'ಕಾಂತಾರ ಚಾಪ್ಟರ್-1' ಶೂಟಿಂಗ್ ವೇಳೆ ಕಾಣದ ಶಕ್ತಿಯ ವಿಚಿತ್ರ ಅನುಭವ: ಸಿನಿಮಾಟೋಗ್ರಾಫರ್ ಹೇಳಿದ್ದೇನು?
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 (Kantara Chapter 1) ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಶೂಟಿಂಗ್ ವೇಳೆ ಹಲವು ಅವಘಡಗಳು ನಡೆದಿದ್ದವು ಹಾಗೂ ಕಲಾವಿದರು ಕೂಡ ಸಾವನ್ನಪ್ಪಿದ್ದರು. ಈ ಹಿನ್ನೆಲೆ ರಿಷಬ್ ಸಿನಿಮಾದ ಮೇಲೆ ಹಲವು ವದಂತಿಗಳು ಕೂಡ ಹಬ್ಬಿದ್ದವು. 'ದೈವ ಮುನಿಸಿಕೊಂಡಿದೆ, ದೈವ ನುಡಿದ ಭವಿಷ್ಯ ನಿಜವಾಯ್ತು' ಎಂದೆಲ್ಲ ಸುದ್ದಿ ಹಬ್ಬಿತ್ತು. ಇದೆಲ್ಲವನ್ನೂ ಮೀರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ತನಗೆ ವಿಚಿತ್ರ ಅನುಭವಗಳಾಯಿತು ಎಂದು ಖ್ಯಾತ ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಅವರು ಸಂದರ್ಶನದಲ್ಲಿ ಶಾಕಿಂಗ್ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.
ಕಾಂತಾರ ಸಿನಿಮಾದ ದೃಶ್ಯಗಳನ್ನು ಅಚ್ಚುಕಟ್ಟಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಅರವಿಂದ್ ಕಶ್ಯಪ್ ಅವರು ಇತ್ತೀಚಿಗೆ 'ಟೈಮ್ಸ್ ಆಫ್ ಇಂಡಿಯಾ' ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಕಾಂತಾರ ಚಾಪ್ಟರ್ ಅಧ್ಯಾಯ 1ರ ಸೆಟ್ಗಳಲ್ಲಿ ನಾವು ಯಾವುದೋ ಶಕ್ತಿಯ ಉಪಸ್ಥಿತಿಯಲ್ಲಿದ್ದೇವೆ ಎಂದು ಅರಿತುಕೊಂಡೆ. ಒಂದು ಕಾಲದಲ್ಲಿ ನಾನು ಸಿಟಿ ಹುಡುಗನಂತೆ ಯಾವುದೇ ಆಚರಣೆಗಳು ಮತ್ತು ನಂಬಿಕೆಗಳ ಬಗ್ಗೆ ಅಸಡ್ಡೆ ಹೊಂದಿದ್ದೆ. ಆದರೆ ಕಾಂತಾರ ಒಂದು ಮಹತ್ವದ ತಿರುವು ನೀಡಿತು. ಚಿತ್ರೀಕರಣದ ವೇಳೆ ಅವಾಸ್ತವಿಕ ಅನುಭವಗಳಾಯಿತು. ಅಲ್ಲಿನ ಕೆಲ ಅನುಭವಗಳು ತರ್ಕ ಮತ್ತು ವಿವರಣೆಯನ್ನು ಮೀರಿವೆ ಎಂದು ನಾನು ಅರಿತುಕೊಂಡೆ' ಎಂದಿದ್ದಾರೆ.

'ಪದೇ ಪದೇ ಕಾಲಿಗೆ ಪೆಟ್ಟು!'
'ಸೆಟ್ನಲ್ಲಿ ಯಾವಾಗಲೂ ಒಂದು ಸ್ಪರ್ಶಿಸಬಹುದಾದ ಶಕ್ತಿ ಇರುತ್ತಿತ್ತು. ಪ್ರತಿಯೊಂದು ಚಿತ್ರೀಕರಣವು ಕೂಡ ಪ್ರಾರ್ಥನೆ ಮತ್ತು ಆಚರಣೆಗಳೊಂದಿಗೆ ಪ್ರಾರಂಭವಾಗುತ್ತಿತ್ತು. ಆರಂಭದಲ್ಲಿ ನಾನು ಅವುಗಳ ಪ್ರಾಮುಖ್ಯತೆಯನ್ನ ಗ್ರಹಿಸಲಿಲ್ಲ. ನಂತರ ಅಸಾಮಾನ್ಯ ಎನ್ನುವಂತಹ ಅನುಭವಗಳು ಎದುರಾದವು. ಒಂದು ಜಾಗದಲ್ಲಿ ಚಿತ್ರೀಕರಣ ಮಾಡುವಾಗ, ನನ್ನ ಬಲಗಾಲಿಗೆ ಗಾಯವಾಯಿತು. ಆದರೆ ನಾನು ಅದನ್ನು ನಿರ್ಲಕ್ಷಿಸಿದೆ. ನಂತರ ನಾವು ಅಲ್ಲಿ ಚಿತ್ರೀಕರಣ ಮಾಡುವಾಗಲೆಲ್ಲ ಅದೇ ಕಾಲಿಗೆ ಪೆಟ್ಟಾಗುತ್ತಿತ್ತು' ಎಂದು ವಿವರಿಸಿದ್ದಾರೆ ಕಶ್ಯಪ್.
'ಈ ಬಗ್ಗೆ ನಾವು ಅಲ್ಲಿಯವರನ್ನು ವಿಚಾರಿಸಿದಾಗ ಆ ಸ್ಥಳವು ಪವಿತ್ರ ನಾಗ ಸ್ಥಾನ ಎಂದು ಹೇಳಿದರು. ಆ ಶಕ್ತಿಯ ಹರಿವು ನನ್ನನ್ನು ಅಡ್ಡಿಪಡಿಸುತ್ತಿದೆ. ನಾನು ಅಲ್ಲಿನ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದರಿಂದ ಅದರ ಪರಿಣಾಮವನ್ನು ಅನುಭವಿಸುತ್ತಿದ್ದೇನೆ ಎಂದೂ ಖಚಿತವಾಗಿ ಹೇಳಿದರು. ನಾಗ ದೇವತೆಗೆ ನಾವು ಯಾವುದೇ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿ, ಪ್ರಾರ್ಥನೆ ಸಲ್ಲಿಸುವಂತೆ ಅವರು ಸಲಹೆ ನೀಡಿದ್ರು. ಅದನ್ನು ನಾವು ಪಾಲಿಸಿದ ಮೇಲೆ ಶೂಟಿಂಗ್ ಸರಾಗವಾಗಿ ಮುಂದುವರಿಯಿತು' ಎಂದಿದ್ದಾರೆ.
'ಲೈಟ್ ಹೊಡೆದು ಹೋಗ್ತಿತ್ತು'
'ಕೆಲವೊಮ್ಮೆ ಲೈಟ್ಗಳು ಇದ್ದಕ್ಕಿದ್ದಂತೆ ಒಡೆದುಹೋಗುತ್ತಿದ್ದವು. ನಮ್ಮ ಶೂಟಿಂಗ್ ಪರಿಕರಿಗಳು ಕೆಲಸ ಮಾಡುತ್ತಿರಲಿಲ್ಲ. ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲವೂ ಸರಿಯಾಗುತ್ತಿತ್ತು. ಕಾಣದ ಶಕ್ತಿಗಳು ನಮಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿವೆ ಎಂದು ಆಗ ಭಾಸವಾಯಿತು. ಹಾಗಾಗಿ ಶೂಟಿಂಗ್ ವೇಳೆ ನಾವು ತುಂಬಾ ಜಾಗರೂಕರಾಗಿದ್ದೆವು. ನಾಸ್ತಿಕನಾಗಿದ್ದ ನಾನು ಈ ಸಿನಿಮಾ ಸೆಟ್ನಲ್ಲಿ ಕೆಲ ನಂಬಿಕೆಗಳನ್ನು ಕಣ್ಣಾರೆ ಕಂಡೆ. ಮಾನವ ಸಂಪೂರ್ಣವಾಗಿ ಗ್ರಹಿಸಲಾರದ ಶಕ್ತಿಗಳಿವೆ ಎಂದು ನನಗೆ ಈಗ ತಿಳಿದಿದೆ. ಶೂಟಿಂಗ್ ವೇಳೆ ದೈವವೇ ನಮ್ಮನ್ನು ಕಾಪಾಡಿತು' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಛಾಯಾಗ್ರಾಹಕ ಅರವಿಂದ್ ಕಶ್ಯಪ್.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications