60 ವರ್ಷದ ಕೇರಳದ ದಿನಗೂಲಿ ಕಾರ್ಮಿಕ ಈಗ ಫೇಮಸ್ ಮಾಡೆಲ್!
ತಿರುವನಂತಪುರಂ, ಫೆಬ್ರವರಿ 15: ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್ ಆಗಿದ್ದಾರೆ. ಕೋಯಿಕ್ಕೋಡ್ನ ಈ ವ್ಯಕ್ತಿ ತನ್ನ ಮಸುಕಾದ ಲುಂಗಿ ಮತ್ತು ಶರ್ಟ್ ಧರಿಸಿಯೇ ತನ್ನ ಸ್ಥಳೀಯ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಆದರೆ ಈಗ ತನ್ನ ಸೂಪರ್ ಗ್ಲಾಮ್ ಮೇಕ್ ಓವರ್ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಮಾಡೆಲ್ ಆಗಿದ್ದಾರೆ.
ಮಮ್ಮಿಕ್ಕಾ ಎಂಬ ದಿನಗೂಲಿ ಕಾರ್ಮಿಕ ಇತ್ತೀಚೆಗೆ ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್ನಲ್ಲಿ ಸೂಟ್ ಧರಿಸಿ ಮತ್ತು ಐಪ್ಯಾಡ್ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗ್ರಾಫರ್ನ ಕೈಚಳಕ ಎಂದು ಕೊಂಡಾಡಿದ್ದಾರೆ.
ಅಂದ ಹಾಗೆ ಈ ದಿನಗೂಲಿ ಕಾರ್ಮಿಕನ ಮಾಡೆಲಿಂಗ್ ಪ್ರತಿಭೆಯನ್ನು ಗುರುತಿಸಿದವರು ಛಾಯಾಗ್ರಾಹಕ ಶರೀಕ್ ವಯಾಲಿಲ್. ಈ ಹಿಂದೆ ಛಾಯಾಗ್ರಾಹಕ ಶರೀಕ್ ವಯಾಲಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಮ್ಮಿಕ್ಕಾರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ನಟ ವಿನಾಯಕನ್ ಜೊತೆ ಹೋಲಿಕೆ ಮಾಡಲಾಗಿತ್ತು. ಹಾಗೆಯೇ ಸಖತ್ ವೈರಲ್ ಆಗಿತ್ತು.

ಆ ಬಳಿಕ ಯಾವುದೇ ಮಾಡೆಲ್ಗಳನ್ನು ಆಯ್ಕೆ ಮಾಡಬೇಕಾದಾಗ ಪರಿಸ್ಥಿತಿ ಬಂದಾಗ ಛಾಯಾಗ್ರಾಹಕ ಶರೀಕ್ ವಯಾಲಿಲ್ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾರನ್ನೇ ಆಯ್ಕೆ ಮಾಡಿದ್ದಾರೆ. ಇನ್ನು ಮಮ್ಮಿಕ್ಕಾಗೆ ಮೇಕಪ್ ಮಾಡಿದ್ದು ಕಲಾವಿದ ಮಜ್ನಾಸ್. ಆಶಿಕ್ ಫುವಾದ್ ಮತ್ತು ಶಬೀಬ್ ವಯಾಲಿಲ್ ಪ್ರಸಾದನ ಸಹಾಯಕರಾಗಿದ್ದರು.
ಸಹಜ ಸೌಂದರ್ಯಕ್ಕೆ ಕಳೆ ನೀಡಿದ ಛಾಯಾಗ್ರಾಹಕ
ಯಾವ ವಯಸ್ಸಿನಲ್ಲಿ ನಮ್ಮ ಜೀವನದಲ್ಲಿ ಏನು ಬದಲಾವಣೆ ಆಗುತ್ತದೆ ಎಂದು ನಮಗೂ ಕೂಡಾ ಊಹೆ ಮಾಡಲು ಸಾಧ್ಯವಾಗದು. ಅಂತಹ ಬದಲಾವಣೆ ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾ ಬಾಳಿನಲ್ಲಿ ಆಗಿದೆ. 60 ವರ್ಷದ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾರ ದೈಹಿಕ ಸೌಂದರ್ಯಕ್ಕೆ ಛಾಯಾಗ್ರಾಹಕ ಇನ್ನಷ್ಟು ಕಳೆ ನೀಡಿ ಈಗ ರೂಪದರ್ಶಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಪ್ರಸಾಧನ (ಮೇಕಪ್) ಕಲಾವಿದ ಮಜ್ನಾಸ್ ಕೂಡಾ ಕೈಜೋಡಿಸಿದ್ದಾರೆ.
ಇನ್ಸ್ಟಾಗ್ರಾಂ ಖಾತೆ ತೆರೆದಿರುವ ಮಮ್ಮಿಕ್ಕರ
ಮಮ್ಮಿಕ್ಕ ಈಗ ತನ್ನದೇ ಆದ ಇನ್ಸ್ಟಾಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾರೆ. ಅಲ್ಲಿ ಅವರು ಸಾಮಾನ್ಯ ಬಟ್ಟೆ ಮತ್ತು ಮೇಕ್ ಓವರ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಈಗ ತಮ್ಮ ಹುಟ್ಟೂರಾದ ಕೋಯಿಕ್ಕೋಡ್ನ ಕೊಡಿವಳ್ಳಿಯ ವೆನ್ನಕ್ಕಾಡ್ನಲ್ಲಿ ಹೀರೋ ಆಗಿದ್ದಾರೆ. ಈ ಯಶಸ್ಸಿನಿಂದ ಖುಷಿಯಾಗಿರುವ ಮಮ್ಮಿಕ್ಕ ನಿತ್ಯದ ಕೆಲಸದ ಜೊತೆಗೆ ಆಫರ್ಗಳು ಬಂದರೆ ಮಾಡೆಲಿಂಗ್ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಛಾಯಾಗ್ರಾಹಕ ಶರೀಕ್ ವಯಾಲಿಲ್ಗೆ ನೆಟ್ಟಿಗರ ಶಭಾಸ್ಗಿರಿ
ಈ ನಡುವೆ ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್ ಆಗಲು ಕಾರಣೀಭೂತರಾದ ಛಾಯಾಗ್ರಾಹಕ ಶರೀಕ್ ವಯಾಲಿಲ್ಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ. ದಿನಗೂಲಿ ಕಾರ್ಮಿಕರಿಗೂ ಕಲೆ ಇದೆ ಎಂದು ತೋರಿಸಿಕೊಟ್ಟ ನಿಮಗೆ ಧನ್ಯವಾದ ಎಂದು ನೆಟ್ಟಿಗರು ಹೇಳಿದ್ದಾರೆ. ಉತ್ತಮ ಕೆಲಸ, ಉತ್ತಮ ಛಾಯಾಗ್ರಹಣ ಎಂದು ಹೇಳಿದ್ದಾರೆ. ಇನ್ನು ಕೆಲವರು ನೀವು ಅತ್ಯುತ್ತಮ ಛಾಯಾಗ್ರಾಹಕ ಎಂದು ಹೊಗಳಿದ್ದಾರೆ. (ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications