50-60 ಲಕ್ಷ ಖರ್ಚು ಮಾಡಿ ಮದುವೆ ಆಗೋದು ಬೇಕಿತ್ತಾ ಅನಿಸಿಬಿಡ್ತು- ಚಂದನ್ ಶೆಟ್ಟಿ
ಕನ್ನಡ ಕಿರುತೆರೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ. ವಿಚ್ಛೇದನ ಪಡೆದುಕೊಂಡಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಲ್ಕು ವರ್ಷಗಳ ಬಳಿಕ ದೂರಾಗಿದ್ದಾರೆ. ಇಬ್ಬರ ಒಪ್ಪಿಗೆಯ ಮೇರೆಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.
ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಜೂನ್ 06ರಂದು ವಿಚ್ಛೇದನಕ್ಕಾಗಿ ಶಾಂತಿನಗರದ ಫ್ಯಾಮಿಲಿ ಕೋರ್ಟ್ಗೆ ತೆರಳಿ ಮಾರನೇ ದಿನವೇ ಡಿವೋರ್ಸ್ ಪಡೆದಿದ್ದರು. ಡಿವೋರ್ಸ್ ಬಳಿಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ತಿಳಿಸಿದ್ದು, ತಮ್ಮ ಖಾಸಗಿ ಜೀವನ ಗೌರವಿಸುವಂತೆ ಮನವಿ ಮಾಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಸಹ ಸ್ಪಷ್ಟನೆ ನೀಡಿದ್ದರು.

ಇದೀಗ ಮತ್ತೆ ಚಂದನ್ ಶೆಟ್ಟಿ ಮದುವೆ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, 'ನಾನು ಸ್ವಲ್ಪ ಖರ್ಚು ಮಾಡುವುದು ಜಾಸ್ತಿ. ಗ್ಯಾಜೆಟ್ಸ್ ಅಂತೆಲ್ಲಾ ತುಂಬಾ ಖರ್ಚು ಮಾಡುತ್ತೇನೆ. ಕೋವಿಡ್ ಆದ ಮೇಲೆನೇ ನಾನು ಸ್ವಲ್ಪ ಪಾಠ ಕಲಿತದ್ದು. ಜಾಸ್ತಿ ಖರ್ಚುಗಳು ಮಾಡಬಾರದು ಅಂತಾ ಅನಿಸಿದ್ದೆ ಆಗ. ಕೋವಿಡ್ ತುಂಬಾ ದೊಡ್ಡ ಪಾಠ ಕಲಿಸಿ ಹೋಯ್ತು. ಅಂತಹ ಸಂದರ್ಭ ಬರದೇ ಇದ್ದರೆ ನಾನು ಇನ್ನು ಹೆಚ್ಚು ಹಣ ಕಳೆದುಕೊಳ್ಳುತ್ತಿದೆ ಅನಿಸುತ್ತಿದೆ.
ನಾನು ಮನಿ ಮ್ಯಾನೇಜ್ಮೆಂಟ್ ಕಲಿತ್ತಿದ್ದೇ ಕೋವಿಡ್ ಸಮಯದಲ್ಲಿ. ಆ ಸಮಯದಲ್ಲಿ ನಾನು ಮದುವೆಯಾದೆ. ಮದುವೆಯಾಗಿ ಒಂದು ವಾರಕ್ಕೆ ಲಾಕ್ಡೌನ್ ಆಯ್ತು. ಆ ಹಿಂದಿನ ವಾರ ಸುಮಾರು ಐವತ್ತರಿಂದ ಅವರತ್ತು ಲಕ್ಷ ಮದುವೆಗೆ ಖರ್ಚು ಮಾಡಿದ್ದೆ. ಫುಲ್ ಕಾನ್ಫಿಡೆನ್ಸ್ ಇತ್ತು. ಒಂದು ಎರಡು ತಿಂಗಳಲ್ಲಿ ಮತ್ತೆ ಸಂಪಾದಿಸುತ್ತೇನೆ ಎನ್ನುವ ನಂಬಿಕೆ ಇತ್ತು. ಯಾಕೆಂದರೆ ನನಗೆ ಆ ಟೈಮ್ ಅಲ್ಲಿ ಅಷ್ಟು ಶೋ ಬರುತ್ತಿತ್ತು. ಆದರೆ ಆ ಬಳಿಕ ಹೇಗೆ ಆಯ್ತು ಅಂದರೆ ಬೇಕಿತ್ತಾ ನನಗೆ ಇದು ಅನ್ನೋ ತರನು ಅನಿಸಿಬಿಡ್ತು ಎಂದರು.

ಇನ್ನು ವೈಯಕ್ತಿಕ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ದೇವರನ್ನು ನಾನು ನಂಬುತ್ತೇನೆ. ಎಲ್ಲಾ ದೇವರನ್ನು ನಾನು ನಂಬುತ್ತೇನೆ. ಅದೊಂದು ಶಕ್ತಿ ಅಂತಾ ನಂಬುತ್ತಿರುತ್ತಾರಲ್ಲ ಅದರ ಮೇಲೆ ನಂಬಿಕೆ ಮುಖ್ಯ. ದೇವರು ಎನ್ನುವುದಕ್ಕಿಂದ ನಂಬಿಕೆ ಮುಖ್ಯ ಎಂದಿದ್ದಾರೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications