'ಅಪರ್ಣಾ ಅವರು ಇವತ್ತು..ನಾಳೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು'
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ 2024ರ ಜುಲೈ 11ರಂದು ಕೊನೆಯುಸರೆಳೆದರು. ತಮ್ಮ ವೃತ್ತಿ ಜೀವನದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು, ಗೌರಿಶಂಕರ ಧಾರಾವಾಹಿ ನಾಯಕ ನಟ ಯಶವಂತ್ ಬೆಟ್ಟಸ್ವಾಮಿ ಅವರನ್ನು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದರು.
ಇವಳು ಸುಜಾತ ಧಾರಾವಾಹಿಯಲ್ಲಿ ಅಪರ್ಣಾ ಹಾಗೂ ಯಶವಂತ್ ಬೆಟ್ಟಸ್ವಾಮಿ ಜೊತೆಯಾಗಿ ನಟಿಸಿದ್ದು, ತಾಯಿ ಮಗನ ಪಾತ್ರ ಮಾಡುತ್ತಾ ಮಾಡುತ್ತಾ ಇಬ್ಬರ ನಡುವೆ ನಿಜವಾಗಿಯೂ ತಾಯಿ-ಮಗನ ಬಾಂಧವ್ಯ ಬೆಸೆದುಕೊಂಡಿತ್ತು. ಈ ಅಪರೂಪದ ಬಾಂಧವ್ಯದ ಬಗ್ಗೆ ನಟ ಯಶವಂತ್ ಬೆಟ್ಟಸ್ವಾಮಿ ಮಾತನಾಡಿದ್ದಾರೆ.

ಇಟ್ಸ್ ಮಜಾ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, 'ನೀನು ಮದುವೆಯಾಗಬೇಕು ಅಂದರೆ ಆ ಹುಡುಗಿಯನ್ನು ಮೊದಲು ನಾನು ನೋಡಿ ಒಕೆ ಮಾಡಬೇಕು. ಆಮೇಲೆ ನಿನ್ನ ಅಮ್ಮನ ಹತ್ತಿರ ನೀನು ಒಪ್ಪಿಗೆ ಪಡೆಯಬೇಕು ಎನ್ನುತ್ತಿದ್ದರು. ಧಾರಾವಾಹಿಯಲ್ಲಿ ಚಿಕ್ಕಪುಟ್ಟ ರೊಮ್ಯಾನ್ಸ್ ಸೀನ್ ಬಂದರೆ ಅವರು ನಟನೆ ಮಾಡಿ ತೋರಿಸುತ್ತಿದ್ದರು. ನೀನು ಹೀಗೆ ಮಾಡಬೇಕು ಅಂತಾ ಹೇಳಿ ಕೊಡುತ್ತಿದ್ದರು. ಬಹಳ ಗಂಭೀರವಾಗಿ ಏನು ಹೇಳಿಕೊಡುತ್ತಿರಲಿಲ್ಲ, ತಮಾಷೆಗೆ ಹೇಳಿಕೊಡುತ್ತಿದ್ದರು' ಎಂದರು.
'ನಾನು ಕನ್ನಡ ಮಾತನಾಡಲು, ಅದು ಇಷ್ಟು ಸ್ಪಷ್ಟವಾಗಿ ಮಾತನಾಡಲು ಅವರೇ ಕಾರಣ. ಅವರು ತುಂಬಾ ನನ್ನನ್ನು ತಿದ್ದಿದ್ದಾರೆ. ಯಾವುದಾದರೂ ಒಂದು ದೃಶ್ಯ ಇದ್ದರೆ ನನಗಂತಲ್ಲಾ ಎಲ್ಲರಿಗೂ ಹೀಗೆ ಹೀಗೆ ಮಾಡಿ ಅಂತಾ ಹೇಳಿಕೊಡುತ್ತಿದ್ದರು. ಹೊಸದಾಗಿ ನಟನೆಗೆ ಬಂದ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಸಹಾಯಕ್ಕಿಂತ ಹೆಚ್ಚಾಗಿ ಮೊದಮೊಲು ಧೈರ್ಯ ತುಂಬಿದ್ದಾರೆ'.

'ಅವರು ತುಂಬಾ ವರ್ಷದಿಂದ ನಟನೆಯಲ್ಲಿ ಇದ್ದಾರೆ. ಹೊಸಬರು ನಾವು ಬಂದಾಗ ನಮಗೆ ಅವರ ಮುಂದೆ ಒಂದು ಭಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಜೊತೆಗಿರುವವರಿಗೆ ಧೈರ್ಯ ತುಂಬುವ ಕೆಲಸವನ್ನು ಅಪರ್ಣಾ ಅವರು ಮಾಡುತ್ತಿದ್ದರು. ಬೇರೆಯವರ ಜೊತೆಗೆ ಹೇಗಿದ್ದರೋ ಏನೋ ಗೊತ್ತಿಲ್ಲ ಆದರೆ ನನಗೆ ನಟನೆಯಲ್ಲಿ ಭರವಸೆ ಮೂಡಿಸಿದ್ದು ಅವರು' ಎಂದರು.
ಅಪರ್ಣಾ ಅವರ ಸಾವಿನ ಸುದ್ದಿ ಬಂದಾಗ ಆದ ನೋವಿನ ಬಗ್ಗೆ ಮಾತನಾಡಿದ ಯಶವಂತ್, 'ಅವರಿಗೆ ಕ್ಯಾನ್ಸರ್ ಇದೆ ಅಂತಾ ಗೊತ್ತಾದಾಗ ಇವತ್ತು ನಾಳೆ ಎನ್ನುವ ವಿಚಾರ ನಮಗೆ ಗೊತ್ತಾಗಿತ್ತು. ಆ ಸಮಯದಲ್ಲೇ ನಮಗೆ ಸಿಕ್ಕಾಪಟ್ಟೆ ಆತಂಕ ಆಗಿತ್ತು. ಅವರ ನಿಧನದ ದಿನ ನಾನು ಶೂಟಿಂಗ್ ಮುಗಿಸಿಕೊಂಡು ಊರಿಗೆ ಹೋಗಿದ್ದೆ. ಫೋನ್ ಬರುತ್ತಿದ್ದಂತೆ ತಕ್ಷಣವೇ ಹೊರಟು ಬಂದೆ'.
'ನಾನು ಅವರನ್ನು ಮೊದಲು ಅಷ್ಟು ಸುಂದರವಾಗಿ ನೋಡಿದ್ದೆ. ಯಾವಾಗಲೂ ಅವರು ಹೊಳೆಯುತ್ತಿದ್ದರು. ಅವರ ಜೀವನೋತ್ಸಾಹ ಅವರ ಸುತ್ತ ಹೋದವರಿಗೆ ಗೊತ್ತಾಗುತ್ತಿತ್ತು. ಅಷ್ಟು ಚೆನ್ನಾಗಿ ಇದ್ದವರು, ಅಷ್ಟು ಲಕ್ಷಣವಾಗಿ ಇದ್ದವರು. ಹಾಗೆ ಅವರನ್ನು ನೋಡಿದ ಮೇಲೆ ಈ ರೀತಿ ಅವರನ್ನು ನೋಡಲು ಆಗಲಿಲ್ಲ. ಒಂದು ಗಂಟೆ ಅವರ ಮೃತದೇಹದಿಂದ ದೂರ ಇದ್ದೆ. ಅವರ ಮುಖ ನೋಡಲು ನನಗೆ ಅಷ್ಟು ಸಮಯಬೇಕಾಯಿತು' ಎಂದು ಬೇಸರ ವ್ಯಕ್ತಪಡಿಸಿದ್ದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications