Varun Aradya: ಬೃಂದಾವನ ಧಾರಾವಾಹಿ ನಿಲ್ಲಿಸಲು ಯಾರು ಕಾರಣ? ತೆರೆ ಹಿಂದೆ ಏನಾಯ್ತು?
ಕನ್ನಡ ಕಿರುತೆರೆಗೆ ಹಲವು ಸೂಪರ್ ಹಿಟ್ ಸೀರಿಯಲ್ಗಳನ್ನ ನೀಡಿರುವ ನಿರ್ದೇಶಕ ರಾಮ್ಜಿ ತಮ್ಮ ಬೃಂದಾವನ ಧಾರಾವಾಹಿಯನ್ನು ಅತಿ ಬೇಗ ಮುಗಿಸಿದ್ದಾರೆ.
ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಹಾಗೂ ರಾಮಾಚಾರಿ ಸೇರಿದಂತೆ ಇತರ ಹಿಟ್ ಮೆಗಾ ಸೀರಿಯಲ್ಗಳನ್ನು ನೀಡಿರುವ ರಾಮ್ಜಿ ಧಾರಾವಾಹಿಗಳ ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ಅತಿಯಾದ ನಿರೀಕ್ಷೆ ಇರುತ್ತದೆ. ಅದೇ ನಿರೀಕ್ಷೆ ಬೃಂದಾವನ ಧಾರಾವಾಹಿ ಮೇಲೂ ಇತ್ತು. ಆದರೆ ಏಕಾಏಕಿ ಸೀರಿಯಲ್ ಅಂತ್ಯಗೊಂಡಿದೆ.

ಕಳೆದ ವರ್ಷ ಅಕ್ಟೋಬರ್ 23, 2023 ರಂದು ಪ್ರಸಾರ ಆರಂಭಿಸಿದ ಬೃಂದಾವನ ಧಾರಾವಾಹಿ ಮೇ 24, 2024 ರಂದು ಕೊನೆ ಸಂಚಿಕೆ ಪ್ರಸಾರವಾಯಿತು. ಒಟ್ಟು 167 ಸಂಚಿಕೆಗಳಷ್ಟೇ ಪ್ರಸಾರ ಕಂಡಿದೆ.
ದೊಡ್ಡ ತಾರಾಗಣ, ಹಲವು ಕಲಾವಿದರು, ಯಾವುದೇ ನೆಗೆಟಿವಿಟಿ ಇಲ್ಲದ ದೊಡ್ಡ ಕುಟುಂಬದ ಧಾರಾವಾಹಿ ಇಷ್ಟು ಬೇಗೆ ಮುಗಿದಿದ್ಯಾಕೆ? ಎನ್ನುವ ಬಗ್ಗೆ ನಿರ್ದೇಶಕ ರಾಮ್ಜಿ ಮಾತನಾಡಿದ್ದಾರೆ. ಅದರಲ್ಲೂ ಬೃಂದಾವನ ಧಾರಾವಾಹಿ ನಾಯಕ ವರುಣ್ ಆರಾಧ್ಯ ಕಾರಣದಿಂದಲೇ ಧಾರಾವಾಹಿ ಬೇಗ ಮುಗಿಸಲಾಗಿದೆ ಎನ್ನುವ ಆರೋಪವಿದ್ದು, ರಾಮ್ಜಿ ಈ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.
ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿರುವ ನಿರ್ದೇಶಕ ರಾಮ್ಜಿ , 'ಬೃಂದಾವನ ಧಾರಾವಾಹಿಯನ್ನು ಕೆಲವು ಟೆಕ್ನಿಕಲ್ ವಿಚಾರಗಳಿಂದ ಅಂತ್ಯಗೊಳಿಸಬೇಕಾಗಿ ಬಂತು. ಅದಿನ್ನು ಸಾವಿರ ಸಂಚಿಕೆಯ ಕಥೆ ಇತ್ತು. ಅದು ಬರೆದಾಗಲೇ ಸಾವಿರ ಸಂಚಿಕೆಯ ಕಥೆಯಾಗಿಯೇ ಬರೆದಿದ್ದು. ಅಷ್ಟು ಅದ್ಭುತವಾದ ಕಥೆ ಅದು. ನಾನು ಬರೆದಿರುವ ಟಾಪ್ ಐದು ಕಥೆಗಳಲ್ಲಿ ಅದು ಕೂಡ ಒಂದು. ಆದರೆ ಅನಿವಾರ್ಯ ಕಾರಣಗಳಿಂದ ಆ ಕಥೆ ನಿಲ್ಲಿಸಬೇಕಾಗಿ ಬಂತು.

ಕಥೆ ಇಲ್ಲದೇ ನಿಲ್ಲಿಸಿಲ್ಲ. ನಿಲ್ಲಿಸುವಾಗಲೂ ನನಗೆ ಬೇಸರವಾಯ್ತು. ನೂರು ಸಂಚಿಕೆ ಇದ್ದಾಗಲೇ ನಿಲ್ಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಬೇರೆ ಶೋ ಇಲ್ಲದ ಕಾರಣ 167 ಸಂಚಿಕೆಗಳು ಪ್ರಸಾರಗೊಂಡವು ಎಂದು ಸ್ಪಷ್ಟನೆ ನೀಡಿದ್ದಾರೆ.
ಧಾರಾವಾಹಿಯಲ್ಲಿ ವರುಣ್ ಆರಾಧ್ಯ ಆಯ್ಕೆ ಬಗ್ಗೆ ಮಾತನಾಡಿದ ಅವರು, ನಾನು ಕಮೆಂಟ್ಗಳನ್ನು ನೋಡಿದೆ. ಹೀರೋ ಚೇಂಜ್ ಆಗಿ ಈಗಿರುವವನಿರುವುದಕ್ಕೆ ಧಾರಾವಾಹಿ ಹೀಗಾಯ್ತು ಅಂತ. ಆದರೆ ಹಾಗೆನಿಲ್ಲ. ಫಸ್ಟ್ ಇದ್ದ ವಿಶ್ವ ತುಂಬಾ ಒಳ್ಳೆ ಹುಡುಗ. ಆದರೆ ಹುಷಾರಿಲ್ಲದೇ ಸಣ್ಣ ಆದ. ಹಗಲು ರಾತ್ರಿ ಶೂಟಿಂಗ್ ಇತ್ತು. ಹೀಗಾಗಿ ಮಧ್ಯ ರಾತ್ರಿ ಹುಡುಕುವಾಗ ವರುಣ್ ಸಿಕ್ಕ ಅವನನ್ನೇ ಮುಂದುವರಿಸಲಾಯ್ತು.
ಆತನ ವೈಯಕ್ತಿಕ ಬದುಕು ಏನೇ ಆಗಿದ್ದರೂ ನಾನು ಮೂಗು ತೂರಿಸಲ್ಲ. ತುಂಬಾ ಜನ ಕೇಳಿದರು ಯಾಕೆ ಹಾಕಿದ್ರಿ ಅಂತಾ. ನಾನು ಯಾರನ್ನು ದೂರಲ್ಲ. ಧಾರಾವಾಹಿ ನಿಲ್ಲಲು ಅದು ಕಾರಣ ಅಲ್ಲ. ಜನ ಹೇಗೆ ತೆಗೆದುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲ' ಎಂದಿದ್ದಾರೆ.
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications