Fact Check: ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಆರೋಗ್ಯಕ್ಕೆ ಹಾನಿಕರವೇ?
ನವದೆಹಲಿ, ಸೆಪ್ಟೆಂಬರ್ 4: ದೇಹದ ಉಷ್ಣಾಂಶ ಪರೀಕ್ಷಿಸುವ ಟೆಂಪರೇಚರ್ ಗನ್ಗಳು ಅಥವಾ ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಚರ್ಮಕ್ಕೆ ಹಾನಿಕರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂಬ ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ.
Recommended Video
ಕೋವಿಡ್-19ನ ಈ ಕಾಲದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಈ ಥರ್ಮಾಮೀಟರ್ಗಳು ಸ್ಪರ್ಶರಹಿತ ತಂತ್ರಜ್ಞಾವನ್ನು ಹೊಂದಿದ್ದು, ದೇಶದ ಉಷ್ಣತೆಯನ್ನು ಅಳೆಯಲು ಇನ್ಫ್ರಾರೆಡ್ ತರಂಗಗಳನ್ನು ಬಳಸಿಕೊಳ್ಳುತ್ತವೆ.
ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಬೆಳಕನ್ನು ಕೇಂದ್ರೀಕರಿಸಲು ಲೆನ್ಸ್ ಬಳಸಿದಾಗ ಈ ತಂತ್ರಜ್ಞಾನವು ತಾಪವನ್ನು ಸೃಷ್ಟಿಸುತ್ತದೆ. ಇನ್ಫ್ರಾರೆಡ್ ವಿಕಿರಣಗಳನ್ನು ಥರ್ಮಾಪೈಲ್ ಹೀರಿಕೊಳ್ಳುತ್ತದೆ ಹಾಗೂ ಅದನ್ನು ತಾಪಮಾನವಾಗಿ ಬದಲಿಸುತ್ತದೆ. ಇದರಿಂದ ನಿಮ್ಮ ಚರ್ಮದಲ್ಲಿನ ಉಷ್ಣತೆಯನ್ನು ತಿಳಿಯಲು ನೆರವಾಗುತ್ತದೆ.

ಈ ಥರ್ಮಾಮೀಟರ್ ಗನ್ ಅನ್ನು ನಿಮ್ಮ ತಲೆಗೆ ಗುರಿಯಾಗಿಸಿ ಹಿಡಿದಾಗ ಹೊರಡುವ ವಿಕಿರಣಗಳು ಚರ್ಮದ ಹಿಂದೆ ಇರುವ ಸಂವೇದನಾ ಗ್ರಾಹಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಾಸಾಯನಿಕ ವಿಕಿರಣಗಳ ಅಪಾಯಗಳೂ ಉಂಟಾಗಬಹುದು ಎಂಬ ಸಂದೇಶಗಳು ಹರಿದಾಡುತ್ತಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ.
ಆದರೆ ಈ ಹೇಳಿಕೆಗಳು ಸತ್ಯವಲ್ಲ. ಸ್ಪರ್ಶ ರಹಿತ ಇನ್ಫ್ರಾರೆಡ್ ಥರ್ಮಾಮೀಟರ್ಗಳು ವಿಕಿರಣಗಳನ್ನು ಹೊರಸೂಸಲು ಬಂದೂಕಲ್ಲ. ಅದು ಮಾನವ ದೇಹದಲ್ಲಿ ಹೊರಸೂಸುತ್ತಿರುವ ಉಷ್ಣವನ್ನು ಇನ್ಫ್ರಾರೆಡ್ ಕಿರಣಗಳ ರೂಪದಲ್ಲಿ ಗ್ರಹಿಸಿ ಸಂಗ್ರಹಿಸುತ್ತದೆ. ಬಳಿಕ ಅದನ್ನು ಎಲೆಕ್ಟ್ರಿಸಿಟಿಗೆ ಪರಿವರ್ತಿಸುತ್ತದೆ ಎಂದು ಮಲೇಷ್ಯಾದ ಆರೋಗ್ಯ ಸಚಿವಾಲಯ ಇತ್ತೀಚೆಗೆ ಸ್ಪಷ್ಟಪಡಿಸುತ್ತದೆ.
ವಾಸ್ತವವಾಗಿ ಈ ರೀತಿಯ ಉಷ್ಣಾಂಶ ಮಾಪನಗಳು ಒಬ್ಬರಿಂದೊಬ್ಬರಿಗೆ ಹರಡುವ ಅಥವಾ ಸಮಸ್ಯೆ ಹೆಚ್ಚಾಗುವ ಭಯವಿಲ್ಲದೆಯೇ ಜ್ವರ ಇದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಇರುವ ಅತ್ಯಂತ ಉತ್ತಮ ಮಾರ್ಗ. ಹಾಗೆಯೇ ಈ ಉಷ್ಣಾಂಶ ಮಾಪನಗಳನ್ನು ಮಾನವರ ಬಳಕೆಗಾಗಿಯೇ ಉಪಯೋಗಿಸಲಾಗುತ್ತಿದೆಯೇ ವಿನಾ ಕೈಕಾರಿಕಾ ಬಳಕೆಗಲ್ಲ ಎನ್ನುವುದು ಕೂಡ ಜನರ ಮನದಲ್ಲಿ ಇರಬೇಕಿದೆ.
ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಥರ್ಮಾಮೀಟರ್ಗಳನ್ನು ಸಮರ್ಪಕವಾಗಿ ಬಳಸಬೇಕು. ವ್ಯಕ್ತಿಯಿಂದ ಒಂದು ನಿರ್ದಿಷ್ಟ ದೂರದಲ್ಲಿ ನಿಂತು ಸರಿಯಾದ ಸಮಯದವರೆಗೆ ಗುರಿ ಇರಿಸಬೇಕು.

Fact Check
ಕ್ಲೇಮು
ಸ್ಪರ್ಶರಹಿತ ಥರ್ಮಾಮೀಟರ್ಗಳು ಆರೋಗ್ಯಕ್ಕೆ ಹಾನಿಕರ.
ಪರಿಸಮಾಪ್ತಿ
ಸ್ಪರ್ಶರಹಿತ (ಕಾಂಟ್ಯಾಕ್ಟ್ ಲೆಸ್) ಥರ್ಮಾಮೀಟರ್ಗಳು ನಿಮ್ಮ ಆರೋಗ್ಯಕ್ಕೆ ಹಾನಿಕರವಲ್ಲ.
Rating
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications