Actor Allu Arjun: ಸುಳ್ಳು ಹೇಳಿ ತಗ್ಲಾಕೊಂಡ ನಟ ಅಲ್ಲು ಅರ್ಜುನ್!
ತೆಲುಗು ಹಾಗೂ ದಕ್ಷಿಣ ಭಾರತರ ಫೇಮಸ್ ನಟ ಅಲ್ಲು ಅರ್ಜುನ್ ಅವರು ಸುಳ್ಳೊಂದನ್ನು ಹೇಳಿ, ರೆಡ್ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವಿಡಿಯೋದ ಮೇಲೆ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಟಾಲಿವುಡ್ನ ಫೇಮಸ್ ನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಹ ಹೌದು.
ತೆಲುಗು ಸಿನಿಮಾರಂಗದಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ಪಡೆದ ನಟ ಎನ್ನುವ ಖ್ಯಾತಿಯೂ ಅವರಿಗೆ ಇದೆ. ಆದರೆ, ಜನರ ಮುಂದೆ ಸುಳ್ಳು ಹೇಳಿ ಅವರು ಟ್ರೋಲ್ಗೆ ಗುರಿಯಾಗಿದ್ದಾರೆ. ಜನ ಅಲ್ಲು ಅವರ ಹಳೆಯ ವಿಡಿಯೋ ಹಾಗೂ ಹೊಸ ವಿಡಿಯೋಗಳನ್ನು ಹಾಕಿ ಟ್ರೋಲ್ ಮಾಡ್ತಿದ್ದಾರೆ.

ಅಲ್ಲು ಅರ್ಜುನ್ ಏನಾದರು ಮಾತನಾಡಿದರೆ ಅವರ ಮಾತಿನಲ್ಲಿ ಒಂದು ತೂಕ ಇರುತ್ತದೆ. ಅಲ್ಲು ಅರ್ಜುನ್ ಕೇವಲ ತೆಲುಗು ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಕರ್ನಾಟಕದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಸಂಘಗಳು ಇವೆ.
ಅವರ ಸಿನಿಮಾಗಳು ಮಲಯಾಳಂ ಹಾಗೂ ತಮಿಳು ಭಾಷೆಗೂ ಡಬ್ ಆಗಿವೆ. ಹೀಗಾಗಿ, ಅವರಿಗೆ ಎಲ್ಲಾ ಕಡೆಗಳಲ್ಲೂ ಫ್ಯಾನ್ಸ್ ಇದ್ದಾರೆ. ಇದೀಗ ಅವರು ರಾಷ್ಟ್ರ ಪ್ರಶಸ್ತಿಯ ಬಗ್ಗೆ ಮಾತನಾಡಿರುವ ಮಾತು ಭಾರೀ ವೈರಲ್ ಹಾಗೂ ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.
ಪ್ಯಾನ್ ಇಂಡಿಯಾ (ಭಾರತದಾದ್ಯಂತ) ಸಿನಿಮಾ ಹಾಗೂ ಅಲ್ಲು ಅರ್ಜುನ್ಗೆ ಗತ್ತು ತಂದುಕೊಟ್ಟಿದ್ದ ಪುಷ್ಪ ಸಿನಿಮಾದ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರಪ್ರಶಸ್ತಿ ಬಂದ ಮೇಲೆ ಅವರಿಗೆ ಇನ್ನಷ್ಟು ಡಿಮ್ಯಾಂಡ್ ಜಾಸ್ತಿಯಾಗಿದೆ. ಆದರೆ, ಟಿವಿ ಶೋವೊಂದರಲ್ಲಿ ಅವರು ತಮಗೆ ರಾಷ್ಟ್ರಪ್ರಶಸ್ತಿ ಬಂದ ಬಗ್ಗೆ ಅನುಭವ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ತೆಲುಗು ಚಿತ್ರರಂಗದಲ್ಲಿ ನಟರೊಬ್ಬರಿಗೆ ಮೊದಲ ಬಾರಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಅದು ಅಲ್ಲು ಅರ್ಜುನ್ ಅವರಿಗೆ. ರಾಷ್ಟ್ರಪ್ರಶಸ್ತಿ ಬಂದಾಗ ಮಾತನಾಡಿದ್ದ ಅಲ್ಲು ಅರ್ಜುನ್ ಅವರು, ರಾಷ್ಟ್ರಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಖುಷಿಯಾಗ್ತಿದೆ. ಅಷ್ಟು ಮಾತ್ರವಲ್ಲ.
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ನಾನು ಎನ್ನುವುದು ಗೊತ್ತಿರಲಿಲ್ಲ. ಆ ವಿಷಯ ಕೇಳಿದ ಮೇಲೆ ಇನ್ನಷ್ಟು ಹೆಮ್ಮೆ ಹಾಗೂ ಖುಷಿ ಆಗಿದೆ ಎಂದಿದ್ದರು. ಆದರೆ, ನಾನು ತೆಲುಗು ಭಾಷೆಗೆ ರಾಷ್ಟ್ರ ಪ್ರಶಸ್ತಿ ಬರಲೇಬೇಕು ಎಂದು ಶ್ರಮ ಹಾಕಿದ್ದೇ ಎಂದಿದ್ದಾರೆ. ಈ ರೀತಿ ಮಾತು ಬದಲಿಸಿ ಅಲ್ಲು ಅರ್ಜುನ್ ಟ್ರೋಲ್ಗೆ ಗುರಿಯಾಗಿದ್ದಾರೆ.
ಅಲ್ಲು ಅರ್ಜುನ್ ಹೇಳಿದ್ದೇನು ?
ತೆಲುಗು ಭಾಷೆಯಲ್ಲಿ (ತೆಲುಗು ಚಿತ್ರರಂಗದಲ್ಲಿ)ಯಾವ ನಟರಿಗೂ ರಾಷ್ಟ್ರಪ್ರಶಸ್ತಿ ಬಂದಿಲ್ಲ ಎನ್ನುವುದು ಕೇಳಿ ನೋವಾಗಿತ್ತು. ಅಲ್ಲದೇ ಈ ವಿಷಯ ತುಂಬಾ ಅಪ್ಸೆಟ್ ಸಹ ಮಾಡಿತ್ತು. ಹೀಗಾಗಿ, ಹೇಗಾದರೂ ಸರಿ ತೆಲುಗು ಭಾಷೆಗೆ ನಟನಾಗಿ ಒಂದು ರಾಷ್ಟ್ರಪ್ರಶಸ್ತಿ ತರಲೇಬೇಕು ಎಂದು ಗಟ್ಟಿಯಾಗಿ ಪ್ರಯತ್ನಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಜನ ಹಿಂಗೆ ಒಪನ್ ಆಗಿ ಸುಳ್ಳು ಹೇಳ್ತಿದ್ದಾರೆ ನೋಡಿ ಅಂತ ಟ್ರೋಲ್ ಮಾಡ್ತಾ ಇದ್ದಾರೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications