ಯುಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ಫಾಲೋವರ್ಸ್, ಬಿಗ್ಬಾಸ್ನಲ್ಲಿ ಮಿಂಚ್ತಾರಾ ಸರಿಗಮಪ ಸಿಂಗರ್?
Bigg Boss offer BBK 12: ಬಿಗ್ಬಾಸ್ ಕನ್ನಡ ಸೀಸನ್ 12 ಇದೇ ಸೆಪ್ಟೆಂಬರ್ 28ರಿಂದ ಶುರುವಾಗಲಿದೆ. ಈ ಅದ್ಧೂರಿ ವೇದಿಕೆಯಲ್ಲಿ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರ ಹೆಸರುಗಳು ಹರಿದಾಡುತ್ತಿದೆ. ಈ ಸೀಸನ್ನ ಸ್ಪರ್ಧಿಗಳು ಇವರೇ ಎಂಬ ಸಂಭಾವ್ಯರ ಪಟ್ಟಿಯೊಂದ ವೈರಲ್ ಆಗಿದೆ. ಈ ಪೈಕಿ ಯುಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ಫಾಲೋವರ್ಸ್ ಹೊಂದಿರುವ "ಸರಿಗಮಪ" ಖ್ಯಾತಿಯ ಜಾನಪದ ಗಾಯಕ ಬಾಳು ಬೆಳಗುಂದಿ ಅವರ ಹೆಸರು ಕೂಡ ಇದೆ. ಹಲವು ದಿನಗಳಿಂದ ಇವರ ಹೆಸರು ಚರ್ಚೆಯಲ್ಲಿದೆ. ಬಿಗ್ಬಾಸ್ಗೆ ಹೋಗೋದು ಪಕ್ಕಾನಾ? ಈಗಾಗಲೇ ಆಫರ್ ಬಂದಿರೋದು ನಿಜಾನಾ? ಎಂಬ ಪ್ರಶ್ನೆಗಳಿಗೆ ಬಾಳು ಬೆಳಗುಂದಿ ಅವರೇ ಉತ್ತರ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರೇ ಈ ಬಿಗ್ಬಾಸ್ ಸೀಸನ್ ಹೋಸ್ಟ್ ಮಾಡುವುದು ಪಕ್ಕಾ ಆಗಿದೆ. ಕಲರ್ಸ್ ವಾಹಿನಿ ಈಗಾಗಲೇ ಎರಡು ಪ್ರೋಮೋಗಳನ್ನೂ ಹಂಚಿಕೊಂಡಿದೆ. ಒಂದರಲ್ಲಿ ಯಾವೆಲ್ಲ ಕ್ಷೇತ್ರದ ಸ್ಪರ್ಧಿಗಳಿರ್ತಾರೆ ಎಂದು ಸುದೀಪ್ ಸುಳಿವು ನೀಡಿದ್ದರೆ, ಮತ್ತೊಂದು ಪ್ರೋಮೋದಲ್ಲಿ ನರಿ-ಕಾಗೆ ಕಥೆ ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಈ ಬಿಗ್ಬಾಸ್ ಬಗ್ಗೆ ನಿಮಗೆಲ್ಲಾ ಗೊತ್ತು ಅನ್ಕೊಂಡ್ರೆ ಅದು ಭ್ರಮೆ ಎಂದು ಕಿಚ್ಚ ಪ್ರೇಕ್ಷಕರ ಕಾಲೆಳೆದಿದ್ದಾರೆ. ಆದರೆ ಈ ಸೀಸನ್ನ ಸ್ಪರ್ಧಿಗಳ ಹೆಸರು ಕೂಡ ಲೀಕ್ ಆಗಿದೆ ಎನ್ನಲಾದ ಪಟ್ಟಿಯೊಂದು ಹರಿದಾಡುತ್ತಿದೆ.

ಇದೆಲ್ಲ ಅಂತೆ ಕಂತೆಗಳ ನಡುವೆ ಬಾಳು ಬೆಳಗುಂದಿ ಅವರ ಹೆಸರಂತೂ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಬಾಳು ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. 'ಬಿಗ್ಬಾಸ್ ಅನ್ನೋದು ಒಂದು ದೊಡ್ಡ ಕಾರ್ಯಕ್ರಮ. ನನಗೆ ಅದರ ಬಗ್ಗೆ ತುಂಬಾ ಗೌರವ ಇದೆ. ಆದರೆ ಯಾವಾಗ ಏನು ಆಗುತ್ತದೆಯೋ ಗೊತ್ತಿಲ್ಲ. ಸದ್ಯಕ್ಕೆ ನನ್ನ ಕೆಲಸಗಳಲ್ಲಿ ನಾನು ಬ್ಯುಸಿಯಾಗಿದ್ದೀನಿ. ಬಿಗ್ಬಾಸ್ಗೆ ಹೋಗುವ ಬಗ್ಗೆ ಏನು ಹೇಳಬೇಕು ಅನ್ನೋದು ನನಗೆ ಗೊತ್ತಿಲ್ಲ' ಎಂದಿದ್ದಾರೆ.
'ಕಳೆದ ಸೀಸನ್ಗೇ ಕರೆದಿದ್ರು'
'ಇಲ್ಲಿವರೆಗೆ ಇದರ ಬಗ್ಗೆ ಏನನ್ನೂ ಹೇಳಲಾರೆ. ದೇವರು ಆ ಅವಕಾಶ ಕೊಟ್ಟಾಗ ನೋಡೋಣ. ಈ ವರ್ಷ ನನಗೆ ಆಫರ್ ಬಂದಿತ್ತು. ಆದರೆ ನನಗೆ ಹೆಚ್ಚಿನ ಕೆಲಸಗಳು ಇರುವುದರಿಂದ ಅದನ್ನ ಮುಂದೂಡಿದ್ದೇನೆ. ಕಳೆದ ವರ್ಷ ಸರಿಗಮಪ ಕಾರ್ಯಕ್ರಮಕ್ಕೆ ಬರೋ ಮುನ್ನವೇ ಆಫರ್ ಒಂದು ಸಲ ಬಂದಿತ್ತು. ಅದನ್ನ ನಾನು ಮಿಸ್ ಮಾಡಿಕೊಂಡೆ. ನಾನು ಹೋಗಲಿಲ್ಲ ಎಂದು ನಮ್ಮ ಹನುಮಂತಣ್ಣ ಅವರಿಗೆ ಅವಕಾಶ ಕೊಟ್ಟಿದ್ರು. ಅವರು ನಮ್ಮ ಹಾವೇರಿಯವರು. ಶೋ ವಿನ್ ಆಗಿದ್ದು ತುಂಬಾ ಖುಷಿ ಆಯ್ತು' ಎಂದಿದ್ದಾರೆ.
'ಈಗ ನನ್ನ ಕೆಲಸಗಳು ತುಂಬಾ ಇವೆ. ನನ್ನದೇ ಯುಟ್ಯೂಬ್ ಚಾನಲ್ ಕೂಡ ಇದೆ, ಒಂದು ಟೀಂ ಕೆಲಸ ಮಾಡುತ್ತೆ. ಎಲ್ಲರಿಗೂ ಸಮನಾಗಿ ನವೂ ಕೆಲಸಗಳನ್ನ ಮಾಡಬೇಕಿದೆ. ಬಿಗ್ಬಾಸ್ ಒಂದು ದೊಡ್ಡ ವೇದಿಕೆ. ಆದರೆ ನನ್ನದೇ ಆದ ಒಂದು ಕುಟುಂಬ ಹಾಗೂ ತಂಡ ಇದೆ. ಇದೆಲ್ಲವನ್ನ ಬಿಟ್ಟು, ನಾನು ಬಿಗ್ಬಾಸ್ಗೆ ಹೋಗಲು ಸಾಧ್ಯವಿಲ್ಲ' ಎಂದು ಬಾಳು ಬೆಳಗುಂದಿ ಹೇಳಿದ್ದಾರೆ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications