ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು 20 ನಿಮಿಷಕ್ಕೆ ಓಡಿ ಬಂದು ಗಾಯತ್ರಿ ಮಂತ್ರ ಪಠಿಸಿದ ಗಾಯಕಿ ಸುಚಿತ್ರಾ
ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು 20 ನಿಮಿಷಕ್ಕೆ ಓಡಿ ಬಂದೆ ಅಂತ ನಟಿ ಹಾಗೂ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.
ಜರ್ಮನಿಯ ಬರ್ಲಿನ್ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಮುಜುಗರಕ್ಕೀಡಾಗಿದ್ದರ ಬಗ್ಗೆ ಗಾಯಕಿ ಸುಚಿತ್ರಾ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಬಾಡಿ ಪಾಸಿಟಿವಿಟಿಯಿಂದ ಬರ್ಲಿನ್ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಸುಚಿತ್ರಾ ಭಾಗವಹಿಸಿದ್ದರಂತೆ. ಭಾಗಿಯಾಗಿರುವಾಗ ತಲೆ ಕೆಡುವಷ್ಟು ಓಪನ್ ಆಗಿರಬೇಡಿ ಎಂಬ ಮಾತು ನೆನಪಾಯ್ತು ಹೀಗಾಗಿ ಅಲ್ಲಿಂದ ಬಂದು ಬಿಟ್ಟೆ. ಮನೆಗೆ ಬಂದು ಸ್ನಾನ ಮಾಡಿ ವಿಶ್ರಾಂತಿ ಬಳಿಕ ಗಾಯತ್ನಿ ಮಂತ್ರಿ ಪಠಿಸಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಬರ್ಲಿನ್ ಇವೆಲ್ಲಾ ಮಾಮೂಲು ಎಂದಿರುವ ಸುಚಿತ್ರಾ ಅವರು ಆ ಅನುಭವವನ್ನು ಹೊಂದುವ ಆಲೋಚನೆಯೊಂದಿಗೆ ಹೋಗಿದ್ದೆ. ಸುಚಿತ್ರಾ ತಾನು ಹೃದಯದಲ್ಲಿ ತುಂಬಾ ದೇಸಿ ಆಗಿದ್ದು ತಾನು ಯಾರ ಬಿ*** ಮತ್ತು ಬಿ****** ಗಳನ್ನು ನೋಡಲು ಬಯಸದೆ ಅಲ್ಲಿಂದ ಓಡಿ ಬಂದಿದ್ದಾಗಿ ಹೇಳಿದ್ದಾರೆ.
ವಿದೇಶದಲ್ಲಿ ಕೆಲವೊಂದು ಪಾರ್ಟಿಗಳು ಮುಜುಗರಕ್ಕೀಡು ಮಾಡುತ್ತವೆ. ಬರ್ಲಿನ್ನಲ್ಲಿ ಇದು ತುಂಬಾ ಅಂದರೆ ತುಂಬಾ ಸಾಮಾನ್ಯ ವಿಷಯ. ಆದರೆ ಭಾರತೀಯರಿಗೆ ಇದರಲ್ಲಿ ಭಾಗಿಯಾಗುವುದು ತುಂಬಾ ಮುಜುಗರದ ವಿಷಯ. ದೇಹದ ಕುರಿತು ಪಾಸಿಟಿವಿಟಿ ಬೆಳೆಸಿಕೊಳ್ಳಲು ಉತ್ತೇಜನ ನೀಡುವುದು ಇದರ ಉದ್ದೇಶ.

ಈ ಬಗ್ಗೆ ಗಾಯಕಿ ಕೇಳಿದಾಗ, ನೋಡಿದಾಗ, ಜೀವನದಲ್ಲಿ ಒಂದು ಅನುಭವ ಆಗಲಿ ಎಂದುಕೊಂಡು ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್ವೊಂದರಲ್ಲಿ ಈ ಪಾರ್ಟಿಯಲ್ಲಿ ಪಾಲ್ಗೊಂಡೆ. ನಾನು ಎಲ್ಲಾ ಅತಿಥಿಗಳ ಪಟ್ಟಿಯಲ್ಲಿ ಒಬ್ಬಳಾಗಿದ್ದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ, ನನಗೆ ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ಆಗಲಿಲ್ಲ ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.
Just attended a body positivity/ naked party in Berlin.
— Suchitra Krishnamoorthi (@suchitrak) July 13, 2024
Reminded me of the quote : dont be so open minded that ur brains fall out.
Desi girl forever. Need a sĥower & some gayatri mantra chanting . Baapre 🙃
ಮೋಜು ಮಸ್ತಿ ಇರಬೇಕು. ಆದರೆ ಈ ರೀತಿ ಪಾರ್ಟಿಯಲ್ಲಿ ನನಗೆ ಇರಲು ಆಗಲಿಲ್ಲ. ಅಲ್ಲಿನ ಪರಿಸರಕ್ಕೆ ಅದು ಉತ್ತಮವಾಗಿರುತ್ತದೆ. ಇದು ಭಾರತೀಯರಾದ ನಮಗೆ ಇದನ್ನು ನೋಡುವುದು ಕಷ್ಟ. ಅಲ್ಲಿ ಇದು ಸಾಮಾನ್ಯ ವಿಚಾರ ಆದರೆ ಇದು ನನಗೆ ಅಸಮಾನ್ಯ ಎನಿಸಿತು. ರಾತ್ರಿಯಿಂದ ಬೆಳ್ಳೆವರೆಗೂ ಈ ಪಾರ್ಟಿಯಲ್ಲಿ ಜನ ಬೆತ್ತಲೆಯಾಗೇ ಇರುತ್ತಾರೆ. ಆದರೆ ಇಲ್ಲಿ ಉಳಿಯುವುದು ತುಂಬಾ ಕಷ್ಟವಾಯಿತು. ಹೀಗಾಗಿ ನಾನು 20 ನಿಮಿಷಕ್ಕೆ ವಾಪಸ್ ಬಂದೆ ಎಂದಿದ್ದಾರೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications