ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ ಕೊಡುತ್ತಿದ್ದ ವರನಟ ಡಾಕ್ಟರ್ ರಾಜಕುಮಾರ್
ಬೆಂಗಳೂರು ಏಪ್ರಿಲ್ 26: ಕರ್ನಾಟಕದಲ್ಲಿಂದು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ವೇಳೆ ವರನಟ ಡಾಕ್ಟರ್ ರಾಜಕುಮಾರ್ ಕುಟುಂಬಸ್ಥರೆಲ್ಲರು ಮತ ಕೇಂದ್ರಕ್ಕೆ ಬಂದು ಮತಚಲಾಯಿಸಿದರು. ಜೊತೆಗೆ ಮತದಾನಕ್ಕೆ ಅರ್ಹರಾಗಿರುವವರೆಲ್ಲರೂ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಡಾಕ್ಟರ್ ರಾಜಕುಮಾರ್ ಅವರು ಮತದಾನದ ವಿಚಾರದಲ್ಲಿ ಎಷ್ಟು ಶಿಸ್ತಿನಿಂದ ಇದ್ದರು ಎನ್ನುವ ವಿಚಾರ ಕೂಡ ತಿಳಿದು ಬಂದಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸದಾಶಿವ ನಗರದಲ್ಲಿ ಡಾ. ರಾಜಕುಮಾರ್ ಕುಟುಂಬಸ್ಥರು ಮತ ಹಾಕಿದರು. ಈ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಕುಟುಂಬಸ್ಥರು ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಇವರೊಂದಿಗೆ ರಾಘವೇಂದ್ರ ರಾಜ್ಕುಮಾರ್ ಕೂಡ ಮತ ಚಲಾಯಿಸಿದರು.

ಮತದಾರರಿಗೆ ಮನವಿ ಮಾಡಿದ ರಾಘವೇಂದ್ರ ರಾಜಕುಮಾರ್
ಮತಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, 'ಎಲ್ಲರೂ ಕೂಡ ಮತ ಕೇಂದ್ರಗಳಿಗೆ ಬಂದು ಮತ ಚಲಾಯಿಸಬೇಕು. ದೇಶಕ್ಕೋಸ್ಕರ್ ಅರ್ಧಗಂಟೆ ಸ್ಪೆಂಡ್ ಮಾಡಿ. ಮತ ಹಾಕುವುದು ನಿಮ್ಮ ಕರ್ತವ್ಯ. ಹೊರಗಡೆ ಹೋಗಿ ಲೈನ್ ಅಲ್ಲಿ ನಿಂತುಕೊಂಡು ಮತ ಚಲಾವಣೆ ಮಾಡಿ' ಅಂತ ಸಲಹೆ ನೀಡಿದರು.

ಮತದಾನ ಮಾಡುವಂತೆ ಮನೆಯವರಿಗೆ ಆದೇಶ
ಇದೇ ವೇಳೆ ರಾಘವೇಂದ್ರ ರಾಜ್ಕುಮಾರ್ ಅವರು ತಂದೆಯನ್ನು ನೆನಪಿಸಿಕೊಂಡರು. ''ನಮ್ಮ ತಂದೆ ತಪ್ಪದೆ ವೋಟ್ ಮಾಡ್ತಾಯಿದ್ದರು. ಅವರಲ್ಲದೇ ಮನೆಯವರಿಗೆಲ್ಲರಿಗೂ ವೋಟ್ ಮಾಡಲು ತಿಳಿಸುತ್ತಿದ್ದರು. 'ಪಾರ್ವತಿಗೆ ಹೇಳು ರಾಘು ಮನೆಯಿಂದ ಹೊರ ಹೋಗಿ ಮತ ಹಾಕಿ ಬಾ ಅಂತ' ಅಂತ ತಂದೆ ಹೇಳ್ತಾಯಿದ್ದರು'' ಎಂದು ನಟಸಾರ್ವಭೌಮರನ್ನ ನೆನೆದರು.

ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ
'ಅಲ್ಲದೇ ನಮ್ಮ ತಂದೆ ಮತದಾನಕ್ಕಾಗಿ ಮನೆ ಕೆಲಸದವರಿಗೆ ರಜೆ ಕೊಡುತ್ತಿದ್ದರು. ಎಲ್ಲರಿಗೂ ರಜೆ ಕೊಟ್ಟು ಕಳಿಹಿಸು ಮತ ಹಾಕಲಿ ಅಂತ ನನಗೆ ಹೇಳುತ್ತಿದ್ದರು. ಅಷ್ಟೊಂದು ತಂದೆ ಅವರು ಮತದಾನದ ಬಗ್ಗೆ ಗೌರವ ಹೊಂದಿದವರು' ಎಂದು ರಾಘವೇಂದ್ರ ರಾಜ್ಕುಮಾರ್ ಮತಚಲಾಯಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
-
'ಅವತ್ತು ಬ್ರೇಕಪ್ ಆಗಿದ್ದೇ ಒಳ್ಳೆಯದಾಯಿತು': ರಶ್ಮಿಕಾ ತಾಯಿಯದ್ದೆ ಎನ್ನಲಾದ ಸ್ಫೋಟಕ ಆಡಿಯೋ ವೈರಲ್ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ವಿಶೇಷ: ಬೆಟ್ಟದ ಹೂವಿನಿಂದ ಗಂಧದ ಗುಡಿಯವರೆಗೆ, ಅಪ್ಪು ಎಂಬ ಅಳಿಸಲಾಗದ ನಗು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ











Click it and Unblock the Notifications