ಜೀ ವಾಹಿನಿಯಿಂದ ಡಬಲ್ ಧಮಾಕ! ಶೀಘ್ರದಲ್ಲೇ ಎರಡು ಹೊಸ ರಿಯಾಲಿಟಿ ಶೋ ಶುರು
ಕನ್ನಡ ಕಿರುತೆರೆಯಲ್ಲಿ ಜೀ ವಾಹಿನಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ರಿಯಾಲಿಟಿ ಶೋಗಳ ವಿಚಾರದಲ್ಲೂ ಜೀ ಪ್ರೇಕ್ಷಕರ ಮನೆಮಾತಾಗಿದೆ. ಸದ್ಯ ಸರಿಗಮಪ, ಮಹಾನಟಿ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜ್ಯೂನಿಯರ್ಸ್, ಭರ್ಜರಿ ಬ್ಯಾಚುಲರ್ಸ್ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಿಗೆ ವೀಕ್ಷಕರ ಸಂಖ್ಯೆ ಹೆಚ್ಚೇ ಇದೆ. ಈ ಹಿನ್ನೆಲೆ ಜೀ ವಾಹಿನಿಯು ಡಬಲ್ ಧಮಾಕ ಎನ್ನುವಂತೆ ಮತ್ತೆರಡು ಹೊಸ ರಿಯಾಲಿಟಿ ಶೋಗಳನ್ನು ಆರಂಭಿಸಲು ಸಜ್ಜಾಗಿದೆ. ಈ ಬಗ್ಗೆ ಈಗಾಗಲೇ ಪ್ರೋಮೋಗಳನ್ನು ಹಂಚಿಕೊಂಡು ಸಿಹಿಸುದ್ದಿ ನೀಡಿದೆ.
ಈ ಹಿಂದೆ "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ರಿಯಾಲಿಟಿ ಶೋ ಹೆಚ್ಚು ಜನಪ್ರಿಯತೆ ಪಡೆದಿದ್ದು. ಆಗ ಇದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿತ್ತು. ಈಗ ಜೀ ಕನ್ನಡ ವಾಹಿನಿ ಕೂಡ ಇದೇ ಮಾದರಿಯ ರಿಯಾಲಿಟಿ ಶೋವೊಂದನ್ನು ಆರಂಭಿಸುವ ಸುಳಿವು ನೀಡಿದೆ. ಅಚ್ಚರಿ ಎಂದರೆ ಈ ಹೊಸ ಶೋ ಅನ್ನು ಖ್ಯಾತ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಇದರ ಪ್ರೋಮೋ ಹಂಚಿಕೊಂಡಿದ್ದು, ಇದರಲ್ಲಿ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ ಎಂದು ಹಿಂಟ್ ನೀಡಿದೆ.

ಜುಲೈ 19ರಂದು ಆಡಿಷನ್
ನನ್ನ ಫೇವರೇಟ್ ರಿಯಾಲಿಟಿ ಶೋ ಜೊತೆಗೆ ಅಕುಲ್ ಬಾಲಾಜಿ ಬರ್ತಿದ್ದಾನೆ ಅಂದ್ರೆ, ಸುನಾಮಿ ಸುಂಟರಗಾಳಿ ಎಲ್ಲವೂ ಬರಲೇಬೇಕು. ಗೆಟ್ ರೆಡೀ ಗರ್ಲ್ಸ್ ಎಂದು ಅಕುಲ್ ಪ್ರೋಮೋದಲ್ಲಿ ಹೇಳಿದ್ದಾರೆ. ಬರ್ತಾ ಇದೆ ಹಳ್ಳಿ ಬದುಕನ್ನ ಕಲಿಸೋ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿದೆ. ಇದ ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ ಸಿಟಿ ಮಾಡ್ರನ್ ಯುವತಿಯರು ಭಾಗವಹಿಸಬಹುದು. ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ ಬರಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಹಳ್ಳಿ ಬದುಕನ್ನು ಕಲಿಸೋದು ಹಾಗೂ ಸಿಟಿ ಹುಡುಗಿಯರಿಗೆ ಮಾತ್ರ ಎಂದು ಹೇಳುವ ಮೂಲಕ ಜೀ ಸುಳಿವು ನೀಡಿದೆ. ಈ ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋ ಸಖತ್ ಹಿಟ್ ಆಗಿತ್ತು. ಅದನ್ನು ಕೂಡ ಅಕುಲ್ ಬಾಲಾಜಿ ಅವರೇ ನಿರೂಪಣೆ ಮಾಡಿದ್ದರು. ಈಗ ಅಕುಲ್ ನನ್ನ ನೆಚ್ಚಿನ ರಿಯಾಲಿಟಿ ಶೋ ಎಂದು ಹೇಳಿರುವುದರಿಂದ "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ಹೊಸ ರೂಪದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.
"ನಾವು ನಮ್ಮವರು" ಹೊಸ ಶೋ
ಸದಾ ಹೊಸ ಪ್ರಯತ್ನಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿರುವ ಜೀ ವಿಭಿನ್ನ ವಿಷಯದೊಂದಿಗೆ ಹೊಸ "ನಾವು ನಮ್ಮವರು" ಎನ್ನುವ ರಿಯಾಲಿಟಿ ಶೋ ಮುಂದಿಡುತ್ತಿದೆ. ಇದರ ಪ್ರೋಮೋ ಕೂಡ ವಾಹಿನಿ ಹಂಚಿಕೊಂಡಿದ್ದು, ಬದುಕು ಕಟ್ಕೊಂಡ ಊರಿನಲ್ಲಿ ಅಪರಿಚಿತರ ಹಾಗೆ ಇರೋ ಬದಲು ಹುಟ್ಟೂರಲ್ಲಿ ನಮ್ಮವರ ನಡುವೆ ಒಂದಾಗೋ ಕ್ಷಣವೇ ಸುಂದರ! ಬರುತ್ತಿದೆ ಬಾಂಧವ್ಯಗಳ ಮಹತ್ವ ಸಾರೋ ರಿಯಾಲಿಟಿ ಶೋ "ನಾವು ನಮ್ಮವರು" ಶೀಘ್ರದಲ್ಲಿ ಎಂದು ಹೇಳಿದೆ. ಇದು ಹುಟ್ಟಿದ ಊರನ್ನ ತೊರೆದು ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳುವವರನ್ನು ತಮ್ಮ ಹುಟ್ಟೂರಿನೊಂದಿಗೆ, ಕುಟುಂಬದವರೊಂದಿಗೆ ಬೆಸೆಯುವ ಕಾರ್ಯಕ್ರಮ ಎನ್ನಲಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications