Year Ender 2025: ಈ ವರ್ಷ ಡಿವೋರ್ಸ್, ಬ್ರೇಕಪ್ ಮೂಲಕ ಸುದ್ದಿಯಾದ ಸೆಲೆಬ್ರಿಟಿಗಳು
2025ಕ್ಕೆ ವಿದಾಯ ಹೇಳಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಹಲವು ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ. ಕೆಲವರು ಇನ್ನೇನು ಮದುವೆಯಾಗಬೇಕು ಎನ್ನುವ ಹೊತ್ತಿಗೆ ಬ್ರೇಕಪ್ ಘೋಷಿಸಿ ಸುದ್ದಿಯಾದರೆ, ಕೆಲವರು ಮದುವೆಯಾದ ಕೆಲವೇ ವರ್ಷಗಳಿಗೆ ಡಿವೋರ್ಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ. ಈ ವರ್ಷ ಡಿವೋರ್ಸ್, ಬ್ರೇಕಪ್ ಮಾಡಿಕೊಂಡ ಸೆಲೆಬ್ರಿಟಿಗಳು ಇವರೇ ನೋಡಿ..
ನಟಿ ತಮನ್ನಾ ಭಾಟಿಯಾ & ವಿಜಯ್ ವರ್ಮಾ
ಸದ್ಯ ಭಾರತೀಯ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದು ಕರೆಸಿಕೊಂಡಿರುವ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ವರ್ಷ ಬ್ರೇಕಪ್ ಶಾಕ್ ನೀಡಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಅವರ ಬ್ರೇಕಪ್ಗೆ ಈ ವರ್ಷ ಸಾಕ್ಷಿಯಾಯಿತು. ಕನ್ನಡದ ಕೆಜಿಎಫ್ ಸಿನಿಮಾದ ಜೋಕೆ ನಾನು ಬಳ್ಳಿಯ ಮಿಂಚು ಎಂದು ಸೊಂಟ ಬಳುಕಿಸಿದ್ದ ತಮನ್ನಾ ನಂತರ ಸುದ್ದಿಯಾಗಿದ್ದು, ನಟ ವಿಜಯ್ ವರ್ಮಾ ಅವರೊಂದಿಗಿನ ಡೇಟಿಂಗ್ ಸುದ್ದಿಯಿಂದ. ಮೊದಲಿಗೆ ಇದು ವದಂತಿಯೇ ಆದರೂ, ನಂತರ ಒಟ್ಟಾಗಿ ಹಲವು ವೇದಿಕೆಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದರು.
ಆಗ ತಮನ್ನಾ ವಿಜಯ್ ಅವರ ಮದುವೆ ಪ್ಲ್ಯಾನ್ ಕೂಡ ಆಗಿ, ಇನ್ನೇನು ಮದುವೆ ದಿನಾಂಕ ಘೋಷಿಸುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ 2023ರಲ್ಲಿ ಡೇಟಿಂಗ್ ಶುರು ಮಾಡಿದ್ದ ಈ ಜೋಡಿ ಈ ವರ್ಷದ ಆರಂಭದಲ್ಲೇ ಪರಸ್ಪರ ದೂರವಾಗುವ ನಿರ್ಧಾರ ತೆಗೆದುಕೊಂಡಿತು.

ಚಹಾಲ್-ಧನಶ್ರೀ
ಸಿನಿಮಾ ಮಾತ್ರವಲ್ಲದೆ, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣ ಕೂಡ ಈ ವರ್ಷ ಸದ್ದು ಮಾಡಿತು. ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟಿಗ, ಲೆಗ್ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ವಿವಾಹವು ಕೊನೆಗೊಂಡಿತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇಬ್ಬರ ಪರಿಚಯವಾಗಿ ಡಿಸೆಂಬರ್ನಲ್ಲಿ ಮದುವೆಯಾದರು. 2025ರ ಆರಂಭದಲ್ಲೇ ವಿಚ್ಛೇದನದ ಸುದ್ದಿ ಹರಡಿತು. ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವೃತ್ತಿಜೀವನದಲ್ಲಿನ ಒತ್ತಡ, ಸಮಯದ ಕೊರತೆ ಮತ್ತು ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ಈ ವಿಚ್ಛೇದನ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಚಹಾಲ್ ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಎದುರಿಸಿದ್ದಾಗಿ ವರದಿಯಾಗಿದೆ.
ನಟ ಜಿವಿ ಪ್ರಕಾಶ್ ಕುಮಾರ್-ಸೈಂಧವಿ
ತಮಿಳು ಚಿತ್ರರಂಗದ ಸಂಗೀತ ಸಂಯೋಜಕ ಹಾಗೂ ನಟ ಜಿವಿ ಪ್ರಕಾಶ್ ಕುಮಾರ್ & ಗಾಯಕಿ ಸೈಂಧವಿ ದಂಪತಿ ಕೂಡ ಈ ವರ್ಷ ಡಿವೋರ್ಸ್ ಪಡೆದ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದಾರೆ. ಇವರು ಶಾಲೆಯಿಂದಲೇ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಬಳಿಕ ಮದುವೆಯೂ ಆಗಿದ್ದರು. ತಮ್ಮ 12 ವರ್ಷಗಳ ದಾಂಪತ್ಯವನ್ನು ಈ ವರ್ಷ ಅಧಿಕೃತವಾಗಿ ಕೊನೆಗೊಳಿಸಿದರು. ಮಾರ್ಚ್ 24ರಂದು ಅವರು ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ನಟಿ ಮೀರಾ ವಾಸುದೇವನ್-ವಿಪಿನ್
ಮಲಯಾಳಂ ನಟಿ ಮೀರಾ ವಾಸುದೇವನ್ ಅವರು ತಮ್ಮ ಮೂರನೇ ಪತಿ ವಿಪಿನ್ ಪುತಿಯಂಕಂಗೆ ವಿಚ್ಛೇದನ ನೀಡಿದರು. ಕಳೆದ ಆಗಸ್ಟ್ನಿಂದಲೂ ನಾನು ಸಿಂಗಲ್ ಎಂದು ಘೋಷಿಸಿದರು. ಈ ಮೂಲಕ ತಮ್ಮ ಜೀವನದ ಶಾಂತಿಯುತ ಹಂತವನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದರು. ಇದು ಅವರ ಮೂರನೇ ಮದುವೆಯಾಗಿದ್ದು, ಕೇವಲ ಒಂದು ವರ್ಷದೊಳಗೆ ಮುರಿದುಬಿತ್ತು.

ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್
ಭಾರತದ ಕ್ರಿಕೆಟ್ ಆಟಗಾರ್ತಿ, ಆರ್ಸಿಬಿ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 2025ರಲ್ಲಿ ನಡೆಯಬೇಕಿತ್ತು. ಮುಹೂರ್ತದ ದಿನವೇ ಮದುವೆ ರದ್ದಾಗಿ ಎಲ್ಲರಿಗೂ ಶಾಕ್ ಕೊಟ್ಟರು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಸ್ಮೃತಿ ಮಂಧಾನ ಇತ್ತೀಚೆಗೆ ಖಚಿತಪಡಿಸಿದರು. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದು, ಕುಟುಂಬದ ಗೌಪ್ಯತೆ ಕಾಪಾಡುವಂತೆ ಅವರು ವಿನಂತಿಸಿದರು.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications