Thalapathy Vijay: ರಾಜಕಾರಣಕ್ಕೆ ಇಳಿಯುತ್ತಿರುವ ನಟ ವಿಜಯ್ ಒಂದು ಕೋಟಿ ದೇಣಿಗೆ ಕೊಟ್ಟಿದು ಯಾರಿಗೆ?
ಚೆನ್ನೈ, ಮಾರ್ಚ್ 13: ನಟ ಕಮ್ ರಾಜಕಾರಣಿ ವಿಜಯ್ ಸಕತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಾಜಕೀಯ ಪಕ್ಷ ಘೋಷಿಸಿ ಸಂಚಲನ ಮೂಡಿಸಿರುವ ಅವರು ಸಿನಿಮಾ ರಂಗದಿಂದಲೇ ದೂರವಾಗುತ್ತಾರೆ ಎಂಬ ವದಂತಿಯಿತ್ತು. ಆದರೆ, ತಾನು ಸಿನಿಮಾ ಬಿಟ್ಟು ಎಲ್ಲಿಯೂ ಹೋಗಿಲ್ಲ ಎನ್ನುವುದಕ್ಕೆ ಮತ್ತೊಂದು ಸುಳಿವು ನೀಡಿದ್ದಾರೆ.
ತಮಿಳು ಚಿತ್ರರಂಗದ ನಟರಿಗಾಗಿ ಚೆನ್ನೈನಲ್ಲಿರುವ ದಕ್ಷಿಣ ಭಾರತದ ಕಲಾವಿದರ ಸಂಘ (ನಾಡಿಗರ್ ಸಂಗಮ್) ಅಸೋಸಿಯೇಷನ್ ಸುಮಾರು ಒಂದು ದಶಕದಿಂದ ತನ್ನ ಸದಸ್ಯರಿಗೆ ಕಟ್ಟಡವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಆದರೆ, ಇನ್ನೂ ಪೂರ್ಣವಾಗಿಲ್ಲ. ಈ ಕಟ್ಟಡದ ನಿರ್ಮಾಣಕ್ಕೆ ಸಹಾಯ ಮಾಡಲು ನಟ ದಳಪತಿ ವಿಜಯ್ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ದಳಪತಿ ವಿಜಯ್. ಈ ಸುದ್ದಿಯನ್ನು ನಾಡಿಗರ್ ಸಂಗಮ್ ಕಾರ್ಯದರ್ಶಿ ನಟ ವಿಶಾಲ್ ಅವರು ಹಂಚಿಕೊಂಡಿದ್ದಾರೆ. ಇಬ್ಬರು ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿರುವ ವಿಶಾಲ್, ಕೊಡುಗೆಗಾಗಿ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.
ಸಂಘದ ಹಾಲಿ ಪದಾಧಿಕಾರಿಗಳು ಕಟ್ಟಡ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. 2017ರಲ್ಲಿ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿದ್ದರೂ ಹಲವು ಆರ್ಥಿಕ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ಗಳು ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.
ಈ ಹಿಂದೆ ಕಮಲ್ ಹಾಸನ್ ಕಟ್ಟಡಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಆನ್ಲೈನ್ನಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈಗ, ವಿಜಯ್ ಕೆಲಸಕ್ಕೂ ಇದೇ ರೀತಿಯ ಮೆಚ್ಚುಗೆಯ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
@actorvijay Thank u means just two words but means a lot to a person wen he does it from his heart. Well, am talking about my favourite actor our very own #ThalapathiVijay brother for DONATING ONE CRORE towards our #SIAA #NadigarSangam building work. God bless u.
— Vishal (@VishalKOfficial) March 12, 2024
Yes we always… pic.twitter.com/EzJtoJaahu
ನಾಡಿಗರ್ ಸಂಗಮ್ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. "ವಿಜಯ್, ಥ್ಯಾಂಕ್ ಯು ಎಂದರೆ ಕೇವಲ ಎರಡು ಪದಗಳು. ಆದರೆ ಒಬ್ಬ ವ್ಯಕ್ತಿಯು ತನ್ನ ಹೃದಯದಿಂದ ಸಹಾಯ ಮಾಡಿದ ವ್ಯಕ್ತಿಗೆ ಇದು ಅರ್ಥವಾಗುತ್ತದೆ. ಸರಿ, ನಾನು ಮಾತನಾಡುತ್ತಿರುವುದು ಎಸ್ಐಎಎ (ನಾಡಿಗರ್ ಸಂಗಮ್) ಕಟ್ಟಡದ ಕೆಲಸಕ್ಕೆ ಒಂದು ಕೋಟಿ ದೇಣಿಗೆ ನೀಡಿದ ನನ್ನ ನೆಚ್ಚಿನ ನಟ ನಮ್ಮ ದಳಪತಿ ವಿಜಯ್ ಸಹೋದರನ ಬಗ್ಗೆ. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದಿದ್ದಾರೆ.
ಮುಂದುವರಿದು "ಹೌದು ನಿಮ್ಮ ಬೆಂಬಲ ಮತ್ತು ಸಹಾಯ ಇಲ್ಲದೆ ಕಟ್ಟಡವು ಅಪೂರ್ಣವಾಗಿರುತ್ತದೆ ಎಂದು ನಾವು ಮೊದಲೇ ಗೊತ್ತಿತ್ತು. ಈಗ ಆದಷ್ಟು ಬೇಗ ಕಟ್ಟದ ನಿರ್ಮಾಣ ಆಗುವಂತೆ ಮಾಡಲು ನೀವು ನಮಗೆ ಉತ್ತೇಜನ ನೀಡಿದ್ದೀರಿ ಸಹೋದರ. ಧನ್ಯವಾದಗಳು ಸಹೋದರ" ಎಂದು ನಟ ವಿಶಾಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸಿನಿಮಾ ಕೆಲಸದ ವಿಷಯಕ್ಕೆ ಬಂದರೆ, ಲಿಯೋ ಸಿನಿಮಾ ಬಳಿಕ ದಳಪತಿ ವಿಜಯ್ ಪ್ರಸ್ತುತ ತಮ್ಮ 68 ನೇ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಲಿದ್ದಾರೆ. ಅರ್ಚನಾ ಕಲ್ಪಾತಿ ನಿರ್ಮಿಸಲಿದ್ದಾರೆ. ಆದರೆ, ವಿಜಯ್ ಅವರ ಕೊನೆಯ ಚಿತ್ರ ಎಂದು ವದಂತಿಗಳಿವೆ, ಏಕೆಂದರೆ ಅವರು ರಾಜಕೀಯದತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications