Varthur Santhosh: ಕೊನೆಗೂ ವರ್ತೂರು ಸಂತೋಷ್ಗೆ ಪ್ರಪೋಸ್ ಮಾಡಿದ ತನಿಷಾ
ಬಿಗ್ ಬಾಸ್ ಕನ್ನಡ ಸೀಜನ್ 10ರ ಹಿಟ್ ಜೋಡಿ ಅಂದರೆ ಅದು ಹಳ್ಳಿಕಾರ್ ವರ್ತೂರು ಸಂತೋಷ್ ಹಾಗೂ ಬೆಂಕಿ ತನಿಷಾ ಕುಪ್ಪಂಡ. ಶೋ ಮುಗಿದು ವರ್ಷಗಳದರೂ ಕೂಡ ಈ ಜೋಡಿಯ ಮೇಲೆ ಜನರಿಗೆ ಒಂಥರಾ ಪ್ರೀತಿ. ಹೀಗಾಗಿ ಪದೇ ಪದೇ ಇಬ್ಬರನ್ನು ಜೊತೆಯಾಗಿ ನೋಡಲು ಇಷ್ಟಪಡುತ್ತಾರೆ. ಬಿಗ್ ಬಾಸ್ ಬಳಿಕ ಕೆಲವು ಕಿರುತೆರೆ ಶೋಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ವರ್ತೂರ್ ಸಂತೋಷ್ ಹಾಗೂ ತನಿಷಾ ಕುಪ್ಪಂಡ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ. ವರ್ತೂರ್ ಸಂತೋಷ್ ಹಾಗೂ ತನಿಷಾ ಇತ್ತೀಚಿಗೆ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ಗುಸು ಗುಸು ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಈ ಪ್ರಶ್ನೆಗೆ ತನಿಷಾ ಕುಪ್ಪಂಡ ಸಂದರ್ಶನವೊಂದರಲ್ಲಿ ನೇರವಾಗಿ ಉತ್ತರಿಸಿರುವುದಲ್ಲದೇ, ವರ್ತೂರು ಸಂತೋಷ್ಗೆ ಐ ಲವ್ ಯೂ ಎಂದಿದ್ದಾರೆ.

Kannada Filmistry ಯೂಟ್ಯೂಬ್ ಚಾನೆಲ್ನ ಸಂದರ್ಶನದ ಮಧ್ಯದಲ್ಲಿ ತನಿಷಾ, ವರ್ತೂರು ಸಂತೋಷ್ಗೆ ಕರೆ ಮಾಡಿದ್ದಾರೆ. ಮೊದಲು ಉಭಯ ಕುಶಲೋಪರಿ ವಿಚಾರಿಸಿದ ಬಳಿಕ.. ವರ್ತೂ, ನಾನೇದಾರೂ ನಿನಗೆ ಅಲ್ಲಿ ಮನೆ ಹತ್ತಿರ ಬಂದು ಐ ಲವ್ ಯೂ ಅಂತಾ ಹೇಳಿದರೆ ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ.
ತನಿಷಾ ಪ್ರಶ್ನೆಗೆ ಉತ್ತರಿಸಿದ ವರ್ತೂರು ಸಂತೋಷ್, ಅದರಲ್ಲೇನಿದೆ ಫ್ರೆಂಡ್ಸ್ ಐ ಲವ್ ಯೂ ಹೇಳುತ್ತಿದ್ದಾರೆ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ವರ್ತೂರು ಸಂತೋಷ್ ಉತ್ತರಕ್ಕೆ ಜೋರಾಗಿ ನಕ್ಕ ತನಿಷಾ ಥ್ಯಾಂಕ್ಯೂ ಫ್ರೆಂಡ್ಸ್ ಇಲ್ಲೋಬ್ಬರು ನಮ್ಮಿಬ್ಬರ ಬಗ್ಗೆ ಡೌಟ್ ಎನ್ನುತ್ತಿದ್ದರು. ಅದಕ್ಕೆ ಕಾಲ್ ಮಾಡಿದೆ ಅವರ ಅನುಮಾನಕ್ಕೆ ನೀನೇ ಉತ್ತರ ಕೊಡು ಎಂದಿದ್ದಾರೆ. ವರ್ತೂರು ಸಂತೋಷ್ ತಾವಿಬ್ಬರು ಸ್ನೇಹಿತರು ಎನ್ನುವುದನ್ನು ಸಂದರ್ಶಕರಿಗೆ ತಿಳಿಸಿದ್ದಾರೆ.

100% ಒಳ್ಳೆ ಫ್ರೆಂಡ್ಶಿಪ್ ಇದೆ- ವರ್ತೂರು ಸಂತೋಷ್
ಈ ಹಿಂದೆ ಕೂಡ ತಮ್ಮ ಪ್ರೀತಿ ಹಾಗೂ ಮದುವೆ ಗಾಸಿಪ್ಗೆ ಉತ್ತರ ಕೊಟ್ಟಿದ್ದ ವರ್ತೂರು ಸಂತೋಷ್, ನಮ್ಮ ನಡುವೆ ಒಳ್ಳೆ ಗೆಳೆತನ ಇದೆ. ನನಗೆ ಬೆಂಕಿ ಒಳ್ಳೆ ಫ್ರೆಂಡ್. ಹೇಗೆ ಅಂದರೆ ಅವರ ಶೋ ಮುಗಿದಿದ್ದರೂ ನಾನು ಬರುವವರೆಗೂ ಕಾದಿದ್ದರು. ಅದರಲ್ಲೇ ಗೊತ್ತಾಗುತ್ತದೆ ಅವರು ನನಗೆ ಕೊಡುವ ಗೌರವ. ಹಾಗೂ ನಾನು ಅವರಿಗೆ ಕೊಡುವ ಗೌರವ ಗೊತ್ತಾಗುತ್ತದೆ ಎಂದಿದ್ದರು.
ನಮ್ಮ ಇಬ್ಬರ ನಡುವೆ ಒಂದು ಒಳ್ಳೆ ಗೆಳೆತನ ಇದೆ. 100% ಒಳ್ಳೆ ಫ್ರೆಂಡ್ಶಿಪ್ ಇದೆ. ಒಳಗಡೆನೂ ಇತ್ತು. ಹೊರಗಡೆ ಬಂದ ಮೇಲೂ ಇದೆ. ಒಳಗಡೆ ನಾನು ಬೆಂಕಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಡಿದ್ದೇವೆ. ಆದರೆ ಯಾವುದೂ ಮೇಜರ್ ಆಗಿ ಏನು ಆಗುತ್ತಿರಲಿಲ್ಲ. ಹೊರಗಡೆನೂ ಅಷ್ಟೇ, ಎಷ್ಟೋ ಕಾರ್ಯಕ್ರಮಗಳಿಗೆ ನಾನೇ ಬೆಂಕಿಯನ್ನು ಕರೆಸಿದ್ದೇನೆ. ಅವರು ಕೂಡ ಖುಷಿಯಲ್ಲಿ ಬರುತ್ತಾರೆ. ತುಂಬಾ ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗುತ್ತೇವೆ ಎಂದಿದ್ದರು.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications