ರೀಲ್ ಅಲ್ಲ ರಿಯಲ್ ಜೋಡಿಯಾದ ಕಮಲಿ-ರಿಷಿ: ಕೊನೆಗೂ ಅಮೂಲ್ಯ ಗೌಡ ಗ್ರೀನ್ ಸಿಗ್ನಲ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯ ರಿಷಿ ಹಾಗೂ ಕಮಲಿ ಜೋಡಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಈ ಜೋಡಿಯ ಬಗ್ಗೆ ಆಗಾಗ ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ಪ್ರೀತಿಯಲ್ಲಿ ಬಿದ್ದಿದ್ದು, ಕನ್ನಡ ಕಿರುತೆರೆಯ ನಟನನ್ನೇ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಬಿಎಸ್ ಹಾಗೂ ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಗುಡ್ನ್ಯೂಸ್ ಕೊಡಲಿದ್ದಾರೆ ಎನ್ನುವ ಪೋಸ್ಟರ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಇದೀಗ ಈ ಗಾಳಿ ಸುದ್ದಿಗೆ ಒಂದು ಸಿಹಿಯಾದ ಸ್ಟಷ್ಟನೆ ಸಿಕ್ಕಿದ್ದು, ನಟ ನಿರಂಜನ್ ಜೊತೆ ಪ್ರೀತಿಗೆ ಅಮೂಲ್ಯ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಬಗ್ಗೆ ಸ್ವತಃ ಅಮೂಲ್ಯ ಗೌಡ ಮಾತನಾಡಿದ್ದು, 'ಕಮಲಿ ಧಾರಾವಾಹಿ ಶುರುವಾದ ದಿನದಿಂದಲೂ ಈ ಒಂದು ಗಾಸಿಪ್ ಇದ್ದೇ ಇತ್ತು. ನನ್ನ ಪುಟ್ಟ ಪ್ರಪಂಚದಲ್ಲಿ ನಿರಂಜನ್ ಅವರು ಕೂಡ ಇದ್ದಾರೆ. ಕಮಲಿ ಧಾರಾವಾಹಿ ಮಾಡುವ ಸಮಯದಿಂದಲೂ ಅವರ ಕುಟುಂಬಕ್ಕೆ ನಾನು ಗೊತ್ತು. ನನ್ನ ಕುಟುಂಬಕ್ಕೆ ಅವರು ಗೊತ್ತು. ನಾವೆಲ್ಲಾ ಒಂದು ಫ್ಯಾಮಿಲಿ ಫ್ರೆಂಡ್ಸ್ ತರ ಕ್ಲೋಸ್ ಆಗಿದ್ದೇವೆ' ಎಂದರು.
'ನಾವಿಬ್ಬರು ಪ್ರೀತಿಸುತ್ತಿದ್ದೇವಾ, ಇಲ್ಲವಾ ಎನ್ನುವುದು ನಿಜ ಹೇಳಬೇಕು ಅಂದರೆ ನನಗೆ ಸಹ ಗೊತ್ತಿಲ್ಲ. ನೋಡೋಣ ಸದ್ಯ ಗೊತ್ತಿಲ್ಲ. ಮುಂದೆ ಆದರೂ ಆಗಬಹುದು. ಹೇಳಲು ಆಗುವುದಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ ಅಂತಾ ನಾನು ಹೇಳುವುದಿಲ್ಲ. ಇವಾಗ ನಾನು ಇಲ್ಲ ಅಂತಾ ಹೇಳಿ ಮುಂದೆ ನಾವಿಬ್ಬರು ಪ್ರೀತಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಏನೇನು ಕಮೆಂಟ್ ಬರಬಹುದು ಅಂತಾ ನನಗೆ ಗೊತ್ತು' ಎಂದು ಪರೋಕ್ಷವಾಗಿ ನಿರಂಜನ್ ಜೊತೆಗಿನ ಪ್ರೀತಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

'ಯಾಕೆ ಸುಮ್ಮನೆ ಬೇಡ ಎನ್ನುವುದು. ನಿರಂಜನ್ ಒಳ್ಳೆ ಹುಡುಗ ಆದರೆ ಆಗಲಿ. ನನ್ನ ಕಡೆಯಿಂದ ಒಪ್ಪಿಗೆ ಇದೆ. ಡ್ರೀಮ್ ಬಾಯ್ ಅಂತಾ ನನಗೆ ಕನಸುಗಳೆಲ್ಲಾ ಇಲ್ಲವೇ ಇಲ್ಲ. ನಾನು ಈ ನಟನೆ ಕ್ಷೇತ್ರದಲ್ಲಿ ಇರುವುದರಿಂದ ಅವರಿಗೂ ಈ ಕ್ಷೇತ್ರದ ಬಗ್ಗೆ ಗೊತ್ತಿರಬೇಕು. ಇಬ್ಬರ ಮಧ್ಯೆ ಅಂತಹ ಹೊಂದಾಣಿಕೆ ಇರಬೇಕು. ಇಲ್ಲವಾದರೆ ಜೀವನ ಕಷ್ಟ ಆಗುತ್ತದೆ. ನಿಯತ್ತಾಗಿರಬೇಕು, ನನ್ನನ್ನು ಅರ್ಥ ಮಾಡಿಕೊಂಡಿರಬೇಕು' ಎಂದು ಮೀಡಿಯಾ ಬಜಾರ್ ಯೂಟ್ಯಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅಮೂಲ್ಯ ಗೌಡ ಹೇಳಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications