Fact Check: ಪ್ರತಿಭಟನೆ ಮಾಡುತ್ತಿರುವ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದರೇ?
ನವದೆಹಲಿ, ಡಿಸೆಂಬರ್ 7: ಇಬ್ಬರು ವ್ಯಕ್ತಿಗಳು ಭಾರತದ ರಾಷ್ಟ್ರಧ್ವಜದ ಮೇಲೆ ನಿಂತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇಸರಿ ಪೇಟ ತೊಟ್ಟ ವ್ಯಕ್ತಿಯೊಬ್ಬ ಕೈಯಲ್ಲಿ ಶೂ ಹಿಡಿದು ನೆಲದ ಮೇಲೆ ಬಿದ್ದಿರುವ ತ್ರಿವರ್ಣ ಧ್ವಜದ ಮೇಲೆ ಇರಿಸಿರುವುದು ಈ ಫೋಟೊದಲ್ಲಿ ಕಾಣಿಸುತ್ತದೆ.
'ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ರೈತರ ಚಳವಳಿ ಎನಿಸಿದರೆ, ನಾನು ಅಂತಹ ಚಳವಳಿಯನ್ನು ವಿರೋಧಿಸುತ್ತೇನೆ. ಅಂತರ ರೈತರ ಚಳವಳಿ ನಾಚಿಕೆಗೇಡು. ಅವರು ದೇಶದ್ರೋಹಿಗಳು ಮತ್ತು ಅವರನ್ನು ಬಂಧಿಸಬೇಕು' ಎಂದು ವೈರಲ್ ಆಗಿರುವ ಈ ಪೋಸ್ಟ್ನಲ್ಲಿ ಬರೆಯಲಾಗಿದೆ. ಹಾಗಾದರೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ನಿಜಕ್ಕೂ ರಾಷ್ಟ್ರಧ್ವಜವನ್ನು ಈ ರೀತಿ ಅವಮಾನಿಸಿದ್ದಾರೆಯೇ?
ರಿವರ್ಸ್ ಇಮೇಜ್ ಸರ್ಚ್ ಅವಕಾಶವನ್ನು ಬಳಸಿಕೊಂಡು 'ಒನ್ ಇಂಡಿಯಾ' ನಡೆಸಿದ ಹುಡುಕಾಟದಲ್ಲಿ ಈ ಫೋಟೊ ಬಹಳ ಹಳೆಯದು ಎನ್ನುವುದು ಗೊತ್ತಾಗಿದೆ. ಇದು 2013ರಲ್ಲಿ ಲಂಡನ್ನಲ್ಲಿ ತೆಗೆದ ಚಿತ್ರ. ದಳ್ ಖಾಸ್ಲಾ ಯುಕೆ ಎಂಬ ಬ್ಲಾಗ್ನಲ್ಲಿ ಈ ಫೋಟೊ ಕಂಡುಬಂದಿದೆ. ಆ ಪೋಸ್ಟ್ಅನ್ನು 2013ರ ಆಗಸ್ಟ್ 17ರಂದು ಬಳಸಲಾಗಿತ್ತು.

'ಭಾರತದ ಸ್ವಾತಂತ್ರ್ಯ ದಿನ ಪ್ರತಿಭಟನೆ, ಭಾರತೀಯ ಹೈಕಮಿಷನ್ ಲಂಡನ್ 15ನೇ ಆಗಸ್ಟ್ 2013' ಎಂಬ ಶೀರ್ಷಿಕೆಯನ್ನು ಈ ಪೋಸ್ಟ್ಗೆ ನೀಡಲಾಗಿತ್ತು. 2013ರ ಆಗಸ್ಟ್ 15ರಂದು ಸಿಖ್ಖರು, ಕಾಶ್ಮೀರಿಗಳು ಮತ್ತು ಇತರೆ ಅಲ್ಪಸಂಖ್ಯಾತ ಗುಂಪುಗಳು ಭಾರತದ ಶೋಷಣೆ ಮತ್ತು ಅತಿಕ್ರಮಣದ ವಿರುದ್ಧ ಸೆಂಟ್ರಲ್ ಲಂಡನ್ನಲ್ಲಿ ಪ್ರತಿಭಟನೆ ನಡೆಸಿದ್ದರು.
1947ರಿಂದಲೂ ಸಿಖ್ ರಾಷ್ಟ್ರವು ಭಾರತದ ಅತಿಕ್ರಮಣದಲ್ಲಿದ್ದು, ಪಂಜಾಬ್ನಲ್ಲಿನ ಸಿಖ್ ತಾಯ್ನೆಲವನ್ನು ನಾಶಪಡಿಸಲು ಅನೇಕ ಪ್ರಯತ್ನಗಳು ನಡೆದಿವೆ ಮತ್ತು 1984ರಲ್ಲಿ ಹತ್ಯಾಕಾಂಡದೊಂದಿಗೆ ಸಿಖ್ ರಾಷ್ಟ್ರವನ್ನು ನಿರ್ನಾಮ ಮಾಡಲಾಯಿತು. ಸಿಖ್ ದೇಶವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಮತ್ತು ಪರಿಸರವಾಗಿ ಕೂಡ ನಾಶಪಡಿಸಲು ಇನ್ನೇನೂ ಉಳಿದಿಲ್ಲ ಎಂದು ಆ ಪೋಸ್ಟ್ನಲ್ಲಿ ಬರೆಯಲಾಗಿದೆ.
ಸುಮಾರು ಏಳು ವರ್ಷಗಳ ಹಿಂದೆ ಲಂಡನ್ನಲ್ಲಿ ನಡೆದ ಪ್ರತಿಭಟನೆಯ ಫೋಟೊವನ್ನು ಕೆದಕಿ ತೆಗೆದಿರುವ ಕೆಲವು ಕಿಡಿಗೇಡಿಗಳು, ಅದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಚಿತ್ರ. ರೈತರು ರಾಷ್ಟ್ರಧ್ವಜವನ್ನು ತುಳಿದು ಅವಮಾನ ಮಾಡಿದ್ದಾರೆ ಎಂದು ಜನರನ್ನು ತಪ್ಪುದಾರಿಗೆ ಎಳೆಯುವಂತೆ ಬಿಂಬಿಸಿದೆ.

Fact Check
ಕ್ಲೇಮು
ಪ್ರತಿಭಟನಾ ನಿರತ ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂಬಂತಹ ಫೋಟೊ.
ಪರಿಸಮಾಪ್ತಿ
ಇದು 2013ರಲ್ಲಿ ಲಂಡನ್ನಲ್ಲಿ ತೆಗೆದ ಚಿತ್ರ.
Rating
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications