ನಗಿಸೋ ನಟಿ ನಯನಾ ಜೀವನದಲ್ಲಿ ಅಪ್ಪನೇ ವಿಲನ್ ಯಾಕೆ? ಬಾಲ್ಯದಲ್ಲಿ ಅಂತಹದ್ದೇನಾಯ್ತು..?
ಇತ್ತೀಚಿಗೆ ನಟಿ ನಯನಾ ತಮ್ಮ ಜೀವನದ ಪ್ರತಿಯೊಂದು ಕ್ಷಣದ ಬಗ್ಗೆ ತಾವು ಬದುಕಿನಲ್ಲಿ ಕಂಡ ಏರಿಳಿತಗಳು..ನೋವು ನಲಿವುಗಳ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ನ ಸಂದರ್ಶನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಶನಲ್ಲಿ ನಟಿ ನಯನಾ ತಮ್ಮ ತಂದೆ ಬಗ್ಗೆ ಮಾತನಾಡಿದ್ದು, ಅವರನ್ನು ನೆನಪಿಸಿಕೊಂಡರೆ ಹಿಟ್ಲರ್ ನೆನಪಿಗೆ ಬರುತ್ತಾರೆ ಎಂದಿದ್ದಾರೆ.
ನಿಮ್ಮ ಜೀವನದಲ್ಲಿ ವಿಲನ್ಗಳು ಯಾರಿಲ್ವಾ ಎನ್ನುವ ರಾಜೇಶ್ ಗೌಡ ಅವರ ಪ್ರಶ್ನೆಗೆ ನಟಿ ನಯನಾ ನೇರವಾಗಿ 'ನಮ್ಮ ಡ್ಯಾಡಿ' ಎಂದು ಉತ್ತರಿಸಿದ್ದಾರೆ. ನಾನು ನನ್ನ ತಮ್ಮ ಇಬ್ಬರು ಮಕ್ಕಳು. ಆದರೆ ನಾವು ಜಾಯಿಂಟ್ ಫ್ಯಾಮಿಲಿ. ನಮ್ಮ ಅಪ್ಪನ ಜೊತೆ ನಾವು ಒಂದು ಒಳ್ಳೆ ದಿನಗಳು ಅಂತಾ ಕಳೆದಿಲ್ಲ. ಶಾಲೆಯಲ್ಲಿ ನಾನು ಮಾಡದ ತಪ್ಪಿಗೆ ತುಂಬಾ ಜೋರಾಗಿ ಒದೆ ತಿಂದಿದ್ದೇನೆ. ಬಾಲ್ಯದ ಬಗ್ಗೆ ತುಂಬಾ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನನ್ನ ತಮ್ಮ ಇವತ್ತಿಗೂ ಫೋನ್ ಮಾಡಿದ್ರೆ ಇದೇ ವಿಷಯಗಳನ್ನು ಮಾತನಾಡುತ್ತೇವೆ. ತುಂಬಾ ಮಿಸ್ ಮಾಡಿಕೊಳ್ತೇನೆ ಕಣೋ ನಾನು ನಿನ್ನ ಅಂತಾ ನಾನು ಹೇಳ್ತೀನಿ. ಅವನು ಹೇಳ್ತಾನೆ. ನಮ್ಮ ಇಬ್ಬರಿಗೂ ಇವತ್ತಿಗೂ ಆ ಕೊರಗಿದೆ. ಎಲ್ಲಾರೂ ಅಪ್ಪ- ಅಮ್ಮನು ಅವರು ಮಕ್ಕಳನ್ನು ಎಷ್ಟು ಚೆನ್ನಾಗಿ ಮಾತನಾಡಿಸುತ್ತಾರೆ. ಎಷ್ಟು ಚೆನ್ನಾಗಿ ಹುರಿದುಂಬಿಸುತ್ತಾರೆ. ನಮಗೆ ಯಾಕೆ ಈ ತರ ಎಂದು ನಯನಾ ಕಣ್ಣೀರಿಟ್ಟಿದ್ದಾರೆ.
ಆಮೇಲೆ ನಂಗೆ ಎಲ್ಲಾರೂ ಹೇಳುತ್ತಿದ್ದರು. ನಿನ್ನ ತಮ್ಮಾ ಎಷ್ಟು ಚೆನ್ನಾಗಿ ಓದುತ್ತಾನೆ. ನೀನು ಓದಲ್ಲ..ನೀನು ಬರೆಯಲ್ಲಾ..ಅಂತೆಲ್ಲಾ ಅನ್ನೋರು. ಆದರೆ ನಂಗೆ ಖುಷಿ ಆಗೋದು. ನಾನು ಮನೆ ಬಿಟ್ಟು ಹೋಗಬೇಕಾದರೆ, ನನ್ನ ತಮ್ಮ ನನ್ನನ್ನು ಕೇಳಿದ್ದು ಒಂದೇ ಪ್ರಶ್ನೆ ಅವರ ಮನೆಯಲ್ಲಿ ಸುಖವಾಗಿ ಇರುತ್ತೀಯಾ..? ಚೆನ್ನಾಗಿ ನೋಡಿಕೊಳ್ಳುತ್ತಾರಾ ನಿನ್ನನ್ನ..? ಅವನು ಅಪ್ಪನ ತರ ಅಲ್ವಾ ಎಂದು ಕೇಳಿದ್ದ.. ಆ ಸಮಯದಲ್ಲಿ ನನಗೆ ಏನು ಉತ್ತರ ಕೊಡಬೇಕೋ ಗೊತ್ತಾಗಿಲ್ಲ ಎಂದು ನಟಿ ನಯನಾ ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ನಮ್ಮನೆಲ್ಲಾ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ನಟಿ ನಯನಾ ತಮ್ಮ ಮನಸ್ಸಿನಲ್ಲಿ ಇಷ್ಟೆಲ್ಲಾ ನೋವಿಟ್ಟುಕೊಂಡಿದ್ದಾರಾ ಅಂತಾ ನಿಮಗೆ ಈಗ ಅನಿಸುವುದು ಸಹಜ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ನಯನಾ ಅವರ ಪಟಪಟ ಮಾತು..ನಕ್ಕು ನಗಿಸುವ ಪಂಚ್ ಡೈಲಾಗ್ಗಳು, ನಗು ಮುಖ..ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುತ್ತಾರೆ. ಆದರೆ ಅವರ ಜೀವನದಲ್ಲಿಯೂ ಮರೆಯಲಾಗದ ಕಹಿ ಘಟನೆಗಳು ನಡೆದಿದ್ದು, ನಯನಾ ಈ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications