ಬಾಲ್ಯವಿವಾಹದ ಸುಳಿಯಲ್ಲಿ ಹೆಣ್ಮಕ್ಕಳು: ಇದನ್ನು ತಪ್ಪಿಸುವುದು ಹೇಗೆ?
ಕೇವಲ ಜವಾಬ್ದಾರಿ ಮುಗಿಸಬೇಕೆನ್ನುವ ಮನಸ್ಥಿತಿಯಿಂದಲೋ? ಅಯ್ಯೋ ಹೆಣ್ಮಕ್ಕಳನ್ನೆಷ್ಟು ದಿನ ಇಟ್ಕೋಳ್ಳೋದು? ಮದುವೆ ಮಾಡಿ ಮುಗಿಸಿ ಕೈತೊಳೆದುಕೊಳ್ಳುವ ಆತುರದಿಂದಲೋ? ಒಟ್ಟಾರೆ ಎಷ್ಟೇ ಕಠಿಣ ಕ್ರಮವನ್ನು ಕೈಗೊಂಡು ಬಾಲ್ಯ ವಿವಾಹ ನಿಷೇಧಿಸಿದ್ದರೂ ಅಲ್ಲಲ್ಲಿ ಸದ್ದಿಲ್ಲದೆ ಬಾಲ್ಯವಿವಾಹಗಳು ನಡೆಯುತ್ತಿವೆ. ಏನೂ ಅರಿಯದ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದು, ಕೆಲವೇ ಕೆಲವು ಪ್ರಕರಣಗಳು ಮಾತ್ರ ಹೊರಬಂದು ತಡೆಹಿಡಿಯಲ್ಪಡುತ್ತವೆ ಎನ್ನುವುದನ್ನು ಹೊರತು ಪಡಿಸಿದರೆ ಬಹುತೇಕ ಪ್ರಕರಣಗಳು ಬಯಲಿಗೆ ಬರುವುದೇ ಇಲ್ಲ.
ಇಲ್ಲಿ ಹೆತ್ತವರು ಜವಬ್ದಾರಿ ಕಳೆದುಕೊಂಡಿರುತ್ತಾರೆ. ಮನೆ ತುಂಬಿಸಿಕೊಂಡವರು ಚಿಕ್ಕಹುಡುಗಿ ನಾವು ಹೇಳಿದ್ದನ್ನು ಮಾಡಿಕೊಂಡು ತೆಪ್ಪಗಿರುತ್ತದೆ ಎಂಬ ಖುಷಿಯಲ್ಲಿರುತ್ತಾರೆ. ಆದರೆ ಏನೂ ಅರಿಯದ ಹುಡುಗಿ ಚಿಕ್ಕವಯಸ್ಸಿಗೆ ದೊಡ್ಡ ಜವಬ್ದಾರಿ ವಹಿಸಿಕೊಂಡು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹೆತ್ತವರಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟು ಬಿಟ್ಟರೆ ಆಕೆ ಸುಖವಾಗಿರುತ್ತಾಳೆ ಎಂಬ ನಂಬಿಕೆಯಿರುತ್ತದೆ. ಆದರೆ ಒಂದು ವೇಳೆ ಆಕೆಯನ್ನು ಗಂಡ ಚೆನ್ನಾಗಿ ನೋಡಿಕೊಂಡರೂ ದೈಹಿಕವಾಗಿ ಹಲವು ಸಮಸ್ಯೆಗಳು ಬಾಧಿಸುವುದು ಸಹಜವಾಗಿರುತ್ತದೆ.

ಏಕೆಂದರೆ ಆಕೆಗೆ ವಯಸ್ಸು ಚಿಕ್ಕದಾಗಿರುವುದರಿಂದ ಮದುವೆ ನಂತರದ ಗಂಡ, ಮಕ್ಕಳು ಸೇರಿದಂತೆ ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದಾಗಿ ಮಾನಸಿಕವಾಗಿ ಒತ್ತಡಗೊಳಗಾಗಬೇಕಾಗುತ್ತದೆ. ಅಲ್ಲದೆ ಹೆತ್ತವರೇ ವಯಸ್ಸಿಗೆ ಮೀರಿದ ಜವಬ್ದಾರಿ ಹೊರಿಸಿದಂತಾಗುತ್ತದೆ. ಇನ್ನು ಪ್ರಾಪಂಚಿಕ ವಿಚಾರಗಳು ಸರಿಯಾಗಿ ಗೊತ್ತಿಲ್ಲದ ಕಾರಣಗಳು, ಅಲ್ಲದೆ ಲೈಂಗಿಕ ದೌರ್ಜನ್ಯಕ್ಕೆ, ಬಲತ್ಕಾರಕ್ಕೊಳಗಾಗಿ ಅದು ಮಾನಸಿಕವಾಗಿಯೂ ಪರಿಣಾಮ ಬೀರಬಹುದು. ಲೈಂಗಿಕ ರೋಗಗಳಿಗೂ ಕಾರಣವಾಗಬಹುದು.
ಅಪ್ರಾಪ್ತ ವಯಸ್ಸಿನ ವಿವಾಹ ಸಂಕಷ್ಟ ತರಬಹುದು
ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತ ಉಂಟಾಗುತ್ತದೆ. ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಆಕೆ ಮದುವೆಯಾದ ಬಳಿಕ ಗರ್ಭಿಣಿಯಾದರೂ ಕೆಲವೊಮ್ಮೆ ವಿಕಲಾಂಗ ಮಗುವಿಗೆ ಜನ್ಮ ನೀಡುವ ಸಂಭವವಿರುತ್ತದೆ. ರಕ್ತಹೀನತೆಯಿಂದಾಗಿ ಮಗುವಿನ ಬೆಳವಣಿಗೆಯಾಗದೆ ಹೊಟ್ಟೇಯಲ್ಲೇ ಮರಣಿಸುವ ಸಂಭವವೂ ಇರುತ್ತದೆ. ಇದು ಶಿಶು ಮರಣ, ಮಕ್ಕಳ ಮರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದ ಅದೆಲ್ಲವನ್ನು ನಿಭಾಯಿಸಲು ಸಾಧ್ಯವಾಗದೆ ಮಾನಸಿಕ ದೌರ್ಬಲ್ಯತೆ ಮತ್ತು ಖಿನ್ನತೆ ಬಾಧಿಸುತ್ತದೆ. ಎಲ್ಲೋ ಒಂದು ಕಡೆ ಜವಬ್ದಾರಿಯ ಭಯದಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ತಮ್ಮ ವಯಸ್ಸಿನವರು ಸ್ವಾತಂತ್ರ್ಯವಾಗಿ ಓಡಾಡುತ್ತಾ ಖುಷಿಯಾಗಿರುವುದನ್ನು ಕಂಡು ಮನಸ್ಸಿನೊಳಗೆ ಕೊರಗುವುದು, ಮದುವೆಯಾಗಿ ಎಲ್ಲ ಕಳೆದು ಹೋಯಿತೆಂಬ ಕೀಳರಿಮೆಯೂ ಕಾಡಬಹುದು. ಕೆಲವೊಮ್ಮೆ ಅಪಮಾನಕ್ಕೊಳಗಾಗಿ ಆತ್ಮಹತ್ಯೆಯತ್ತಲೂ ಚಿಂತಿಸಬಹುದು. ಗಂಡ ಹೆಂಡಿರ ನಡುವೆ ವಯಸ್ಸಿನ ಅಂತರದ ಕಾರಣದಿಂದ ಸಾಮರಸ್ಯಕ್ಕೂ ಧಕ್ಕೆ ಬರಬಹುದು. ಇದರಿಂದ ಚಿಕ್ಕ ವಯಸ್ಸಿಗೆ ಹಲವು ರೀತಿಯ ಸಮಸ್ಯೆ ಎದುರಿಸುವ ಪ್ರಮೇಯ ಬರಬಹುದು.

ಬಾಲ್ಯವಿವಾಹ ತಡೆಯುವಲ್ಲಿ ಪಾಲಕರ ಪಾತ್ರ ಅಗತ್ಯ
ಇನ್ನಾದರೂ ಚಿಕ್ಕ ವಯಸ್ಸಿಗೆ ಮದುವೆ ಮಾಡಿ ಹೆತ್ತವರು ಜವಬ್ದಾರಿ ಕಳೆದುಕೊಳ್ಳಬಹುದು. ಆದರೆ ಮದುವೆ ನಂತರ ಚಿಕ್ಕ ವಯಸ್ಸಿಗೆ ಆಕೆ ಎಷ್ಟೊಂದು ಮಾನಸಿಕ ಮತ್ತು ದೈಹಿಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಆದ್ದರಿಂದ ಇನ್ನು ಮುಂದೆಯಾದರೂ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರ ಆರೋಗ್ಯವಂತ ಬದುಕನ್ನು ಹಾಳು ಮಾಡುವುದನ್ನು ತಡೆಯುವುದು ಅಗತ್ಯವಾಗಿದೆ. ಬಾಲ್ಯ ವಿವಾಹ ಕುರಿತಂತೆ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುವುದು ಇಂದಿನ ಅಗತ್ಯವಾಗಿದೆ.
ಇಷ್ಟಕ್ಕೂ ಬಾಲ್ಯ ವಿವಾಹವನ್ನು ತಡೆಯಬೇಕಾದರೆ ಮುಖ್ಯ ಪಾತ್ರ ವಹಿಸಬೇಕಾದವರು ಪಾಲಕರೇ ಆಗಿರುತ್ತಾರೆ. ಅವರು ಎಚ್ಚರಿಕೆ ವಹಿಸಿದರೆ ಬಾಲ್ಯವಿವಾಹ ತಡೆಯುವುದು ಕಷ್ಟವಾಗಲಾರದು. ಇನ್ನು ಸಾಮೂಹಿಕ ವಿವಾಹ ಏರ್ಪಡಿಸುವವರು ಕೂಡ ವಯಸ್ಸಿನ ಅಧಿಕೃತ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ. ಅಧಿಕಾರಿಗಳು ಬಾಲ್ಯ ವಿವಾಹ ನಡೆದ ಬಗ್ಗೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಬೇಕಾಗುತ್ತದೆ.
ಬಾಲ್ಯವಿವಾಹದತ್ತ ಎಚ್ಚರಿಕೆ ಇರಲಿ
ಅಧಿಕಾರಿಗಳು ಸಮುದಾಯಕ್ಕೆ ಬಾಲ್ಯ ವಿವಾಹ ಕಾಯ್ದೆಯಡಿ ಇರುವ ಅವಕಾಶಗಳ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು, ಕುಟುಂಬದ ಘನತೆ- ಗೌರವಕ್ಕೆ ಧಕ್ಕೆ ಬಾರದಂತೆ ಬಹಳ ಎಚ್ಚರಿಕೆಯಿಂದ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ. ಜತೆಗೆ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಅವರ ಪ್ರಥಮ ಗುರಿಯಾಗಿರಬೇಕು. ಇದಕ್ಕಿಂತ ಹೆಚ್ಚಾಗಿ ಪೋಷಕರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರೇ ಬದುಕನ್ನು ಕಟ್ಟಿಕೊಳ್ಳಲು ದಾರಿ ಮಾಡಿಕೊಡಬೇಕು. ಆ ನಂತರ ಮದುವೆ ಬಗ್ಗೆ ಅವರೇ ನಿರ್ಧಾರ ಮಾಡಿಕೊಳ್ಳುತ್ತಾರೆ. ಇನ್ನಾದರೂ ಬಾಲ್ಯವಿವಾಹವನ್ನು ತಡೆಯುವತ್ತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications