ಎರಡು ಮಸಾಲೆ ದೋಸೆ ತಿಂದರೆ ಇನ್ನೊಂದು ತುತ್ತು ಬಾಯಿಗಿಡುವಂತೆಯೇ ಇಲ್ಲ!
ತೆಳುವಾದ, ಬಂಗಾರದ ಬಣ್ಣದ ದೋಸೆ, ಅದರೊಳಗೆ ಆಲೂ ಪಲ್ಯ, ಸುತ್ತ ಹರಡಿಕೊಂಡಿರುವ ಕೆಂಪು ಚಟ್ನಿ, ಇಷ್ಟಿಷ್ಟೇ ಕರಗುವ ಬೆಣ್ಣೆ... ಮಸಾಲೆ ದೋಸೆಯನ್ನು ಹೀಗೆ ವಿವರಿಸುತ್ತಿದ್ದರೆ ನಾಲಗೆ ಮೇಲೆ ಧಾರಾಕಾರ ನೀರು ಜಿನುಗುತ್ತದೆ. ಆದರೆ ನಿಮಗೆ ಗೊತ್ತಿರಬೇಕಾದ ವಿಚಾರವೊಂದಿದೆ.
ನೀವು ಒಂದು ಮಸಾಲೆ ದೋಸೆ ತಿಂದಿರಿ ಅಂದರೆ, ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಬೇಕಾದ ಕ್ಯಾಲೋರಿಯ ಅರ್ಧದಷ್ಟು ನಿಮ್ಮ ದೇಹ ಸೇರಿದಂತೆಯೇ. ಐದು ಖಂಡ ವ್ಯಾಪ್ತಿಯ, ಐದು ದೇಶಗಳ ಅಧ್ಯಯನ ತಂಡವು ಅಧ್ಯಯನ ನಡೆಸಿದೆ.ಬೆಂಗಳೂರಿನಲ್ಲಿ ಮಾರಾಟ ಮಾಡುವ ಮಸಾಲೆ ದೋಸೆಯೆಂದರೆ 1023 ಕಿಲೋ ಕ್ಯಾಲೋರಿ ಇರುತ್ತದಂತೆ.
ಆರೊಗ್ಯವಂತ ವ್ಯಕ್ತಿಗೆ ದಿನಕ್ಕೆ 2,200 ಕಿಲೋ ಕ್ಯಾಲೋರಿ ಬೇಕಾಗುತ್ತದೆ. ಈ ಅಂಶವು ಈಚೆಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಭಾರತ, ಚೀನಾ, ಫಿನ್ ಲ್ಯಾಂಡ್ ಹಾಗೂ ಘಾನಾದಲ್ಲಿ ಆಹಾರ-ಖಾದ್ಯಗಳನ್ನು ಕ್ಯಾಲೋರಿ ಪ್ರಕಾರ ಅಳೆದು, ಅಧ್ಯಯನ ನಡೆಸಲಾಗಿದೆ.

ಇನ್ನು ಈ ಅಧ್ಯಯನದ ನೇತೃತ್ವ ವಹಿಸಿದ ಪ್ರೊ ರೆಬೆಕಾ ಪ್ರಕಾರ, ಒಂದು ಹೊತ್ತಿನ ಊಟ ಆರುನೂರು ಕಿಲೋ ಕ್ಯಾಲೋರಿಗಿಂತ ಕಡಿಮೆ ಇರಬೇಕು. ಇನ್ನು ಸೇವಾ ಸೌಲಭ್ಯದಲ್ಲಿ ಇರುವ ರೆಸ್ಟೋರೆಂಟ್ ಗಳಲ್ಲಿ 94% ಹಾಗೂ 74% ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ ನೀಡುವ ಆಹಾರ ಪದಾರ್ಥಗಳು 600 ಕಿಲೋಕ್ಯಾಲೋರಿಗಿಂತ ಹೆಚ್ಚೇ ಇರುತ್ತದೆ.
ಸರಕಾರಗಳು ರೆಸ್ಟೋರೆಂಟ್ ಗಳಿಗೆ ಕಡ್ಡಾಯ ಮಾಡಿ, ಯಾವ ಆಹಾರ ಪದಾರ್ಥಗಳು ಎಷ್ಟು ಕ್ಯಾಲೋರಿ ಇರುತ್ತವೆ ಎಂಬುದನ್ನು ಮೆನು ಲಿಸ್ಟ್ ನಲ್ಲಿ ಹಾಕಬೇಕು ಎಂದು ನಿಯಮಾವಳಿ ರೂಪಿಸಬೇಕು ಎಂದು ಅಧ್ಯಯನದಲ್ಲಿ ಅಭಿಪ್ರಾಯ ಪಡಲಾಗಿದೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ












Click it and Unblock the Notifications