Fact check: ಇಂಡಿಗೋ ವಿಮಾನದಲ್ಲಿ ಕುಶನ್ಲೆಸ್ ಸೀಟ್: ಇದರ ಹಿಂದಿನ ಸತ್ಯವೇನು?
ಇತ್ತೇಚೆಗೆ ವಿಮಾನದ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಂಡಿಯೋ ವಿಮಾನದಲ್ಲಿ ಕುಳಿತುಕೊಳ್ಳುವ ಸೀಟ್ ಮೇಲೆ ಕುಶನ್ ಕಾಣುವುದಿಲ್ಲ. ಈ ವಿಡಿಯೋ ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋದ ಹಿಂದಿನ ಸತ್ಯವೇನು ಎನ್ನುವುದನ್ನು ಈಗ ನೋಡೋಣ.
ಜನರು ಸೌಕರ್ಯ, ಉತ್ತಮ ಆತಿಥ್ಯ ಮತ್ತು ಸಮಯ ಉಳಿತಾಯಕ್ಕಾಗಿ ವಿಮಾನಗಳನ್ನು ಆಯ್ಕೆ ಮಾಡುತ್ತಾರೆ. ಅವರು ನಿರೀಕ್ಷಿತ ಸೇವೆಗಳನ್ನು ಪಡೆಯದಿದ್ದಾಗ ವಿವಾದ ಉಂಟಾಗುತ್ತದೆ. ಆದರೆ ಫ್ಲೈಟ್ ನಲ್ಲಿ ನಡೆಯುವ ಕೆಲ ಘಟನೆಗಳು ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ.
Beautiful @IndiGo6E — I do hope I land safely! :)
— Yavanika Raj Shah (@yavanika_shah) March 6, 2024
This is your flight from Bengaluru to Bhopal 6E 6465. pic.twitter.com/DcPJTq3zka
ಇದೇ ಧಾಟಿಯಲ್ಲಿ ಒಂದು ವಿಚಿತ್ರವಾದ ಚಿತ್ರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದ್ದು, ನೆಟಿಜನ್ಗಳನ್ನು ಗೊಂದಲಕ್ಕೀಡುಮಾಡಿದೆ. ಜೊತೆಗೆ ನಗು ಕೂಡ ತರಿಸಿದೆ. ಬೆಂಗಳೂರಿನಿಂದ ಭೋಪಾಲ್ಗೆ ಇಂಡಿಗೋ ವಿಮಾನದಲ್ಲಿ ತೆಗೆದ ವೈರಲ್ ಚಿತ್ರದಲ್ಲಿ, ಎರಡು ಸೀಟುಗಳಲ್ಲಿ ಕುಶನ್ ಇಲ್ಲ. ಈ ಚಿತ್ರವನ್ನು ಸೆರೆಹಿಡಿದ ಪ್ರಯಾಣಿಕ ಅದನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಈ ಆಸಕ್ತಿದಾಯಕ ಪೋಸ್ಟ್ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿದೆ.

"ಇದು ಬೆಂಗಳೂರಿನಿಂದ ಭೋಪಾಲ್ @IndiGo6E 6465 ವಿಮಾನವಾಗಿದೆ" ಎಂದು ಯವನಿಕಾ ಬರೆದಿದ್ದಾರೆ. ಇದರೊಂದಿಗೆ ಅವರು ಆಸನಗಳ ಮೇಲೆ ಕುಶನ್ ಇಲ್ಲದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಸತ್ಯ ಪರಿಶೀಲನೆ
ಪೋಸ್ಟ್ಗೆ ಪ್ರತಿಕ್ರಿಯಿಸಿದ ಇಂಡಿಗೋ, ಆಸನಗಳು ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿಲ್ಲ. ಸೀಟ್ ಕುಶನ್ಗಳು ಇಲ್ಲದೇ ಇರುವ ಈ ದೃಶ್ಯ ಶುಚಿಗೊಳಿಸುವ ಕಾರ್ಯವಿಧಾನದ ಭಾಗವಾಗಿದೆ ಎಂದು ವಿವರಿಸಿದೆ. ವಿಮಾನ ನಿರ್ಗಮನದ ಮೊದಲು ಶುಚಿಗೊಳಿಸುವ ಸಿಬ್ಬಂದಿಗಳು ಶುಚಿಗೊಳಿಸುವ ಉದ್ದೇಶಗಳಿಗಾಗಿ ಆಸನ ಕುಶನ್ಗಳನ್ನು ತೆಗೆದುಹಾಕುತ್ತಾರೆ ಎಂದಿದೆ.

Fact Check
ಕ್ಲೇಮು
ಸಾಮಾಜಿಕ ಜಾಲತಾಣದಲ್ಲಿ ಇಂಡಿಗೋ ವಿಮಾನದಲ್ಲಿ ಕುಶನ್ಲೆಸ್ ಸೀಟ್ ವೈರಲ್ ಆಗಿದೆ.
ಪರಿಸಮಾಪ್ತಿ
ಇಂಡಿಗೋ ವಿಮಾನದಲ್ಲಿ ಕುಶನ್ಲೆಸ್ ಸೀಟ್ ಇರುವ ಫೋಟೋಕ್ಕೆ ಇಂಡಿಗೋ ಪ್ರತಿಕ್ರಿಯೆ ನೀಡಿದೆ.
Rating
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications