Fact check: ಕಾಶ್ಮೀರದಲ್ಲಿ ಕಲ್ಲು ತೂರಾಟದ ಫೋಟೋ ಹೋಲಿಸಿದ್ದು ಈ ಘಟನೆಗೆ
ದೆಹಲಿಯ ಜಹಾಂಗೀರ್ಪುರಿಯಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ನಡುವೆ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು #HindusUnderAttackInIndia, #HinduLivesMatters ಮತ್ತು #DelhiRiots2022 ನಂತಹ ಹ್ಯಾಶ್ಟ್ಯಾಗ್ಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಈ ಚಿತ್ರವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "ಜಹಾಂಗೀರ್ಪುರಿಯ ಬ್ಲಾಕ್ ಸಿ ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳಿಂದ ಮುತ್ತಿಕೊಂಡಿದೆ. ದೆಹಲಿ ಪೊಲೀಸರು ಈ ಒಳನುಗ್ಗುವವರನ್ನು ಹೊರಹಾಕಬೇಕಾಗಿದೆ. ಅವರು ಈ ಹಿಂದೆಯೂ ತೊಂದರೆಗಳನ್ನು ಸೃಷ್ಟಿಸಿದ್ದಾರೆ. ಅವರನ್ನು ಹೊರಹಾಕಲು ಇದು ಒಳ್ಳೆ ಸಮಯವಾಗಿದೆ" ಎಂಬ ಸಂದೇಶದೊಂದಿದೆ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಚಿತ್ರ ಇತ್ತೀಚಿನದ್ದಲ್ಲ ಅಥವಾ ಹೊಸ ದೆಹಲಿಯಿಂದ ಬಂದದ್ದಲ್ಲ ಎಂದು ಕಂಡುಹಿಡಿದಿದೆ. 2016ರಲ್ಲಿ ಸೆರೆಹಿಡಿಯಲಾದ ಈ ಫೋಟೋ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರ ಬುರ್ಹಾನ್ ವಾನಿಯ ಬೆಂಬಲಿಗರನ್ನು ತೋರಿಸಿದೆ.

Rediff.comನಲ್ಲಿ 2016ರಲ್ಲಿ ಈ ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ, ಉಗ್ರಗಾಮಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಬುರ್ಹಾನ್ ವಾನಿ ಹತ್ಯೆಯ ವಿರುದ್ಧ ಶ್ರೀನಗರದಲ್ಲಿ ನಡೆದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಪೊಲೀಸರು ಹಾರಿಸಿದ ಅಶ್ರುವಾಯು ನಡುವೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆಯುತ್ತಿರುವುದನ್ನು ಈ ಚಿತ್ರವು ತೋರಿಸಿದೆ. ಈ ವರದಿಯು ಇದೇ ರೀತಿಯ ಅನೇಕ ಚಿತ್ರಗಳನ್ನು ಹೊಂದಿದೆ.

ಜುಲೈ 10, 2016ರ ದಿನಾಂಕದ Ganie ಅವರು Instagram ಪೋಸ್ಟ್ನಲ್ಲಿ ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಕಾಶ್ಮೀರಿ ಪ್ರತಿಭಟನಾಕಾರರು ಕರ್ಫ್ಯೂ ಅನ್ನು ಧಿಕ್ಕರಿಸಿ ಭಾರತೀಯ ಪೊಲೀಸರ ಮೇಲೆ ಕಲ್ಲು ಎಸೆಯುತ್ತಿದ್ದಂತೆ ನಾಯಿಯೊಂದು ರಕ್ಷಣೆಗಾಗಿ ಓಡಿಹೋಗುತ್ತದೆ. ಮೋಸ್ಟ್ ವಾಂಟೆಡ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ವಿರೋಧಿಸಿ ಶ್ರೀನಗರದಲ್ಲಿ ಜುಲೈ 10, 2016 ರಂದು ಸಂಭವಿಸಿತು".

ಗ್ಯಾನಿ ಅವರನ್ನು ಸಂಪರ್ಕಿಸಿದಾಗ ಅವರು ವೈರಲ್ ಛಾಯಾಚಿತ್ರವನ್ನು ಚಿತ್ರೀಕರಿಸಿದ್ದಾರೆ ಎಂದು ಖಚಿತಪಡಿಸಿದರು. "ಈ ಚಿತ್ರವನ್ನು ಜುಲೈ 10, 2016 ರಂದು ಶ್ರೀನಗರದ ಬಟಮಾಲೋ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದಿನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರದ ಘರ್ಷಣೆಯ ಸಮಯದಲ್ಲಿ ಕ್ಲಿಕ್ ಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಜಹಾಂಗೀರ್ಪುರಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ವರದಿಯಾಗಿದೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಈ ಘಟನೆಯಲ್ಲಿ ಎಂಟು ಪೊಲೀಸರು ಮತ್ತು ಹಲವಾರು ನಿವಾಸಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಕಲ್ಲು ತೂರಾಟವನ್ನು ತೋರಿಸುವ ಹಳೆಯ ಚಿತ್ರವು ಜಹಾಂಗೀರ್ಪುರಿಯಲ್ಲಿನ ಇತ್ತೀಚಿನ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ ಎಂದು ತೀರ್ಮಾನಿಸಬಹುದು.
Recommended Video

Fact Check
ಕ್ಲೇಮು
ದೆಹಲಿಯ ಜಹಾಂಗೀರ್ಪುರಿಯಲ್ಲಿ ಕಲ್ಲು ತೂರಾಟದ ಫೋಟೋ ವೈರಲ್
ಪರಿಸಮಾಪ್ತಿ
ಕಾಶ್ಮೀರದಲ್ಲಿ ಕಲ್ಲು ತೂರಾಟದ ಫೋಟೋವನ್ನು ದೆಹಲಿಯ ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಹೋಲಿಸಲಾಗಿದೆ.












Click it and Unblock the Notifications