Get Updates
Get notified of breaking news, exclusive insights, and must-see stories!

Fact Check: ಪ್ರತಿಭಟನೆ ವೇಳೆ ಬಿಜೆಪಿ ನಾಯಕ ಮನೋಜ್ ತಿವಾರಿ ಮೇಲೆ ಹಲ್ಲೆ?

ನವದೆಹಲಿ, ಅಕ್ಟೋಬರ್ 18: ಬಿಜೆಪಿ ಸಂಸದ ಮನೋಜ್ ತಿವಾರಿ ಆಸ್ಪತ್ರೆಯ ಹಾಸಿಗೆಯ ಮೇಲೆ ತಲೆ ಮತ್ತು ಕುತ್ತಿಗೆಗೆ ಬ್ಯಾಂಡೇಜ್ ಹಾಕಿಕೊಂಡು ಮಲಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ಅವರನ್ನು ದೆಹಲಿಯಲ್ಲಿ ಸಾರ್ವಜನಿಕರು ಥಳಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೆಲವರು ಇದೇ ಸಂದೇಶವನ್ನಿಟ್ಟುಕೊಂಡು ವ್ಯಂಗ್ಯವಾಡುತ್ತಿದ್ದಾರೆ. ಹಾಗಾದರೆ ಪ್ರತಿಭಟನೆ ವೇಳೆ ನಿಜವಾಗಲೂ ಮನೋಜ್ ತಿವಾರಿ ಮೇಲೆ ಜನರು ಹಲ್ಲೆ ನಡೆಸಿದರೇ?. ಇದರ ಬಗ್ಗೆ ಇಂಡಿಯಾ ಟುಡೇ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ ಚೆಕ್ ಮಾಡಿದೆ.

ಈ ಫೋಟೋವನ್ನು ತಿವಾರಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅಕ್ಟೋಬರ್ 12 ರಂದು ತೆಗೆದುಕೊಳ್ಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಗಾಯಗೊಂಡ ನಂತರ ಸಂಸದರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Fact Check: Did people hit Manoj Tiwari during the protest

ಛಠ್ ಆಚರಣೆ; ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನಲೆಯಲ್ಲಿ ಡಿಡಿಎಂಎ ಕೊರೊನಾ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಾತ್ರೆಗಳನ್ನು ಆಯೋಜಿಸುವಂತಿಲ್ಲ. ಯಾವುದೇ ಪ್ರಸಾದ ವಿತರಣೆ ಮಾಡುವಂತಿಲ್ಲ, ಗುಂಪುಗೂಡುವಿಕೆ ಮತ್ತು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವನ್ನು ನಿಷೇಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನದಿಯ ದಡದಲ್ಲಿ ಛಠ್ ಪೂಜೆಯನ್ನು ಮಾಡುವುದನ್ನು ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಕೋವಿಡ್ ಹರಡುವುದನ್ನು ತಪ್ಪಿಸಲು ಛಠ್ ಆಚರಣೆಗಳನ್ನು ಈ ವರ್ಷ ನಿರ್ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಈ ಹಿಂದೆ ಹೇಳಿದ್ದರು.

ಪ್ರತಿಭಟನೆ ನಡೆದಿದ್ದು ಯಾಕೆ?; ಕೋವಿಡ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ನದಿ ತೀರದಲ್ಲಿ ಛಠ್ ಆಚರಣೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ನಿಷೇಧಿಸಿದೆ.

ಡಿಡಿಎಂಎ ಆದೇಶದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಸೆಪ್ಟೆಂಬರ್ 30ರ ಆದೇಶದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಜಾತ್ರೆಗಳು ಮತ್ತು ಆಹಾರ ಮಳಿಗೆಗಳನ್ನು ನಿಷೇಧಿಸಿತ್ತು. ನಗರದಲ್ಲಿ ಛಠ್ ಕೂಟಗಳನ್ನು ನಿಷೇಧಿಸಿದ ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟಿಸುತ್ತಿದ್ದರು.

ನಗರದಲ್ಲಿ ಛಠ್ ಕೂಟಗಳನ್ನು ನಿಷೇಧಿಸಿರುವ ದೆಹಲಿ ಸರ್ಕಾರದ ವಿರುದ್ಧ ಮನೋಜ್ ತಿವಾರಿ ಹಾಗೂ ಬೆಂಬಲಿಗರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟಿಸುತ್ತಿದ್ದರು. ಪ್ರತಿಭಟನೆಯ ಮೊದಲು ಅವರು ಪ್ರತಿಭಟನೆಗೆ ಸೇರುವಂತೆ ಜನರಿಗೆ ಮನವಿಯನ್ನು ಮಾಡಿದ್ದರು.

ಬಿಜೆಪಿ ವಕ್ತಾರರ ಸ್ಪಷ್ಟನೆ; ವೈರಲ್ ಹೇಳಿಕೆಯನ್ನು ಮತ್ತಷ್ಟು ಪರಿಶೀಲಿಸಲು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಸಂಪರ್ಕಿಸಲಾಯಿತು. "ಪ್ರತಿಭಟನಾ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಮಾತ್ರ ಹಾಜರಿದ್ದರು. ಬ್ಯಾರಿಕೇಡ್‌ನಿಂದ ಬಿದ್ದು ತಿವಾರಿ ಗಾಯಗೊಂಡರು. ಯಾರೂ ಅವರ ಮೇಲೆ ಹಲ್ಲೆ ನಡೆಸಲಿಲ್ಲ ಹಾಗಾಗಿ ನಾವು ಯಾವುದೇ ದೂರು ದಾಖಲಿಸಿಲ್ಲ" ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರು ಕೂಡ ತಿವಾರಿ ಅವರನ್ನು ದೂಷಿಸಿದ ಬಗ್ಗೆ ಯಾವುದೇ ದೂರು ಇಲ್ಲ ಎಂದು ದೃಢಪಡಿಸಿದ್ದಾರೆ. "ಪ್ರತಿಭಟನೆಯ ಸಮಯದಲ್ಲಿ ಅವರು ಗಾಯಗೊಂಡರು. ಅವರನ್ನು ನಿಂದಿಸಿದರೆಂದು ಯಾವುದೇ ದೂರು ಬಂದಿಲ್ಲ" ಎಂದು ದೆಹಲಿ ಪೊಲೀಸ್ ಪಿಆರ್‌ಒ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

ಆದ್ದರಿಂದ, ಭೋಜ್‌ಪುರಿ ಗಾಯಕನಾದ ರಾಜಕಾರಣಿಯನ್ನು ದೆಹಲಿಯಲ್ಲಿ ಸಾರ್ವಜನಿಕರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವರದಿಗಳು ನಿಜವಲ್ಲ ಎಂಬುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನಾ ನಿರತ ಸಂಸದ ಮನೋಜ್ ತಿವಾರಿಗೆ ಸಾರ್ವಜನಿಕರಿಂದ ಥಳಿತ

ಪರಿಸಮಾಪ್ತಿ

ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನಾ ನಿರತ ಸಂಸದ ಮನೋಜ್ ತಿವಾರಿಗೆ ಸಾರ್ವಜನಿಕರಿಂದ ಥಳಿತವಾಗಿಲ್ಲ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+