Puttakkana Makkalu: ಪುಟ್ಟಕ್ಕನ ಮಕ್ಕಳು: ಹೊಸ ಪ್ರೇಮಕಥೆಗೆ ಜನ ಫಿದಾ!
Puttakkana Makkalu: ಕನ್ನಡದ ಪ್ರಮುಖ ಸೀರಿಯಲ್ಗಳಲ್ಲಿ ಒಂದಾಗಿರುವ ಪುಟ್ಟಕ್ಕನ ಮಕ್ಕಳು ಮತ್ತೆ ಹಳಿಗೆ ಬಂದಿದೆ. ಸಾಕು ನಿಲ್ಲಿಸಿ ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದ ಪ್ರೇಕ್ಷಕರು ಇದೀಗ ಮತ್ತೆ ನೋಡಲು ಪ್ರಾರಂಭಿಸಿದ್ದಾರೆ. ಈ ಸೀರಿಯಲ್ನ ನಿರ್ದೇಶಕರು ಭಾರೀ ಟೀಕೆಗೆ ಗುರಿಯಾಗಿದ್ದರು. ಕಥೆ ಸಾಗುತ್ತಿದ್ದ ರೀತಿಗೂ ಪದೇ ಪದೇ ಪಾತ್ರಗಳ ಬದಲಾವಣೆಗೂ ಜನ ಗರಂ ಆಗಿದ್ದರು. ಈ ಧಾರವಾಹಿ ಪ್ರಾರಂಭವಾದಾಗ ಇದ್ದ ಪ್ರಮುಖ ಪಾತ್ರಧಾರಿಗಳೇ ಬದಲಾಗಿದ್ದಾರೆ. ಆದರೆ ಪ್ರಮುಖ ಪಾತ್ರಧಾರಿ ಹಾಗೂ ನಟಿ ಪಾತ್ರ ಬದಲಾವಣೆಯಾದ ಮೇಲೆ ಈ ಸೀರಿಯಲ್ ಡಲ್ ಆಗಿತ್ತು. ಇದೀಗ ನಲ್ಮೆಯ ಹಾಡು ಮತ್ತೆ ಶುರುವಾಗಿದೆ. ಈ ಸೀರಿಯಲ್ನಲ್ಲಿ ಮತ್ತೆ ಪಾತ್ರ ಬದಲಾವಣೆಯಾದ ಮೇಲೆ ಜನ ಮೆಚ್ಚಿಕೊಳ್ಳುತ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್ಪಿ ರೇಸ್ನಲ್ಲಿ ಯಾವಾಗಲು ಮುಂಚೂಣಿಯಲ್ಲಿ ಇರುತ್ತಿತ್ತು. ಯಾವಾಗ ಮುಖ್ಯಪಾತ್ರಧಾರಿಯ ಬದಲಾವಣೆ ಆಯಿತೋ ಆಗಿನಿಂದಲೇ ಈ ಸೀರಿಯಲ್ನ ಬಗ್ಗೆ ಜನರಿಂದ ಅಪಸ್ವರಗಳು ಬರಲು ಪ್ರಾರಂಭವಾಯಿತು. ಒಂದು ಹಂತಕ್ಕೆ ಇನ್ನೇನು ಈ ಧಾರವಾಹಿ ಮುಗಿದೇ ಹೋಗಲಿದೆ ಎನ್ನುವಾಗಲೇ ಪುಟಿದೆದ್ದಿದೆ. ಹೊಸ ಪ್ರೇಮ ಕಥೆಗೆ ಜನ ಮೆಚ್ಚಿಕೊಂಡಿದ್ದಾರೆ.

ಈ ಸೀರಿಯಲ್ನಲ್ಲಿ ಮುಖ್ಯಪಾತ್ರಧಾರಿ ಸ್ನೇಹ ಅವರ ಸಾವು ಕಥೆಯ ತಿರುವಿಗೆ ಕಾರಣವಾಗಿತ್ತು. ಸ್ನೇಹಾ ಪಾತ್ರ ಮಾಡುತ್ತಿದ್ದ ಸಂಜನಾ ಬುರ್ಲಿ ಅವರು ವಿದ್ಯಾಭ್ಯಾಸಕ್ಕೆಂದು ಸೀರಿಯಲ್ ತೊರೆದಿದ್ದರು. ಇದಾದ ಮೇಲೆ ಹೊಸದಾಗಿ ಈ ಪಾತ್ರಕ್ಕೆ ಬಂದ ಅಪೂರ್ವ ನಾಗರಾಜ್ ಅವರಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಅಷ್ಟು ಮಾತ್ರವಲ್ಲ ಧನುಷ್ - ಕಂಠಿ (ಸೀರಿಯಲ್ ನಟ) ಪಾತ್ರಕ್ಕೆ ಅಪೂರ್ವ ಅವರು ಬೇಡ ಎನ್ನುವ ಒತ್ತಾಯವು ಪ್ರೇಕ್ಷಕರಿಂದ ಕೇಳಿ ಬಂತು. ಇನ್ನು ಈ ಸಮಯದಲ್ಲಿ ಕಥೆ ಸಹ ಸರಾಗವಾಗಿ ಸಗಾದೆ, ಗೊಜಲು ಸೃಷ್ಟಿಯಾಗಿತ್ತು ಎನ್ನುವ ಮಾತೂ ಕೇಳಿ ಬಂದಿತ್ತು.
ಹೊಸ ಬದಲಾವಣೆಯಿಂದ ಪ್ರೇಕ್ಷಕರಿಗೆ ಖುಷಿ!
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಟಿ ಉಮಾಶ್ರೀ ಅವರ ಪಾತ್ರ ಹಾಗೂ ನಟನೆಗೆ ಅಗ್ರಸ್ಥಾನವಿದೆ. ಎರಡನೇ ಹಂತದಲ್ಲಿ ಕಂಠಿ-ಸ್ನೇಹಾ ಪ್ರೇಮ ಕಥೆಯನ್ನು ಜನ ತುಂಬಾ ಮೆಚ್ಚಿಕೊಂಡಿದ್ದರು. ಕಂಠಿ-ಸ್ನೇಹಾ ಅವರ ಪ್ರೇಮ ಕಥೆ ಮುದ್ದಾಗಿ ಸಾಗುವಾಗಲೇ ಈ ಸೀರಿಯಲ್ನಲ್ಲಿ ಮಹತ್ವದ ಬದಲಾವಣೆಗಳಾಗಿತ್ತು. ಇದೀಗ ಈ ಪಾತ್ರವನ್ನು ನಟಿ ವಿದ್ಯಾರಾಜ್ ಅವರು ಮಾಡುತ್ತಿದ್ದು. ಹೊಸ ಸಂಚಿಕೆಗಳಿಗೆ ಜನ ಫಿದಾ ಆಗಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ನ "ನನ್ನಯ ಕಣ್ಣಿಗೆ ನಿನ್ನ ನೋಡೋ ತವಕ... ಎದುರಲಿ ನಿಂತಿರಿ.... ಈ ಪ್ರೀತಿಯ ಸವಿ ಎದೆಗೆ ತಾಕಲು ಆಯಾಗಿದೆ..." ಹಾಡು ಮತ್ತೆ ಬರುತ್ತಿದೆ. ಸ್ನೇಹ - ಕಂಠಿಯ ಮಧುರ ಪ್ರೇಮಕಥೆಯ ಪುನರಾರಂಭವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ.
ಹೊಸ ತಿರುವು ಹಾಗೂ ಮುದ್ದಾದ ನಟನೆಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ. ಇದಕ್ಕೆ ಪ್ರೇಕ್ಷಕರು ಮಾಡುತ್ತಿರುವ ಕಮೆಂಟ್ಗಳೇ ಸಾಕ್ಷಿ. ಒಂದು ತಿಂಗಳ ಹಿಂದಷ್ಟೇ ಈ ಸೀರಿಯಲ್ನ ಪ್ರೋಮೊದಲ್ಲಿ ಪ್ರೇಕ್ಷಕರ ಬೈಗುಳದ ಸುರಿಮಳೆಯೇ ಇರುತ್ತಿತ್ತು. ಆದರೆ ಈಗ ಜನ ಚೆನ್ನಾಗಿದೆ ಅಂತ ಕಮೆಂಟ್ ಮಾಡುತ್ತಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications