Get Updates
Get notified of breaking news, exclusive insights, and must-see stories!

ದರ್ಶನ್ Vs ಸುದೀಪ್ ಫ್ಯಾನ್ಸ್‌ ವಾರ್: ವಿಜಯಲಕ್ಷ್ಮಿ - ಸುದೀಪ್ ಹೇಳಿಕೆ, ಧನ್ವೀರ್ ಗೌಡ ಪೋಸ್ಟ್‌!

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್‌ವಾರ್ ಮತ್ತೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್‌ವಾರ್ ಸ್ವಲ್ಪ ಕಡಿಮೆಯಾಗಿತ್ತು. ಇದೀಗ ನಟ ಕಿಚ್ಚ ಸುದೀಪ್ ಅವರ ಹೇಳಿಕೆ, ಇದರ ಬೆನ್ನಲ್ಲೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಹಾಗೂ ದರ್ಶನ್ ಅವರ ಆಪ್ತರಾದ ಧನ್ವೀರ್ ಗೌಡ ಅವರ ಪೋಸ್ಟ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ವಾರ್‌ಗೆ ಶುರುವಾಗಿದೆ. ನಟ ದರ್ಶನ್ ಅವರ ಆಪ್ತ ಧನ್ವೀರ್ ಗೌಡ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ ತುಂಬಾ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಕಮೆಂಟ್ ಸುರಿಮಳೆಯನ್ನೇ ಸುರಿಸಿದ್ದಾರೆ. ಇಷ್ಟುಕ್ಕೂ ಏನಿದು ಬೆಳವಣಿಗೆ ಎನ್ನುವ ವಿವರ ನೋಡೋಣ.

ಕಳೆದ ಒಂದು ದಶಕದಿಂದಲೂ ಕನ್ನಡ ಸಿನಿಮಾರಂಗದಲ್ಲಿ ಫ್ಯಾನ್ಸ್‌ವಾರ್ ಜೋರಾಗಿದೆ. ಅದರಲ್ಲೂ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಡಿ ಬಾಸ್‌ ದರ್ಶನ್ ಅವರ ಅಭಿಮಾನಿಗಳ ನಡುವೆ ಫ್ಯಾನ್ಸ್‌ ವಾರ್ ಮುಂದುವರಿದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹಾಗೂ ಇನ್ನುಳಿದ ನಟರ ಫ್ಯಾನ್ಸ್‌ ನಡುವೆಯೂ ಸ್ಟಾರ್‌ವಾರ್ ನಡೆದಿರುವುದು ಇದೆ.

kannada-film-industry-fan-war-sudeep-fans-vs-darshan-vijayalakshmi-dhanveer-gowda-post

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇದೊಂದು ಪಿಡುಗಾಗಿ ಬದಲಾಗಿದೆ. ನಟ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ನಮ್ಮದು ನಮ್ಮ ನಮ್ಮ ನಡುವೆ ಯಾಕೆ ಸ್ಟಾರ್‌ವಾರ್ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ಎಲ್ಲಾ ಸಿನಿಮಾ ಅಭಿಮಾನಿಗಳಿಗೆ ತಿಳಿ ಹೇಳಿದ್ದರು. ಆದರೆ ಇಂದು ಮತ್ತೆ ಚಿತ್ರರಂಗದಲ್ಲಿ ಸ್ಟಾರ್‌ ವಾರ್ ಪ್ರಾರಂಭವಾಗಿದೆ.

ಇದೀಗ ನಡೆಯುತ್ತಿರುವ ಫ್ಯಾನ್ಸ್‌ ವಾರ್ ಮೊದಲು ಪ್ರಾರಂಭವಾಗಿದ್ದು ನಟ ಕಿಚ್ಚ ಸುದೀಪ್ ಅವರು ಸಿನಿಮಾ ಪ್ರಮೋಷನ್‌ ಟೈಮ್‌ನಲ್ಲಿ ಹೇಳಿದ ಮಾತುಗಳಿಂದ ಈಚೆಗೆ ಕಿಚ್ಚ ಸುದೀಪ್ ಅವರು, ಮಾರ್ಕ್ ಸಿನಿಮಾದ ಪ್ರಚಾರದ ಭಾಗವಾಗಿ "ಕೆಲವೊಂದು ಮಾತು ಹುಬ್ಬಳ್ಳಿಗೆ ಬಂದು ಮಾತನಾಡಿದರೆ, ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ. ಡಿಸೆಂಬರ್‌ 25ಕ್ಕೆ ಥಿಯೇಟರ್‌ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಿದೆ. ಈ ವೇದಿಕೆ ಮೇಲೆ ಹೇಳ್ತೀನಿ, ಯುದ್ಧಕ್ಕೆ ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ" ಎಂದು ಹೇಳಿದ್ದರು.

ವಿಜಯಲಕ್ಷ್ಮಿ ತಿರುಗೇಟು

ಇದಕ್ಕೆ ನಟ ದರ್ಶನ್ ಅವರ ಪತ್ನಿ ಪರೋಕ್ಷ ಟಾಂಗ್ ಕೊಟ್ಟಿದ್ದರು. ದರ್ಶನ್ ಜೈಲಿನಲ್ಲಿರುವಾಗಲೇ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ವೇದಿಕೆಗಳ ಮೇಲೆ & ಸೋಷಿಯಲ್ ಮೀಡಿಯಾಗಳಲ್ಲೂ ಮಾತನಾಡುತ್ತಿದ್ದಾರೆ. ಆದರೆ ಇವರೆಲ್ಲರೂ ದರ್ಶನ್‌ ಅವರು ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತನೂ ಗೊತ್ತಾಗಲ್ಲ ಎಂದಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

Dhanveer boss insta storyOnly one lion 🔥#dboss#dhanveerapic.twitter.com/G05vjGciKy— ನಾನು ᴅʜᴀɴᴠᴇᴇʀᴀ ꜰᴀɴ ✪ (@NKurubagouda) December 21, 2025

ಈ ಎಲ್ಲಾ ಫ್ಯಾನ್ಸ್‌ವಾರ್‌ನ ನಡುವೆ ನಟ ದರ್ಶನ್ ಅವರ ಆಪ್ತ ಧನ್ವೀರ್ ಗೌಡ ಅವರ ಒಂದೇ ಒಂದು ಪೋಸ್ಟ್‌ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಧನ್ವೀರ್ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿಕೊಂಡಿದ್ದರು. ಅದರಲ್ಲಿ ನಟ ದರ್ಶನ್ ಅವರೊಂದಿಗಿನ ಫೋಟೋಗೆ ತಮಿಳಿನ ಒಂದು ಡೈಲಾಗ್ ಶೇರ್ ಮಾಡಿಕೊಂಡಿದ್ದರು. "ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ. ಆದರೆ ಸಿಂಹನೇ ರಾಜ" ಎಂದು ತಮಿಳು ಸಿನಿಮಾ ಡೈಲಾಗ್‌ವೊಂದನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದರು. ಇದೀಗ ಈ ಪೋಸ್ಟ್‌ ನಟ ಕಿಚ್ಚ ಸುದೀಪ್ ಅವರ ಫ್ಯಾನ್ಸ್‌ಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಧನ್ವೀರ್‌ ಗೌಡ ಅವರು ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ತುಂಬಾ ನಟ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಕಮೆಂಟ್‌ ಸುರಿಮಳೆ ಸುರಿಸಿದ್ದಾರೆ. ನಮ್ಮ ಹತ್ತಿರ ಬೇಡ ಎನ್ನುವ ಕಮೆಂಟ್‌ಗಳನ್ನು ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+