತ್ತು ಬರವಣಿಗೆಯ ಅನುಭವವಿರುವವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
* ಯುವ, ಪ್ರತಿಭಾವಂತ ಲೇಖಕರ ವೇದಿಕೆಯಾಗಿರುವ www.lekhaka.com ವೆಬ್ ತಾಣದಲ್ಲಿ ನೋಂದಾವಣಿ ಮಾಡಿಕೊಳ್ಳಿ. ಅನುಮೋದನೆಗೊಂಡರೆ, ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ.
* ಬರಹಗಳನ್ನು ಲೇಖಕ.ಕಾಂ ಮೂಲಕವೇ ನೀಡತಕ್ಕದ್ದು. ಉತ್ತಮವಾಗಿರುವ ಲೇಖನಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಂತಿಮ ತೀರ್ಮಾನ ಸಂಪಾದಕೀಯ ಮಂಡಳಿಯದ್ದು ಆಗಿರುತ್ತದೆ.
* ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ಬರೆದಿರಬೇಕು. ಇತರ ಫಾಂಟ್ ಬಳಸಿ ಹಾಕಿರುವ (ಓದಲು ಕಷ್ಟವಾಗುವಂಥ) ಲೇಖನಗಳನ್ನು ತಿರಸ್ಕರಿಸಲಾಗುವುದು.
* ಕಾಪಿರೈಟ್ ಉಲ್ಲಂಘನೆಯಾಗಿರದ, ತಾವಾಗಿಯೇ ಖುದ್ದಾಗಿ ತೆಗೆದಿರುವ ಅಥವಾ ನಂಬಹರ್ಲ ಮೂಲದ ಫೋಟೋ ಮತ್ತು ಆಯಾ ಸುದ್ದಿಯನ್ನು ಹಿಡಿದಿಡುವ ವಿಡಿಯೋಗಳಿಗೆ ಕೂಡ ಪ್ರಾಧಾನ್ಯತೆ ನೀಡಲಾಗುವುದು.
* ಬ್ರೇಕಿಂಗ್ ಸುದ್ದಿಗಳನ್ನು, ಫೋಟೋ ಮತ್ತು ವಿಡಿಯೋ ಸಮೇತ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಲುಪಿಸಬಹುದು. ಆದರೆ, ನಂತರ ಲೇಖಕ.ಕಾಂಗೆ ಪ್ರಕಟವಾದ ಲೇಖನಗಳನ್ನು ಸೇರಿಸತಕ್ಕದ್ದು.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications