ವಾರಾಂತ್ಯದಲ್ಲಿ ಬೆಂಗಳೂರಿಗರು ರಿಲ್ಯಾಕ್ಸ್ ಮಾಡಲು ಚಟುವಟಿಕೆಗಳು, ಸ್ಥಳಗಳ ಪಟ್ಟಿ
ಬೆಂಗಳೂರು, ಅಕ್ಟೋಬರ್ 06: ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿರುವ ಸಾವಿರಾರು ಮಂದಿ ನಗರವನ್ನು ತೊರೆದು ವಿಭಿನ್ನಗಳಿಗೆ ಹೋಗಲು ಮುಂದಾಗುತ್ತಾರೆ. ಕೆಲವರು ಬೆಂಗಳೂರಿನಂತ ಬೃಹತ್ ನಗರದಲ್ಲಿ ಸಾಕಷ್ಟು ಜನರಿಗೆ ಗೊತ್ತಿಲ್ಲದ ಸ್ಥಳಗಳು, ಅಂಗಡಿಗಳು, ಹೋಟೆಲ್ಗಳನ್ನು ಹುಡುಕುತ್ತಾ ಅನ್ವೇಷಣೆಗೆ ಮುಂದಾಗುತ್ತಾರೆ. ಅಂತಹ ಕೆಲವು ಪ್ರದೇಶಗಳು ಇಲ್ಲಿವೆ.
ನಾಡಹಬ್ಬ ದಸರಾ ಬರುತ್ತಿದ್ದು, ಈಗ ಮತ್ತಷ್ಟು ಚುಟುವಟಿಕೆಗಳು ಆರಂಭವಾಗುತ್ತವೆ. ಅಕ್ಟೋಬರ್ ಬಂದರೆ ಬೆಂಗಳೂರಿನಲ್ಲಿ ಹಲವಾರು ಕಲೆ, ಸಂಗೀತ, ಆಹಾರ ಉತ್ಸವಗಳು ಮತ್ತು ಇನ್ನಷ್ಟು ಕಾರ್ಯಕ್ರಮಗಳು ಜರುಗುತ್ತವೆ. ಈ ವಾರಾಂತ್ಯಕ್ಕೆ ನಿಮ್ಮಲ್ಲಿ ಯಾವುದೇ ಪ್ಲಾನ್ ಇಲ್ಲದಿದ್ದರೆ ನಿಮ್ಮ ಸಮಯವನ್ನು ಅರ್ಥಪೂರ್ಣವಾಗಿಸಲು ಬಯಸಿದರೆ ಕೆಲವು ಒಳ್ಳೆಯ ಕಾರ್ಯಕ್ರಮಗಳು ಇಲ್ಲಿವೆ.

ಉತ್ತರಿ ಬೆಟ್ಟ ಸೂರ್ಯೋದಯ ಟ್ರೆಕ್ಕಿಂಗ್:
ಈ ವಾರಾಂತ್ಯಕ್ಕೆ ನೀವು ಹೊಸ ಸಾಹಸಮಯ ಚಟುವಟಿಕೆ ಮಾಡಲು ಮುಂದಾದರೆ ನಗರದ ಅತ್ಯುತ್ತಮ ಟ್ರಯಲ್ ಉತ್ತರಿ ಬೆಟ್ಟದ ಮೂಲಕ ಪಾದಯಾತ್ರೆ ಮಾಡಬಹುದು. ಇದು ಇರುವುದು ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯಲ್ಲಿ. ಇದು ಹಚ್ಚ ಹಸಿರಿನ ದೃಶ್ಯದಿಂದ ಸುತ್ತುವರೆದಿರುವ ಸರಿಸುಮಾರು 5 ಕಿಲೋಮೀಟರ್ ಚಾರಣ ಪ್ರದೇಶವಾಗಿದೆ.
ಕಾಫಿ ಪೇಂಟಿಂಗ್ ವರ್ಕ್ಶಾಪ್:
ಇದು ಕಲಾಭಿಮಾನಿಗಳಿಗೆ ಉತ್ತಮ ಆಯ್ಕೆ. ನಿಮ್ಮಲ್ಲಿ ಅಡಗಿರುವ ಕಲೆ ಪ್ರತಿಭೆಯನ್ನು ಹೊರಹಾಕಲು ಅನುವು ಮಾಡಿಕೊಡುವ ಕಾರ್ಯಾಗಾರಕ್ಕೆ ಹೋಗಬಹುದು. ಈ ಕಾರ್ಯಾಗಾರದಲ್ಲಿ, ಕಾಫಿ ಬಳಸಿ ಹೇಗೆ ಚಿತ್ರಿಸಬೇಕೆಂದು ನೀವು ಕಲಿಯಬಹುದು. ಇದು ಇಂದಿರಾನಗರದ ಕಾನ್ಸು ಎಂಬಲ್ಲಿ ನಡೆಯಲಿದೆ.
ಭಾರತೀಯ ಸಂಗೀತ ಅನುಭವ ಮ್ಯೂಸಿಯಂ:
ನೀವು ಸಂಗೀತ ಪ್ರೇಮಿಗಳಾಗಿದ್ದರೆ ನಗರದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಇದು ಒಂದಾಗಿದೆ. ಈ ಮ್ಯೂಸಿಕ್ ಮ್ಯೂಸಿಯಂನಲ್ಲಿ ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಅರ್ಥಮಾಡಿಸುತ್ತದೆ. ಇದು ಜೆಪಿ ನಗರದಲ್ಲಿದೆ. ಇದು ಮಂಗಳವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ದಾಂಡಿಯಾ ಮತ್ತು ಗರ್ಬಾ ಕಾರ್ಯಾಗಾರ:
ನವರಾತ್ರಿ ಮತ್ತು ಇತರ ಹಬ್ಬಗಳ ಹಿನ್ನೆಲೆಯಲ್ಲಿ ದಾಂಡಿಯಾ ಮತ್ತು ಗರ್ಬಾ ಕಲಾ ಉತ್ಸಾಹವು ನಗರದಲ್ಲಿ ನಡೆಯಲಿದೆ. ಈ ವರ್ಷದ ಹಬ್ಬದ ಋತುವಿನಲ್ಲಿ ಸಾಂಸ್ಕೃತಿಕ ನೃತ್ಯವನ್ನು ನೋಡಲು ನೀವು ಮುಂದಾಗಬಹುದು. ಇದು ಝೆಸ್ಟ್ ಫಿಟ್ನೆಸ್ ಸ್ಟುಡಿಯೋದಲ್ಲಿ ಅಕ್ಟೋಬರ್ 8 ರಂದು ನಡೆಯಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications