Fact Check: ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಆರೋಗ್ಯಕ್ಕೆ ಹಾನಿಕರವೇ?
ನವದೆಹಲಿ, ಸೆಪ್ಟೆಂಬರ್ 4: ದೇಹದ ಉಷ್ಣಾಂಶ ಪರೀಕ್ಷಿಸುವ ಟೆಂಪರೇಚರ್ ಗನ್ಗಳು ಅಥವಾ ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಚರ್ಮಕ್ಕೆ ಹಾನಿಕರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂಬ ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ.
Recommended Video
ಕೋವಿಡ್-19ನ ಈ ಕಾಲದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಕಾಂಟ್ಯಾಕ್ಟ್ಲೆಸ್ ಥರ್ಮಾಮೀಟರ್ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಈ ಥರ್ಮಾಮೀಟರ್ಗಳು ಸ್ಪರ್ಶರಹಿತ ತಂತ್ರಜ್ಞಾವನ್ನು ಹೊಂದಿದ್ದು, ದೇಶದ ಉಷ್ಣತೆಯನ್ನು ಅಳೆಯಲು ಇನ್ಫ್ರಾರೆಡ್ ತರಂಗಗಳನ್ನು ಬಳಸಿಕೊಳ್ಳುತ್ತವೆ.
ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಬೆಳಕನ್ನು ಕೇಂದ್ರೀಕರಿಸಲು ಲೆನ್ಸ್ ಬಳಸಿದಾಗ ಈ ತಂತ್ರಜ್ಞಾನವು ತಾಪವನ್ನು ಸೃಷ್ಟಿಸುತ್ತದೆ. ಇನ್ಫ್ರಾರೆಡ್ ವಿಕಿರಣಗಳನ್ನು ಥರ್ಮಾಪೈಲ್ ಹೀರಿಕೊಳ್ಳುತ್ತದೆ ಹಾಗೂ ಅದನ್ನು ತಾಪಮಾನವಾಗಿ ಬದಲಿಸುತ್ತದೆ. ಇದರಿಂದ ನಿಮ್ಮ ಚರ್ಮದಲ್ಲಿನ ಉಷ್ಣತೆಯನ್ನು ತಿಳಿಯಲು ನೆರವಾಗುತ್ತದೆ.

ಈ ಥರ್ಮಾಮೀಟರ್ ಗನ್ ಅನ್ನು ನಿಮ್ಮ ತಲೆಗೆ ಗುರಿಯಾಗಿಸಿ ಹಿಡಿದಾಗ ಹೊರಡುವ ವಿಕಿರಣಗಳು ಚರ್ಮದ ಹಿಂದೆ ಇರುವ ಸಂವೇದನಾ ಗ್ರಾಹಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಾಸಾಯನಿಕ ವಿಕಿರಣಗಳ ಅಪಾಯಗಳೂ ಉಂಟಾಗಬಹುದು ಎಂಬ ಸಂದೇಶಗಳು ಹರಿದಾಡುತ್ತಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ.
ಆದರೆ ಈ ಹೇಳಿಕೆಗಳು ಸತ್ಯವಲ್ಲ. ಸ್ಪರ್ಶ ರಹಿತ ಇನ್ಫ್ರಾರೆಡ್ ಥರ್ಮಾಮೀಟರ್ಗಳು ವಿಕಿರಣಗಳನ್ನು ಹೊರಸೂಸಲು ಬಂದೂಕಲ್ಲ. ಅದು ಮಾನವ ದೇಹದಲ್ಲಿ ಹೊರಸೂಸುತ್ತಿರುವ ಉಷ್ಣವನ್ನು ಇನ್ಫ್ರಾರೆಡ್ ಕಿರಣಗಳ ರೂಪದಲ್ಲಿ ಗ್ರಹಿಸಿ ಸಂಗ್ರಹಿಸುತ್ತದೆ. ಬಳಿಕ ಅದನ್ನು ಎಲೆಕ್ಟ್ರಿಸಿಟಿಗೆ ಪರಿವರ್ತಿಸುತ್ತದೆ ಎಂದು ಮಲೇಷ್ಯಾದ ಆರೋಗ್ಯ ಸಚಿವಾಲಯ ಇತ್ತೀಚೆಗೆ ಸ್ಪಷ್ಟಪಡಿಸುತ್ತದೆ.
ವಾಸ್ತವವಾಗಿ ಈ ರೀತಿಯ ಉಷ್ಣಾಂಶ ಮಾಪನಗಳು ಒಬ್ಬರಿಂದೊಬ್ಬರಿಗೆ ಹರಡುವ ಅಥವಾ ಸಮಸ್ಯೆ ಹೆಚ್ಚಾಗುವ ಭಯವಿಲ್ಲದೆಯೇ ಜ್ವರ ಇದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಇರುವ ಅತ್ಯಂತ ಉತ್ತಮ ಮಾರ್ಗ. ಹಾಗೆಯೇ ಈ ಉಷ್ಣಾಂಶ ಮಾಪನಗಳನ್ನು ಮಾನವರ ಬಳಕೆಗಾಗಿಯೇ ಉಪಯೋಗಿಸಲಾಗುತ್ತಿದೆಯೇ ವಿನಾ ಕೈಕಾರಿಕಾ ಬಳಕೆಗಲ್ಲ ಎನ್ನುವುದು ಕೂಡ ಜನರ ಮನದಲ್ಲಿ ಇರಬೇಕಿದೆ.
ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಥರ್ಮಾಮೀಟರ್ಗಳನ್ನು ಸಮರ್ಪಕವಾಗಿ ಬಳಸಬೇಕು. ವ್ಯಕ್ತಿಯಿಂದ ಒಂದು ನಿರ್ದಿಷ್ಟ ದೂರದಲ್ಲಿ ನಿಂತು ಸರಿಯಾದ ಸಮಯದವರೆಗೆ ಗುರಿ ಇರಿಸಬೇಕು.

Fact Check
ಕ್ಲೇಮು
ಸ್ಪರ್ಶರಹಿತ ಥರ್ಮಾಮೀಟರ್ಗಳು ಆರೋಗ್ಯಕ್ಕೆ ಹಾನಿಕರ.
ಪರಿಸಮಾಪ್ತಿ
ಸ್ಪರ್ಶರಹಿತ (ಕಾಂಟ್ಯಾಕ್ಟ್ ಲೆಸ್) ಥರ್ಮಾಮೀಟರ್ಗಳು ನಿಮ್ಮ ಆರೋಗ್ಯಕ್ಕೆ ಹಾನಿಕರವಲ್ಲ.
Rating
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications