Bihar Exit Poll: ನ್ಯೂಸ್ ಎಕ್ಸ್ ಸಮೀಕ್ಷೆಯ ವಿವರ
ನ್ಯೂಸ್ ಎಕ್ಸ್ ಮತ್ತು ಡಿವಿ ರಿಸರ್ಚ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾ ಮೈತ್ರಿಕೂಟ ಸರಳ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100ರಂತೆ ಒಟ್ಟು 243 ವಿಧಾನಸಭೆ ಕ್ಷೇತ್ರಗಳಲ್ಲಿ 24,300 ಮಂದಿಯನ್ನು ಈ ಸಮೀಕ್ಷೆಗೆ ಬಳಸಲಾಗಿತ್ತು.
ನ್ಯೂಸ್ ಎಕ್ಸ್-ಡಿವಿ ರೀಸರ್ಚ್ ಸಮೀಕ್ಷೆಯು ಎನ್ಡಿಎ 110-117 ಸೀಟುಗಳೊಂದಿಗೆ ಸರಳ ಬಹುಮತಕ್ಕೆ ಕೊರತೆ ಎದುರಿಸಲಿದೆ ಎಂದು ಹೇಳಿದೆ. ಇನ್ನೊಂದೆಡೆ ಆರ್ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ವಿರೋಧಪಕ್ಷವು 108-123 ಮತಗಳನ್ನು ಗಳಿಸಲಿದೆ ಎಂದು ಅಂದಾಜಿಸಿದೆ.
ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಹೆಚ್ಚಿನ ಮಂದಿ ತೇಜಸ್ವಿ ಯಾದವ್ ಎಂದು ಹೆಸರಿಸಿದ್ದಾರ. ಶೇ 34% ಮಂದಿ ತೇಜಸ್ವಿ ಯಾದವ್ ಪರ ಇದ್ದಾರೆ. ನಿತೀಶ್ ಕುಮಾರ್ ಪರ ಶೇ 32% ರಷ್ಟು ಮಂದಿ ಒಲವು ತೋರಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಶೇ 28ರಷ್ಟು ಮಂದಿಗೆ ನಿರುದ್ಯೋಗ ಮತ್ತು ಶಿಕ್ಷಣ ಅತಿ ದೊಡ್ಡ ಸಮಸ್ಯೆಗಳು ಎನಿಸಿವೆ. ಶೇ 20ರಷ್ಟು ಜನರು ಅಭಿವೃದ್ಧಿಗಾಗಿ ಮತ ನೀಡಿರುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ.

ಮೈತ್ರಿಕೂಟಗಳು ಪಡೆಯಲಿರುವ ಸೀಟುಗಳು
ಎನ್ಡಿಎ: 110-117
ಮಹಾಮೈತ್ರಿಕೂಟ: 108-123
ಎಲ್ಜೆಪಿ: 4-10
ಇತರೆ 8-23

ಮತ ಹಂಚಿಕೆ
ಮಹಾ ಮೈತ್ರಿಕೂಟ: 39-47%
ಎನ್ಡಿಎ: 33-41%
ಎಲ್ಜೆಪಿ: 7-12%
ಇತರೆ: 5-14%

ಚುನಾವಣೆಯ ಮೇಲೆ ಪ್ರಭಾವ
ಮೋದಿ ಅವರ ಸಮಾವೇಶಗಳು ನಿರ್ಧಾರ ಬದಲಿಸಿದೆ ಎಂದು ಶೇ 42ರಷ್ಟು ಮಂದಿ ಹೇಳಿದ್ದಾರೆ. ಶೇ 25ರಷ್ಟು ಮಂದಿ ಅವರ ಮಾತುಗಳು ತಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ ಎಂದಿದ್ದಾರೆ. ಶೇ 33ರಷ್ಟು ಜನರಿಗೆ ಆ ಸಮಾವೇಶಗಳ ಪ್ರಭಾವದ ಬಗ್ಗೆ ಖಾತರಿಯಿಲ್ಲ.
Recommended Video

ಮತ ಹಾಕಲು ಕಾರಣ
ಶೇ 33ರಷ್ಟು ಮಂದಿ ನಿರುದ್ಯೋಗದ ಸಮಸ್ಯೆ ಕಾರಣದಿಂದ ಆರ್ಜೆಡಿ ಅಥವಾ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ತಮಗೆ ಮುಖ್ಯವಾಗುತ್ತದೆ ಎಂದು ಶೇ 34ರಷ್ಟು ಮಂದಿ ಹೇಳಿದ್ದಾರೆ. ಶೇ 41ರಷ್ಟು ಜನರು ಆರ್ಜೆಡಿಯು ಕೆಲಸ ಒದಗಿಸುವುದರ ಬಗ್ಗೆ ನೀಡಿರುವ ಭರವಸೆಯು ಎನ್ಡಿಎ ಭರವಸೆಗಿಂತ ವಿಶ್ವಾಸಾರ್ಹವಾಗಿದೆ ಎಂದಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications