‘ಹೊಂಬಾಳೆ ಫಿಲ್ಮ್ಸ್’ ವಿರುದ್ಧ ಕಾರ್ತಿಕ್ ಗೌಡ ಮುನಿಸು?
'ಹೊಂಬಾಳೆ ಫಿಲ್ಮ್ಸ್' ಕನ್ನಡ ಸಿನಿಮಾ ರಂಗದ ಹೆಮ್ಮೆಯಾಗಿ ಬೆಳೆದಿದೆ. ಅದರಲ್ಲೂ KGF ಸಿನಿಮಾ ಸರಣಿ ನಂತರ 'ಹೊಂಬಾಳೆ ಫಿಲ್ಮ್ಸ್' ಗತ್ತು ಇಡೀ ಇಂಡಿಯಾಗೆ ಗೊತ್ತಾಗಿದೆ. ಈ ಸಂಸ್ಥೆ ಇದೀಗ ಜಾಗತಿಕ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿದೆ. ಅಲ್ಲದೆ ಸಾವಿರಾರು ಕೋಟಿ ಹೂಡಿಕೆ ಮಾಡಿ ಸಿನಿಮಾಗಳನ್ನ ನಿರ್ಮಾಣ ಮಾಡಲು ಸಜ್ಜಾಗಿದೆ.
ಹೀಗಿದ್ದಾಗ 'ಹೊಂಬಾಳೆ ಫಿಲ್ಮ್ಸ್' ಜೊತೆಗೆ ಗಟ್ಟಿಯಾಗಿ ನಿಂತಿದ್ದವರು ವಿಜಯ್ ಕಿರಗಂದೂರು & ಕಾರ್ತಿಕ್ ಗೌಡ ಅವರು. ಆದ್ರೆ ಕೆಆರ್ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ ಅವರು ಇತ್ತೀಚೆಗೆ ಅಂತರ ಕಾಯ್ದುಕೊಂಡು 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆಯಿಂದ ದೂರ ಇದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಅವರೇ ಈಗ ಉತ್ತರ ನೀಡಿದ್ದಾರೆ.

3 ಸಾವಿರ ಕೋಟಿ ಹೂಡಿಕೆ?
ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ, 3 ಸಾವಿರ ಕೋಟಿ ರೂಪಾಯಿಯ ಹೂಡಿಕೆ ಮಾಡ್ತೀವಿ ಎಂದಿತ್ತು ಹೊಂಬಾಳೆ ಫಿಲ್ಮ್ಸ್. ಆ ನಂತರ ಹೊಂಬಾಳೆ ಗತ್ತು ಮತ್ತಷ್ಟು ಹೆಚ್ಚಾಗಿ ಸ್ಯಾಂಡಲ್ವುಡ್ ಟು ಬಾಲಿವುಡ್ ಸಂಚಲನ ಸೃಷ್ಟಿಯಾಗಿದೆ ಹೀಗಿದ್ದಾಗ 'ಹೊಂಬಾಳೆ ಫಿಲ್ಮ್ಸ್' ಮತ್ತು ಕೆಆರ್ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ ದೂರ ಆಗಿದ್ದಾರೆ, ಇಬ್ಬರ ನಡುವೆ ಮುನಿಸು ಶುರುವಾಗಿದೆ ಎಂಬ ಮಾತು ಓಡಾಡುತ್ತಿತ್ತು. ಆದರೆ ಇದೀಗ ಅದಕ್ಕೆಲ್ಲಾ ಸ್ಪಷ್ಟನೆ ಸಿಕ್ಕಿದ್ದು, ಸ್ವತಃ ಕಾರ್ತಿಕ್ ಗೌಡ ಖಾಸಗಿ ಸಂದರ್ಶನದಲ್ಲಿ ಈ ಕುರಿತು ಮಾತನಾಡಿ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಸಾಲು ಸಾಲು ಹಿಟ್ ಸಿನಿಮಾ!
ಕನ್ನಡ ಸಿನಿಮಾ ರಂಗದ ಶ್ರೀಮಂತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಬಿಗ್ ಬಜೆಟ್ನ ಮೆಗಾ ಸಿನಿಮಾಗಳ ನಿರ್ಮಾಣ ಮಾಡಿದೆ. 'ರಾಜಕುಮಾರ', 'ಕೆಜಿಎಫ್', 'ಕಾಂತಾರ' ಸೇರಿ 'ಸಲಾರ್' ರೀತಿ ದೊಡ್ಡ ದೊಡ್ಡ ಸಿನಿಮಾ ನೀಡಿದೆ. ಈ ಸಮಯದಲ್ಲಿ ಕಾರ್ತಿಕ್ ಗೌಡ & ವಿಜಯ್ ಕಿರಗಂದೂರು ಒಟ್ಟಿಗೆ ಇದ್ದರು. ಆದರೆ ಇತ್ತೀಚೆಗೆ ಕಾರ್ತಿಕ್ ಗೌಡ ಹೊರ ಬಂದು ತಮ್ಮ ಸಂಸ್ಥೆಯ ಮೇಲೆ ಮಾತ್ರ ಗಮನ ಇಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಎಲ್ಲಾ ಮಾತುಗಳಿಗೂ ಉತ್ತರ ನೀಡಿದ್ದಾರೆ ಕಾರ್ತಿಕ್ ಗೌಡ.
ಕಾರ್ತಿಕ್ ಗೌಡ ಹೇಳಿದ್ದು ಏನು?
ಈ ಗಾಳಿ ಮಾತುಗಳನ್ನು ಕೆಆರ್ಜಿ ಕಾರ್ತಿಕ್ ಗೌಡ ಅವರು ನಿರಾಕರಿಸಿದ್ದು, ಸದ್ಯ ಕೆಆರ್ಜಿ ಸ್ಟುಡಿಯೋದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ. ಅಲ್ಲಿ ನಾನು ಬ್ಯುಸಿ ಆಗಿದ್ದೇನೆ, ಅದನ್ನ ಬಿಟ್ಟು ಬೇರೆ ಏನೂ ಇಲ್ಲ. ವಿಜಯ್ ಕಿರಗಂದೂರು ನನ್ನ ಸಹೋದರ, ಈ ರೀತಿ ಸೋಷಿಯಲ್ ಮೀಡಿಯಾ ಕಮೆಂಟ್ಗಳಿಗೆ ನಾನು ಉತ್ತರ ನೀಡಬೇಕಿಲ್ಲ ಎಂದಿದ್ದಾರೆ. ಈ ಮೂಲಕ ಈಗ ಕೂಡ ತಾವು 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications