ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಹನುಮಂತ ಮಾಡುವ ಕೆಲಸ... Bigg Boss

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಯಶಸ್ಸು ಗಳಿಸಿದ್ದು, ಬಿಗ್‌ಬಾಸ್ ಕನ್ನಡ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ ಅನ್ನೋದು ಸುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಇಂತಹ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಬಂದ ಹನುಮಂತ ದೊಡ್ಡ ಸದ್ದು ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಕನ್ನಡ ರಿಯಾಲಿಟಿ ಶೋಗಳ ಪಾಲಿನ ಕಿಂಗ್ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಅಂತಾರೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು. ಬಿಗ್‌ಬಾಸ್ ಕನ್ನಡ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡ್ತಿದ್ದು ಇದೀಗ ಕಿಚ್ಚ ಸುದೀಪ್ ಅವರು ನಿರೂಪಣೆಗೆ ಗುಡ್‌ಬೈ ಹೇಳಿದ್ದಾರೆ. ಮುಂದೆ ಯಾರು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಅನ್ನೋ ಪ್ರಶ್ನೆ ಮೂಡಿರುವಾಗ, ಬಿಗ್‌ಬಾಸ್ ಸೀಸನ್ 11 ಅದ್ಧೂರಿಯಾಗಿ ಅಂತ್ಯವಾಗಿದೆ. ಹೀಗಿದ್ದಾಗಲೇ, ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಹನುಮಂತ ಮಾಡುವ ಕೆಲಸ...

Bigg Boss Kannada Contestant Hanumantha Will Do This Thing First After Winning Money

ಹಣದಲ್ಲಿ ಹನುಮಂತ ಮಾಡುವ ಕೆಲಸ...

ಹೌದು, ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹನುಮಂತ ಸ್ಪರ್ಧಿಯಾಗಿ ಬಂದ ದಿನದಿಂದಲೇ ಈತ ವಿನ್ನರ್ ಅಂತಾ ಕನ್ನಡಿಗರು ಡಿಸೈಡ್ ಆಗಿದ್ದರು. ಅಲ್ಲದೆ ಉತ್ತರ ಕರ್ನಾಟಕ ಮೂಲದ ಈ ಹನುಮಂತನ ಮಾತು & ಆಟ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿತ್ತು. ಹೀಗಿದ್ದಾಗಲೇ, ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಹನುಮಂತ ಮಾಡುವ ಕೆಲಸ...

50 ಲಕ್ಷ ರೂಪಾಯಿ ಹಣದಲ್ಲಿ...

ಬಿಗ್‌ಬಾಸ್ ಕನ್ನಡ ಸೀಸನ್ 11 ಭಾರಿ ಕುತೂಹಲ ಕೆರಳಿಸಿತ್ತು, ಯಾಕಂದ್ರೆ ಇಡೀ ಇಂಡಿಯಾ ನೋಡುವ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಟ್ರೋಫಿ ಗೆಲ್ಲುವುದು ಯಾರು?? ಅನ್ನೋ ಪ್ರಶ್ನೆ ಕೋಟಿ ಕೋಟಿ ಕನ್ನಡಿಗರನ್ನು ಕಾಡುತ್ತಿತ್ತು. ಇದೀಗ ಅವರ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಕನ್ನಡಿಗರು ಇಷ್ಟಪಟ್ಟು, ಕನ್ನಡಿಗರ ಹೃದಯ ಗೆದ್ದಿದ್ದ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿದ್ದು, 50 ಲಕ್ಷ ರೂಪಾಯಿ ಹಣದಲ್ಲಿ ಏನೆಲ್ಲಾ ಮಾಡ್ತಾರಂತೆ ಗೊತ್ತಾ?

ಹನುಮಂತ ಬಡತನದಲ್ಲಿ ಬೆಂದು ಬಂದಿದ್ದ ಹುಡುಗ, ಹೀಗಿದ್ದಾಗ ತನಗೆ ಬಂದಿರುವ ಈ 50 ಲಕ್ಷ ರೂಪಾಯಿ ಹಣದಲ್ಲಿ ಹನುಮಂತ ಅವರು ಮೊದಲು ಮದುವೆ ಆಗಲಿದ್ದಾರಂತೆ. ಈ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಹನುಮಂತ ಮಾತನಾಡಿದ್ದರು. ಅಲ್ಲದೆ, ಉಳಿದ ಹಣದಲ್ಲಿ ತಮ್ಮ ಸಮುದಾಯಕ್ಕೆ ಸಹಾಯ ಮಾಡುವುದು & ತಮ್ಮ ಊರಿಗೆ ಕೂಡ ಸಹಾಯ ಮಾಡುವ ಕೆಲಸ ಮಾಡುತ್ತಾರಂತೆ ಹನುಮಂತ. ಹೀಗೆ ಬಿಗ್‌ಬಾಸ್ ವಿನ್ನರ್ ಹನುಮಂತ ಅವರ ಈ ಒಳ್ಳೆಯ ಮನಸ್ಸು ಕನ್ನಡಿಗರಿಗೆ ತುಂಬಾನೇ ಇಷ್ಟವಾಗುತ್ತಿದೆ.

ಕೈಗೆ ಸಿಗೋದು 35 ಲಕ್ಷ ರೂಪಾಯಿ!
ಅಂದಹಾಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು 50 ಲಕ್ಷ ರೂಪಾಯಿ ಗೆದ್ದಿದ್ದರೂ ಕೈಗೆ ಸಂಪೂರ್ಣ ಹಣ ಸಿಗುವುದಿಲ್ಲ. ಬಹುಮಾನ ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ ಶೇಕಡಾ 30 ರಷ್ಟು ಟ್ಯಾಕ್ಸ್ ಹಾಕಲಾಗುತ್ತೆ. ಈ ಕಾರಣಕ್ಕೆ ಇದೀಗ ಹನುಮಂತ ಭರ್ಜರಿ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅದರಲ್ಲಿ ಕೈಗೆ ಸಿಗುವುದು 35 ಲಕ್ಷ ರೂಪಾಯಿ ಮಾತ್ರ. ಯಾಕಂದ್ರೆ ಈ 50 ಲಕ್ಷ ರೂಪಾಯಿಯಲ್ಲಿ 15 ಲಕ್ಷ ರೂಪಾಯಿ ಹಣ ಹನುಮಂತ ಟ್ಯಾಕ್ಸ್ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕಟ್ಟಬೇಕು. ಹೀಗಾಗಿ ಈ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+