ನಗಿಸೋ ನಟಿ ನಯನಾ ಜೀವನದಲ್ಲಿ ಅಪ್ಪನೇ ವಿಲನ್ ಯಾಕೆ? ಬಾಲ್ಯದಲ್ಲಿ ಅಂತಹದ್ದೇನಾಯ್ತು..?
ಇತ್ತೀಚಿಗೆ ನಟಿ ನಯನಾ ತಮ್ಮ ಜೀವನದ ಪ್ರತಿಯೊಂದು ಕ್ಷಣದ ಬಗ್ಗೆ ತಾವು ಬದುಕಿನಲ್ಲಿ ಕಂಡ ಏರಿಳಿತಗಳು..ನೋವು ನಲಿವುಗಳ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ನ ಸಂದರ್ಶನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಶನಲ್ಲಿ ನಟಿ ನಯನಾ ತಮ್ಮ ತಂದೆ ಬಗ್ಗೆ ಮಾತನಾಡಿದ್ದು, ಅವರನ್ನು ನೆನಪಿಸಿಕೊಂಡರೆ ಹಿಟ್ಲರ್ ನೆನಪಿಗೆ ಬರುತ್ತಾರೆ ಎಂದಿದ್ದಾರೆ.
ನಿಮ್ಮ ಜೀವನದಲ್ಲಿ ವಿಲನ್ಗಳು ಯಾರಿಲ್ವಾ ಎನ್ನುವ ರಾಜೇಶ್ ಗೌಡ ಅವರ ಪ್ರಶ್ನೆಗೆ ನಟಿ ನಯನಾ ನೇರವಾಗಿ 'ನಮ್ಮ ಡ್ಯಾಡಿ' ಎಂದು ಉತ್ತರಿಸಿದ್ದಾರೆ. ನಾನು ನನ್ನ ತಮ್ಮ ಇಬ್ಬರು ಮಕ್ಕಳು. ಆದರೆ ನಾವು ಜಾಯಿಂಟ್ ಫ್ಯಾಮಿಲಿ. ನಮ್ಮ ಅಪ್ಪನ ಜೊತೆ ನಾವು ಒಂದು ಒಳ್ಳೆ ದಿನಗಳು ಅಂತಾ ಕಳೆದಿಲ್ಲ. ಶಾಲೆಯಲ್ಲಿ ನಾನು ಮಾಡದ ತಪ್ಪಿಗೆ ತುಂಬಾ ಜೋರಾಗಿ ಒದೆ ತಿಂದಿದ್ದೇನೆ. ಬಾಲ್ಯದ ಬಗ್ಗೆ ತುಂಬಾ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನನ್ನ ತಮ್ಮ ಇವತ್ತಿಗೂ ಫೋನ್ ಮಾಡಿದ್ರೆ ಇದೇ ವಿಷಯಗಳನ್ನು ಮಾತನಾಡುತ್ತೇವೆ. ತುಂಬಾ ಮಿಸ್ ಮಾಡಿಕೊಳ್ತೇನೆ ಕಣೋ ನಾನು ನಿನ್ನ ಅಂತಾ ನಾನು ಹೇಳ್ತೀನಿ. ಅವನು ಹೇಳ್ತಾನೆ. ನಮ್ಮ ಇಬ್ಬರಿಗೂ ಇವತ್ತಿಗೂ ಆ ಕೊರಗಿದೆ. ಎಲ್ಲಾರೂ ಅಪ್ಪ- ಅಮ್ಮನು ಅವರು ಮಕ್ಕಳನ್ನು ಎಷ್ಟು ಚೆನ್ನಾಗಿ ಮಾತನಾಡಿಸುತ್ತಾರೆ. ಎಷ್ಟು ಚೆನ್ನಾಗಿ ಹುರಿದುಂಬಿಸುತ್ತಾರೆ. ನಮಗೆ ಯಾಕೆ ಈ ತರ ಎಂದು ನಯನಾ ಕಣ್ಣೀರಿಟ್ಟಿದ್ದಾರೆ.
ಆಮೇಲೆ ನಂಗೆ ಎಲ್ಲಾರೂ ಹೇಳುತ್ತಿದ್ದರು. ನಿನ್ನ ತಮ್ಮಾ ಎಷ್ಟು ಚೆನ್ನಾಗಿ ಓದುತ್ತಾನೆ. ನೀನು ಓದಲ್ಲ..ನೀನು ಬರೆಯಲ್ಲಾ..ಅಂತೆಲ್ಲಾ ಅನ್ನೋರು. ಆದರೆ ನಂಗೆ ಖುಷಿ ಆಗೋದು. ನಾನು ಮನೆ ಬಿಟ್ಟು ಹೋಗಬೇಕಾದರೆ, ನನ್ನ ತಮ್ಮ ನನ್ನನ್ನು ಕೇಳಿದ್ದು ಒಂದೇ ಪ್ರಶ್ನೆ ಅವರ ಮನೆಯಲ್ಲಿ ಸುಖವಾಗಿ ಇರುತ್ತೀಯಾ..? ಚೆನ್ನಾಗಿ ನೋಡಿಕೊಳ್ಳುತ್ತಾರಾ ನಿನ್ನನ್ನ..? ಅವನು ಅಪ್ಪನ ತರ ಅಲ್ವಾ ಎಂದು ಕೇಳಿದ್ದ.. ಆ ಸಮಯದಲ್ಲಿ ನನಗೆ ಏನು ಉತ್ತರ ಕೊಡಬೇಕೋ ಗೊತ್ತಾಗಿಲ್ಲ ಎಂದು ನಟಿ ನಯನಾ ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ನಮ್ಮನೆಲ್ಲಾ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ನಟಿ ನಯನಾ ತಮ್ಮ ಮನಸ್ಸಿನಲ್ಲಿ ಇಷ್ಟೆಲ್ಲಾ ನೋವಿಟ್ಟುಕೊಂಡಿದ್ದಾರಾ ಅಂತಾ ನಿಮಗೆ ಈಗ ಅನಿಸುವುದು ಸಹಜ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ನಯನಾ ಅವರ ಪಟಪಟ ಮಾತು..ನಕ್ಕು ನಗಿಸುವ ಪಂಚ್ ಡೈಲಾಗ್ಗಳು, ನಗು ಮುಖ..ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುತ್ತಾರೆ. ಆದರೆ ಅವರ ಜೀವನದಲ್ಲಿಯೂ ಮರೆಯಲಾಗದ ಕಹಿ ಘಟನೆಗಳು ನಡೆದಿದ್ದು, ನಯನಾ ಈ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications