ಅಣ್ಣಾವ್ರ ಬಗ್ಗೆ ಮಾತಾಡೋದು, ಆಕಾಶ ನೋಡಿ ಉಗಿಯೋದು ಒಂದೇ: ಆರ್ಜಿವಿಗೆ ನಟ ಗಣೇಶ್ ಖಡಕ್ ತಿರುಗೇಟು
ಬೆಂಗಳೂರು, ಜೂನ್ 09: ಕನ್ನಡ ನಾಡು, ನುಡಿಗೆ, ಸಿನಿಮಾ ರಂಗಕ್ಕೆ ವರನಟ ಡಾ.ರಾಜಕುಮಾರ್ ಅವರ ಕೊಡುಗೆ ಅಪಾರ, ಅಮೋಘ. ಅಂತವರ ಬಗ್ಗೆ ವಿವಾದಿತ ನಿರ್ದೇಶಕ ಎಂದೇ ಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಇತ್ತೀಚೆಗೆ 'ಕನ್ನಡದಿಂದ ತಮಿಳು ಹುಟ್ಟಿದ್ದು' ಎಂದು ನಟ ಕಮಲ್ ಹಾಸನ್ ನಾಲಿಗೆ ಹರಿಬಿಟ್ಟಿದ್ದರು. ಇದೀಗ ರಾಮ್ ಗೋಪಾಲ್ ವರ್ಮಾ ಹೇಳಿಕೆಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಖಡಕ್ ತಿರುಗೇಟು ನೀಡಿದ್ದಾರೆ. ಅವರ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪರಭಾಷಿಗರ ಕಲಾವಿದರು, ನಟ ನಿರ್ದೇಶಕರುಗಳು ಕರ್ನಾಟಕ ಮತ್ತು ಕನ್ನಡದ ಮೇಲೆ ಅದ್ಯಾಕೆ ಇಷ್ಟು ಕಡೆಗಣನೆ, ಅಗೌರವದ ಭಾವನೆ ಹೊಂದಿದ್ದು, ಬೇಕಾಬಿಟ್ಟಿಯಾಗಿ ಹಿಡಿತವಿಲ್ಲದ ಮಾತನಾಡುತ್ತಿದ್ದಾರೆ. ಪದೇ ಪದೇ ಕನ್ನಡಿಗರನ್ನು, ಭಾಷೆ, ನಮ್ಮ ಕಲಾವಿದರನ್ನು ಕೆಣಕುತ್ತಲೇ ಬರುತ್ತಿದ್ದಾರೆ. 'ನಟ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜ್ಕುಮಾರ್ ಫೇಮಸ್ ಆದ್ರು' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದರು.

ಆಕಾಶ ನೋಡಿ ಉಗಿದರೆ ಏನಾಗುತ್ತೆ...
ಇದಕ್ಕೆ ತಿರುಗೇಟು ನೀಡಿರುವ ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅವರು, ''ರಾಮ್ ಗೋಲಾಲ್ ವರ್ಮಾ ಹೇಳಿಕೆಗೆ ನಾವು ಹೇಳಿಕೆ ಕೊಡುವುದೇ ತಪ್ಪು. ಕನ್ನಡ ಅಂದ್ರೆ ಡಾ.ರಾಜಕುಮಾರ್, ಡಾ.ರಾಜಕುಮಾರ್ ಅಂದ್ರನೇ ಕನ್ನಡ. ಅಣ್ಣಾವ್ರ ಬಗ್ಗೆ ಮಾತನಾಡುವುದೆಂದರೆ ಅದು ಆಕಾಶ ನೋಡಿ ಉಗಿದಂತೆ, ಹಾಗೆ ಉಗಿದರೆ ಮತ್ತೆ ಅದು ನಮ್ಮ ಮುಖಕ್ಕೆ ಬೀಳೋದು. ಅದು ಆರ್ಜಿವಿಯೇ ಆಗಲಿ, ಬೇರೆ ಯಾರೇ ಆಗಿರಲಿ'' ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ನಾಲಿಗೆ ಹರಿಬಿಟ್ಟ ನಿರ್ದೇಶಕನಿಗೆ ನಟ ಗಣೇಶ್ ಅವರು ತಕ್ಕ ತಿರುಗೇಟು ಕೊಟ್ಟಿದ್ದಾರೆ.
ಆರ್ಜಿವಿ ಹೇಳಿಕೆಗೆ ವ್ಯಾಪಕ ಆಕ್ರೋಶ
ಗಣೇಶ್ ಅವರ 'ಪಿನಾಕ' ಸಿನಿಮಾ ದೊಡ್ಡ ಸೆಟ್ನಲ್ಲಿ ನೆಲಮಂಗಲ ಬಳಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಕುರಿತು ಅವರು ಮಾತನಾಡುವಾಗ ಆರ್ಜಿವಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇನ್ನೂ ಆರ್ಜಿವಿ ಹೇಳಿಕೆ ಕರ್ನಾಟಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮಕಾಡೆ ಮಲಗಿದ ಕಮಲ್ ಹಾಸನ ಸಿನ್ಮಾ
ಕಮಲ್ ಹಾಸನ ಸಹ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೇ, ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ತಾನು ಕ್ಷಮೆ ಕೇಳುವುದಿಲ್ಲ ಎಂದು ವಿವಾದ ಸೃಷ್ಟಿಸಿಕೊಂಡಿದ್ದರು. ತನ್ನ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಬೇಕು, ಅದಕ್ಕಾಗಿ ಭದ್ರತೆ ಒದಗಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೂಕೋರ್ಟ್ ಸಹ ಛೀಮಾರಿ ಹಾಕಿತ್ತು. ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು. ನಂತರ ಬಿಡುಗಡೆಯಾದ ಥಗ್ ಲೈಫ್ ಮಕಾಡೆ ಮಲಗಿತು. ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದೆ ಒಳ್ಳೆದಾಯಿತು ಎಂದು ತಮಿಳು ಕಮಲ್ ಫ್ಯಾನ್ಸ್ ಸಿನಿಮಾ ನೋಡಿ ಹೇಳಿದ್ದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications