ನನಗೆ ಬರೀ ಐಟಂ ಸಾಂಗ್ದೇ ಆಫರ್: ನಟಿ ನೀತು ಶೆಟ್ಟಿ
ಬೆಂಗಳೂರು, ಸೆಪ್ಟೆಂಬರ್ 24: ಲೈಂಗಿಕ ದೌರ್ಜನ್ಯ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫೈರ್ ಸಂಸ್ಥೆ ತೀವ್ರವಾಗಿ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿದ್ದು, ಈ ಸಭೆ ಫೈರ್ ಸಂಸ್ಥೆಗೆ ತೀವ್ರ ಅಸಮಾಧಾನ ತಂದಿದೆ.
ಈ ವೇಳೆ ನಟಿ ನೀತು ಶೆಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದರು. ಚಿತ್ರರಂಗ ಹೇಗಿದೆ ಎನ್ನುವುದರ ಬಗ್ಗೆ ಕರ್ನಾಟಕ ಟಿವಿಯಲ್ಲಿ ನೀತು ಶೆಟ್ಟಿ ಮಾತನಾಡಿದ್ದು, ಚಿತ್ರರಂಗವನನ್ನು ಹೆಚ್ಚಿನ ಗಂಡಸರು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

'ಚಿತ್ರರಂಗದಲ್ಲಿ ಬ್ರಾಂಡಿಂಗ್ ತುಂಬಾ ಸಾಮಾನ್ಯ. ಗಾಳಿಪಟದ ನನ್ನ ಟಾಮ್ ಬಾಯ್ ಪಾತ್ರ ಯಾವಾಗ ಹಿಟ್ ಆಯ್ತು ಆಗ ನನಗೆ ಎಂಟರಿಂದ ಹತ್ತು ಅದೇ ರೀತಿಯ ಪಾತ್ರ ಬಂತು. ಕೆಲವು ರಿಮೇಕ್ ಚಿತ್ರಗಳು ಕೂಡ ಸೇಮ್ ಪಾತ್ರಕ್ಕೆ ಬಂತು. ತೆಲುಗಿನಲ್ಲಿ ತುಂಬಾ ಹಿಟ್ ಆದ ಸಿನಿಮಾದ ರೀಮೆಕ್ ಇತ್ತು ಅದರಲ್ಲಿ ಕೂಡ ಟಾಮ್ ಬಾಯ್ ಪಾತ್ರ ಬಂದಿತ್ತು. ಆದರೆ ನಾನು ಮಾಡಿರಲಿಲ್ಲ' ಎಂದರು.
'ಒಂದು ಸಮಯದಲ್ಲಿ ನನಗೆ ಬೇರೆ ಯಾವುದೇ ಕೆಲಸಗಳು ಸಿಗುತ್ತಿರಲಿಲ್ಲ. ಆಗ ನನಗೆ ಒಂದು ಐಟಮ್ ಸಾಂಗ್ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬೆಂಗಳೂರು ಮೆಟ್ರೋ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಐಟಮ್ ಸಾಂಗ್ ಮಾಡಿದೆ. ಆ ಸಿನಿಮಾ ರಿಲೀಸ್ ಆಗಿಲ್ಲ. ಅದಾದ ಮೇಲೆ ನನಗೆ ಬರೀ ಐಟಮ್ ಸಾಂಗ್ದೇ ಅವಕಾಶಗಳು ಬರುತ್ತಿದ್ದವು. ಒಂದು ಹೋಮ್ಲೀ ಪಾತ್ರ ಮಾಡಿದರೆ ಅದೇ ರೀತಿಯ ಪಾತ್ರಗಳು ಮತ್ತೆ ಮತ್ತೆ ಬರುತ್ತದೆ. ಅದನ್ನು ಬ್ರೇಕ್ ಮಾಡಲು ಕಲಾವಿದರು ಗ್ಲಾಮರಸ್ ಶೂಟ್ ಮಾಡಿಸುತ್ತಾರೆ'. ಎಂದು ಹೇಳಿದರು.
'ಚಿತ್ರರಂಗವನನ್ನು ಹೆಚ್ಚಿನ ಗಂಡಸರು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಅದನ್ನೇ ಸಾಮಾನ್ಯ ಎಂದುಕೊಂಡಿದ್ದ ಎಷ್ಟೋ ಹೆಣ್ಣು ಮಕ್ಕಳು ತಮ್ಮನ್ನು ತಾವೇ ತ್ಯಾಗ ಮಾಡಿಕೊಂಡಿದ್ದಾರೆ. ಹಿಂದೆಯಿಂದ ಬಂದಿರುವ ನಟಿಯರು ಹೀಗೆ ಮಾಡಿಕೊಂಡು ಬಂದಿರುವುದು ಎಂದು ಬ್ರೈನ್ ವಾಶ್ ಮಾಡಿದರೆ, ಕೆಲವರು ಅದನ್ನು ನಂಬಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೇ ಇದ್ದರೆ, ಅವರ ಜೊತೆ ಚೆನ್ನಾಗಿ ಇಲ್ಲದೇ ಇದ್ದರೆ ಅವಕಾಶ ತಪ್ಪುತ್ತದೆ ಎಂದುಕೊಂಡು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಒತ್ತಡ ತೆಗೆದುಕೊಳ್ಳುತ್ತಾರೆ' ಎಂದು ನೀತು ಶೆಟ್ಟಿ ಹೇಳಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications