Amruthadhare: ಭೂಮಿಕಾಗೆ ವಿಚಿತ್ರ ಕಾಯಿಲೆ, ಸೃಜನ್ ವಿಲನ್ ?! ಹೊಸ 2 ಟ್ವಿಸ್ಟ್ ನಿರೀಕ್ಷೆ
Amruthadhare: ಕನ್ನಡದ ಪ್ರಸಿದ್ಧ ಹಾಗೂ ಜನ ಮೆಚ್ಚಿದ ಸೀರಿಯಲ್ಗಳಲ್ಲಿ ಒಂದಾಗಿರುವ ಅಮೃತಧಾರೆ / Amruthadhare ಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಶುರುವಾಗಿದೆ. ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದಾರೆ. ಆದರೆ ಈಗ ಒಂದು ಮಗು ಮಾತ್ರ ಇದೆ. ಆದರೆ ಇದೀಗ ಭೂಮಿಕಗೆ ವಿಚಿತ್ರ ಕಾಯಿಲೆ ಅಥವಾ ವಿಚಿತ್ರವಾದ ಆರೋಗ್ಯ ಸಮಸ್ಯೆ ಇದೆ ಎನ್ನುವಂತೆ ಪ್ರೋಮೋ ವಿಡಿಯೋದಲ್ಲಿ ತೋರಿಸಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲಾ ಸೀರಿಯಲ್ನಲ್ಲೂ ಮಕ್ಕಳನ್ನು ಕೊಲ್ಲುವ ಅಥವಾ ಮಗು ಜನಿಸುವುದಕ್ಕೂ ಮುಂಚೆಯೇ ಅವಘಡಗಳು ಸಂಭವಿಸುವುದನ್ನು ತೋರಿಸಲಾಗುತ್ತಿತ್ತು. ಅಮೃತಧಾರೆಯಲ್ಲೇ ಮಲ್ಲಿ ಗರ್ಭಿಣಿ ಆಗಿರುವಾಗಲೇ ಅಪಘಾತವಾಗಿ ಮಗು ಸಾವನ್ನಪ್ಪಿತ್ತು. ಇದೀಗ ಎರಡು ಟ್ವಿಸ್ಟ್ಗಳು ಈ ಸೀರಿಯಲ್ನಲ್ಲಿ ಇದೆ.
ಅಮೃತಧಾರೆಯಲ್ಲಿ ಭೂಮಿಕಾಗೆ ವಿಚಿತ್ರ ಆರೋಗ್ಯ ಸಮಸ್ಯೆ ಇರುವಂತೆ ತೋರಿಸಲಾಗಿದೆ. ಇದರೊಂದಿಗೆ ಮತ್ತೊಂದು ವಿಲನ್ ಎಂಟ್ರಿ ಮಾಡಿಸಬೇಡಿ ಅಂತಲೂ ಪ್ರೇಕ್ಷಕರು ಹೇಳುತ್ತಿದ್ದಾರೆ. ಈಚೆಗೆ ಅಮೃತಧಾರೆಯಲ್ಲಿ ಸೃಜನ್ & ಸುಧಾ ಅವರ ವಿವಾಹವಾಗಿದೆ. ಭೂಮಿಕಾ ಹಾಗೂ ಗೌತಮ್ ಮುಂದೆ ನಿಂತು ಇವರಿಬ್ಬರ ವಿವಾಹವನ್ನು ಮಾಡಿಸಿದ್ದಾರೆ. ಇಷ್ಟು ದಿನ ಮನೆಯವರ ಒಳಿತಿಗಾಗಿ ಹಾಗೂ ಸುಧಾ ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದ ಸೃಜನ್ನ ಎಲ್ಲಿ ಮುಂದೆ ವಿಲನ್ ಆಗಿ ತೋರಿಸ್ತಾರೋ ಎನ್ನುವ ಭಯ ಪ್ರೇಕ್ಷಕರಲ್ಲಿ ಶುರುವಾಗಿದೆ. ನಿರ್ದೇಶಕರು ಏನಾದರೂ ಟ್ವಿಸ್ಟ್ ಕೊಡಬಹುದು ಅಂತಾ ಈ ಧಾರಾವಾಹಿಯ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

ಅಲ್ಲ ಸೃಜನ್ ಕೂಡ ಶಕುಂತಲಾ ಕಡೆ ಇಂದ ಬಂದಿದ್ರೆ ಏನ್ ಕಥೆ ಮದುವೆ ಏನೋ ಆಯ್ತು ಮಂದೇನು ಅಂತ ಪ್ರೇಕ್ಷಕರು ಹೇಳ್ತಿದ್ದಾರೆ. ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ಇದೇ ರೀತಿ ಮುಂದುವರಿಸಿ, ಸೃಜನ್ನ ವಿಲನ್ ಮಾಡಬೇಡಿ. ಈಗಾಗಲೇ ಈ ಸೀರಿಯಲ್ನಲ್ಲಿ ತುಂಬಾ ಜನ ವಿಲನ್ಗಳು ಇದ್ದಾರೆ ಅಂತಲೂ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. ಇದರ ನಡುವೆ ಭೂಮಿಕ ಆರೋಗ್ಯದಲ್ಲಿ ಏರುಪೇರಾಗುವಂತೆಯೂ ತೋರಿಸಲಾಗಿದೆ. ಭೂಮಿಗೆ ಸತ್ಯ ಹೇಳೋಕೆ ಹೊರಟ ಗೌತಮ್ ನಿರ್ಧಾರನಾ ಬದಲಾಯಿಸುತ್ತಾ ಡಾಕ್ಟರ್ ಮಾತುಗಳು ಎನ್ನುವ ಪ್ರೋಮೋವನ್ನು ತೋರಿಸಲಾಗಿದೆ. ಈ ಪ್ರೋಮೋದಲ್ಲಿ ಮಗುವಿನ ಬಗ್ಗೆ ಭೂಮಿಕಾ ತೀರ ಗಂಭೀರವಾಗಿ ರಿಯಾಕ್ಟ್ ಮಾಡಿರುವುದು ಇದೆ.
ಸುಳ್ಳಿನ ಮೇಲೆ ಸುಳ್ಳು ಹೇಳುವುದಕ್ಕಿಂತಲೂ ಭೂಮಿಕಾ ಬಳಿ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ಹೇಳಿ ಬಿಡುತ್ತೇನೆ ಎಂದು ಗೌತಮ್ ಮುಂದಾಗಿರುವಾಗಲೇ ಭೂಮಿಕಾ ಭಯ ಬಿದ್ದಿರುವುದನ್ನು ತೋರಿಸಲಾಗಿದೆ. ಮಗುವಿಗೆ ಇಂಜೆಕ್ಷನ್ ಕೊಡುವುದಕ್ಕೂ ಅಯ್ಯೋ ಬೇಡ... ಡ್ರಾಪ್ಸ್ ಆಗಲ್ವಾ ಅಂತ ಕೇಳಿದ್ದಾರೆ. ಮಗುವಿನ ಬಗ್ಗೆ ಇಷ್ಟೊಂದು ಪ್ಯಾನಿಕ್ ಆಗಿರುವ ವಿಚಾರವನ್ನು ಡಾಕ್ಟರ್ ಅವರು ಗೌತಮ್ ಮುಂದೆ ಹೇಳಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ತಿಳಿಸಬೇಡಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಂತ ಸಲಹೆ ನೀಡಿರುವುದು ವಿಡಿಯೋದಲ್ಲಿದೆ.
ನಿಮ್ಮ ಹೆಂಡತಿಗೆ ವಯಸ್ಸಾದ ಮೇಲೆ ಮಗುವಾಗಿರುವುದರಿಂದ ಈ ರೀತಿ ವರ್ತಿಸುತ್ತಿದ್ದಾರೆ. ಮಕ್ಕಳೆಂದ ಮೇಲೆ ತಾಯಂದಿರು ಮುತುವರ್ಜಿ ವಹಿಸುವುದು ಸಾಮಾನ್ಯ ಆದರೆ ಭೂಮಿಕಾ ಅವರು ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂಬರ್ಥದಲ್ಲಿ ಡಾಕ್ಟರ್ ಹೇಳಿರುವುದು ಪ್ರೋಮೋದಲ್ಲಿ ಇದೆ.
ನಾಮಕರಣದ ಸಂಭ್ರಮ: ಇನ್ನು ಅಮೃತಧಾರೆ ಸೀರಿಯಲ್ನಲ್ಲಿ ಗೌತಮ್ - ಭೂಮಿಕಾ ಅವರ ಪುಟಾಣಿ ರಾಜನಿಗೆ ನಾಮಕರಣದ ಸಂಭ್ರಮ ಶುರುವಾಗಿದೆ. ಭಾಗ್ಯಮ್ಮ ಅವರು ಮುದ್ದು ಮಗುವನ್ನು ಮುದ್ದಿಸುತ್ತಿರುವ ವಿಡಿಯೋ ಇದರಲ್ಲಿ ಇದೆ. ಮಗುವಿನ ಕಾಳಜಿ ಮಾಡುವುದನ್ನು ನೋಡಿ ಗೌತಮ್ ಅಮ್ಮ ಮೊದಲಿನಂತಾದರೆ ಎಷ್ಟು ಚಂದ ಅಂತಾ ಹೇಳಿದ್ದಾರೆ.
-
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?











Click it and Unblock the Notifications