ನನ್ನ ಮದುವೆ ಆಗ್ತೀಯಾ? ಎಂದು ರಚಿತಾ ರಾಮ್ ಕೊನೆಗೂ ಪ್ರಪೋಸ್, ಹುಡುಗ ಯಾರು
ಸ್ಯಾಂಡಲ್ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಮದುವೆ ಯೋಗ ಕೂಡಿಬಂದಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ. ಇಲ್ಲಿವರೆಗೆ ಬ್ಯಾಚುಲರ್ ಆಗಿದ್ದ ನಟಿಯರ ಪೈಕಿ ರಚಿತಾ ಕೂಡ ಒಬ್ಬರಾಗಿದ್ದರು. ಮದುವೆ ವಿಚಾರ ಪ್ರಸ್ತಾಪಿದಾಗಲೆಲ್ಲ, ತಮ್ಮ ಡಿಂಪಲ್ ನಗುವಿನಿಂದಲೇ ಉತ್ತರ ನೀಡಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಅಚ್ಚರಿ ಅಂದ್ರೆ ಇದೀಗ ರಚಿತಾ ರಾಮ್ ಅವರೇ ತಮ್ಮ ಮದುವೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ "ನನ್ನ ಮದುವೆ ಆಗ್ತೀಯಾ?" ಎಂದು ಅವರೇ ಪ್ರಪೋಸ್ ಕೂಡ ಮಾಡಿದ್ದಾರೆ. ಇಷ್ಟಕ್ಕೂ ರಚಿತಾ ಅವರಿಗೆ ಇಷ್ಟವಾಗಿರುವ ಆ ಹುಡುಗ ಯಾರು ಗೊತ್ತಾ?
ಇತ್ತೀಚೆಗೆ ರಚಿತಾ ರಾಮ್ ಅವರ ಬಗ್ಗೆ ಚಿತ್ರರಂಗದಲ್ಲಿ ಕೆಲ ಆರೋಪಗಳು ಕೇಳಿಬಂದಿದ್ದವು. ನಿರ್ಮಾಪಕರು, ನಿರ್ದೇಶಕರು ರಚಿತಾ ಅವರ ಮೇಲೆ ಗಂಭೀರ ಆರೋಪ ಮಾಡಿ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದರು. ಸದ್ಯ ಇದು ತಣ್ಣಗಾಗುವ ಹೊತ್ತಿಗೆ ರಚಿತಾ ರಾಮ್ ಅವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇಲ್ಲಿವರೆಗೆ ನಟಿಯ ಮದುವೆ ಬಗ್ಗೆ ಗಾಸಿಪ್ ಮಾತ್ರವೇ ಇತ್ತು. ಆದರೆ ಈಗ ರಚಿತಾ ಅವರೇ ನನ್ನ ಮದುವೆ ಆಗ್ತೀಯಾ? ಎಂದು ಹುಡುಗನಿಗೆ ಆಫರ್ ಕೊಟ್ಟಿದ್ದಾರೆ.

ರಚಿತಾ ರಾಮ್ ಅವರು "ಭರ್ಜರಿ ಬ್ಯಾಚುಲರ್ಸ್" ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಇದೇ ಕಾರ್ಯಕ್ರಮದ ವೇದಿಕೆ ಮೇಲೆ ಡಿಂಪಲ್ ಕ್ವೀನ್ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾರೆ. ಈ ಶೋ ಸ್ಪರ್ಧಿಗಳಾಗಿರುವ ಅನನ್ಯಾ-ಭುವನೇಶ್ ಜೋಡಿ ಟಾಸ್ಕ್ವೊಂದರಲ್ಲಿ ಸಖತ್ ಕಮಾಲ್ ಮಾಡಿದೆ. ಸ್ಪರ್ಧಿಗಳಿಗೆ ತಮ್ಮ ಜೋಡಿಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಭುವನೇಶ್ ಅವರು ತನ್ನ ಮೆಂಟರ್ ಅನನ್ಯಾಗೆ ಹಳ್ಳಿಗಾಡಿನ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದಾರೆ.
ʼಮದುವೆಗೆ ಯಾರನ್ನ ಒಪ್ಪಿಸಬೇಕು ಹೇಳುʼ
ಅನನ್ಯಾರನ್ನ ಜಾತ್ರೆಗೆ ಕರೆದೊಯ್ದು, ಕಾಲಿಗೆ ಗೆಜ್ಜೆ ತೊಡಿಸಿ, ಕೈಗೆ ಹಸಿರು ಬಳೆ ಕೊಡಿಸಿ, ಸಾಂಪ್ರದಾಯಿಕ ಬಟ್ಟೆ ನೀಡಿ ಮದುವೆಯಾಗೋಣ ಎಂದು ಭುವನೇಶ್ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಕಾರ್ಯಕ್ರಮದಲ್ಲಿದ್ದವರೆಲ್ಲ ಫಿದಾ ಆಗಿದ್ದಾರೆ. ಇನ್ನು ರಚಿತಾ ರಾಮ್ ಅವರಿಗೆ ಭುವನೇಶ್ ಪ್ರಪೋಸ್ ಮಾಡಿದ ಸ್ಟೈಲ್ ಸಖತ್ ಇಷ್ಟವಾಗಿದ್ದು, ನೇರವಾಗಿ ಭುವನೇಶ್ ಬಳಿ ಹೋಗಿ, "ಯಾರನ್ನ ಒಪ್ಪಿಸಬೇಕು ಅಂತ ಹೇಳು, ಅವರನ್ನ ನಾನು ಒಪ್ಪಿಸುತ್ತೀನಿ. ನನ್ನ ಮದುವೆ ಆಗ್ತೀಯಾ?" ಎಂದು ಭುವನೇಶ್ಗೆ ರಚ್ಚು ಪ್ರಪೋಸ್ ಮಾಡಿಬಿಟ್ಟಿದ್ದಾರೆ. ಇದನ್ನು ಕೇಳಿ ಖುದ್ದು ಭುವನೇಶ್ ಅವರೇ ಒಂದು ಕ್ಷಣ ಕಣ್ಣು ಬಾಯಿ ಬಿಡುತ್ತಾ ದಂಗಾಗಿದ್ದಾರೆ.

ಈ ಹಿಂದೆ ರಚಿತಾ ರಾಮ್ ಅವರು ಒಮ್ಮೆ ನಾನು ಗೌಡರ ಹುಡುಗನನ್ನೇ ಮದುವೆ ಆಗೋದು ಎಂದು ಹೇಳಿದ್ದರು. ಜೊತೆಗೆ ಸ್ಯಾಂಡಲ್ವುಡ್ ನಟರೊಬ್ಬರ ಜೊತೆಗೂ ರಚಿತಾ ಅವರ ಹೆಸರನ್ನು ಗಂಟು ಹಾಕಿದ್ದರು. ಇದೀಗ ಅವರೇ ವೇದಿಕೆಯಲ್ಲಿ ಭುವನೇಶ್ಗೆ ಪ್ರಪೋಸಲ್ ಇಟ್ಟಿದ್ದಾರೆ. ಇದನ್ನ ಸೀರಿಯಸ್ ಆಗಿ ಹೇಳಿದ್ರೋ, ಅಥವಾ ನಿಜವಾಗಿ ಭುನವೇಶ್ ಮೇಲೆ ರಚಿತಾ ಅವರಿಗೆ ಲವ್ ಆಗಿದೆಯೋ ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications