Bigg Boss: ಬಿಗ್ಬಾಸ್ ವಿನ್ನರ್ ರೇಸ್ನಲ್ಲಿ ಗಾಯಕ ಹನುಮಂತ- 11ನೇ ವಾರದ ಮತದಾನದ ಫಲಿತಾಂಶ
ಬಿಗ್ಬಾಸ್ ಮನೆಯಲ್ಲಿ ಗಾಯಕ ಹನುಮಂತ ಸಖತ್ತಾಗಿ ಆಟ ಆಡುತ್ತಿದ್ದಾರೆ. ಅವಶ್ಯಕತೆ ಇರುವಷ್ಟು ಮಾತು, ಅವಶ್ಯಕತೆ ಇದ್ದಲ್ಲಿ ಮಾತ್ರ ವಾದ ಹೀಗೆ ಹನುಮಂತನ ಹಾಡು, ಕಾಮಿಡಿ, ಸರಳತೆ ಎಲ್ಲವೂ ಬಿಗ್ಬಾಸ್ ಅಭಿಮಾನಿಗಳ ಮನ ಗೆದ್ದಿದೆ. ಹೀಗಾಗಿ ಈ ಬಾರಿ ಹನುಮಂತನೇ ಬಿಗ್ಬಾಸ್ ಟಾಪ್ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾವ ಸ್ಪರ್ಧಿಗಳಿಗೆ ಜನ ಮೆಚ್ಚುಗೆ ನೀಡುತ್ತಿದ್ದಾರೆ? ಯಾರಿಗೆ ಮತಗಳು ಹೆಚ್ಚಾಗಿದೆ? ಹನುಮಂತ ಯಾವ ಸ್ಥಾನದಲ್ಲಿ ಇದ್ದಾರೆ? ಟಾಪ್ 5 ಸ್ಪರ್ಧಿಗಳು ಯಾರು? ಎಲ್ಲವನ್ನೂ ಈಗ ತಿಳಿಯೋಣ.
11ನೇ ವಾರ ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ದೊಡ್ಮನೆಯಿಂದ ಎಲಿಮಿನೇಟ್ ಆಗಲು ಎಂಟು ಜನ ನಾಮಿನೇಟ್ ಆಗಿದ್ದರು. ಈ ಎಂಟು ಜನರಿಗೆ ಬಂದಿರುವ ಓಟುಗಳನ್ನು ಗಮನಿಸಿದಾಗ ಐದು ಜನ ಸೇಫ್ ಝೋನ್ ಅಲ್ಲಿ ಇದ್ದಾರೆ. ಉಳಿದಂತೆ ಮೂರು ಜನ ಡೇಂಜರ್ ಝೋನ್ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಈ ಡೇಂಜರ್ ಝೋನ್ ಅಲ್ಲಿ ಇರುವ ಮೂವರಲ್ಲಿ ಯಾರಬೇಕಾದರೂ ಎಲಿಮಿನೇಟ್ ಆಗಬಹುದು. ಹಾಗಾದರೆ ಈವರೆಗೆ ಬಂದಿರುವ ಓಟುಗಳ ಪ್ರಕಾರ ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ ಅನ್ನೋದನ್ನು ತಿಳಿಯೋಣ.

ಬಿಗ್ಬಾಸ್ ಟಾಪ್ 5 ಸ್ಪರ್ಧಿಗಳು
ಬಿಗ್ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಅಂದರೆ ತ್ರಿವಿಕ್ರಮ್, ಭವ್ಯ, ಧನ್ರಾಜ್, ಮೋಕ್ಷಿತಾ, ಶಿಶಿರ್, ಚೈತ್ರಾ, ಹನುಮಂತ, ರಜತ್. ಇವರಲ್ಲಿ ತುಂಬಾ ಜನರಿಗೆ ತುಂಬಾ ಒಳ್ಳೆಯ ಓಟುಗಳು ಬಂದಿವೆ. ಹೀಗೆ ಅಧಿಕ ಓಟುಗಳನ್ನು ಗಳಿಸಿಕೊಂಡು ಮೊದಲ ಸ್ಥಾನದಲ್ಲಿ ಇರುವುದು ಹನುಮಂತ ಅವರು. ಹೌದು... ಈ ವಾರವೂ ಕೂಡ ಅತ್ಯಂತ ಹೆಚ್ಚು ಓಟುಗಳು ಹನುಮಂತ ಅವರಿಗೇ ಬಂದಿವೆ.
ಇನ್ನೂ ಎರಡನೇ ಸ್ಥಾನದಲ್ಲಿ ತ್ರಿವಿಕ್ರಮ್ ಕಾಣಿಸಿಕೊಂಡಿದ್ದಾರೆ. ಅಂದರೆ ಹನುಮಂತನ ನಂತರ ಹೆಚ್ಚು ಮತಗಳನ್ನು ತ್ರಿವಿಕ್ರಮ್ ಅವರು ಗಳಿಸಿದ್ದಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಮೋಕ್ಷಿತಾ ಪೈ ಅವರು ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಜತ್, ಐದನೇ ಸ್ಥಾನದಲ್ಲಿ ಭವ್ಯ ಗೌಡ ಅವರು ಇದ್ದಾರೆ.
ಉಳಿದಂತೆ ಮೂರು ಜನ ಸ್ಪರ್ಧಿಗಳು ಅಂದರೆ ಶಿಶಿರ್, ಚೈತ್ರಾ, ಧನ್ರಾಜ್ ಬಾಟಮ್ ಅಲ್ಲಿ ಉಳಿದುಕೊಂಡಿದ್ದಾರೆ. ಈ ಮೂವರಲ್ಲಿ ನೋಡಿದರೆ ಶಿಶಿರ್ ಅವರ ಆಟ ಸ್ವಲ್ಪ ಉತ್ತಮವಾಗಿದೆ. ಹೀಗಾಗಿ ಈ ವಾರ ಶಿಶಿರ್ ಸೇವ್ ಆಗಬಹುದು. ಆದರೆ ಇದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಯಾಕೆಂದರೆ ಬಿಗ್ಬಾಸ್ ಈ ಮೂವರಲ್ಲಿ ಯಾರನ್ನಬೇಕಾದರೂ ಹೊರಗೆ ಕಳುಹಿಸಬಹುದು.
ಈ ಮೂವರಲ್ಲಿ ಯಾರು ಔಟ್?
ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಟ್ ಮಾಡಲು ಕೇವಲ ಓಟಿಂಗ್ ಅನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಓಟಿಂಗ್ ರಿಸಲ್ಟ್ನೊಂದಿಗೆ ಬಿಗ್ಬಾಸ್ ತಂಡದ ನಿರ್ಧಾರ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಈ ಮೂವರಲ್ಲಿ ಯಾರನ್ನಬೇಕಾದರೂ ಎಲಿಮಿನೇಟ್ ಮಾಡಬಹುದು. ಆದರೆ ಇವರಲ್ಲಿ ಶಿಶಿರ್ ಸೇವ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಧನ್ರಾಜ್ ಹಾಗೂ ಚೈತ್ರಾ ಬಾಟಮ್ ಅಲ್ಲಿ ಬಂದು ನಿಲ್ಲುವ ಲಕ್ಷಣಗಳು ಇವೆ.
ಚೈತ್ರಾಕುಂದಾಪುರ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕರೂ ಕೂಡ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಜಗಳ ಬಿಟ್ಟರೆ ಅವರು ಆಟದಲ್ಲೂ ಅಷ್ಟಕಷ್ಟೇ. ಹಲವಾರು ಬಾರಿ ಬಿಗ್ಬಾಸ್ ಮನೆಯಿಂದಲೂ ಅವರು ಹೊರಗಡೆ ಹೋಗಿ ಬಂದಿದ್ದಾರೆ. ಇದೆಲ್ಲದನ್ನೂ ನೋಡಿದರೆ ಚೈತ್ರಾ ಈ ವಾರ ಬಿಗ್ಬಾಸ್ ಮನೆಯಿಂದ ಹೊರಗಡೆ ಹೋಗಬಹುದು. ಇನ್ನೂ ಧನ್ರಾಜ್ ಕೂಡ ತುಂಬಾ ಕಾಮಿಡಿ ಮಾಡ್ತಾರೆ ಅನ್ಕೊಂಡಿದ್ರು ಜನ. ಆದರೆ ಕಾಮಿಡಿ ಅನ್ನೋದು ಸಂಪೂರ್ಣವಾಗಿ ಕಾಣೆಯಾಗಿ ಹೋಗಿದೆ. ಧಣ್ರಾಜ್ ಅವರ ಹನುಮಂತ ಜೊತೆಗೆ ಸೇರಿಕೊಂಡು ಕಾಲ ಕಳೆಯುತ್ತಾರೆ ಅನ್ನೋದು ಮಾತ್ರ ಕಾಣಿಸುತ್ತಿದೆ.
ಹನುಮಂತ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿಲ್ಲ ಅಂದಿದ್ದರೆ ಈಗಾಗಲೇ ಧನ್ರಾಜ್ ಎಲಿಮಿನೇಟ್ ಆಗಿ ಹೊರಬಂದಿರುತ್ತಿದ್ದರು. ಹನುಮಂತ ಅವರೊಂದಿಗೆ ಹೆಚ್ಚು ಸಮಯ ಕಳೆದು ಸ್ವಲ್ಪ ಹೈಲೆಟ್ ಆಗಿದ್ದು ಬಿಟ್ಟರೆ ಬೇರೆ ಯಾರೊಂದಿಗೂ ಧನ್ರಾಜ್ ಕಾಣಿಸಿಕೊಂಡಿಲ್ಲ. ಹೀಗಾಗಿ ಇವರು ತುಂಬಾ ಡೇಂಜರ್ ಝೋನ್ ಅಲ್ಲಿ ಇದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ನಡೆಯಲಿದ್ದು ಯಾರು ಬಿಗ್ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಇದಕ್ಕಾಗಿ ಸಂಜೆವರೆಗೂ ಕಾಯಲೇಬೇಕು.
-
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications