Duniya Vijay: ನಟ ವಿಜಯ್ ಕುಮಾರ್ ಹೊಸ ಸಿನಿಮಾ 'VK 30' ಪೋಸ್ಟರ್ ವೈರಲ್
ಬೆಂಗಳೂರು, ಆಗಸ್ಟ್ 26: ಇತ್ತೀಚೆಗಷ್ಟೇ ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಅವರು ತಾವೇ ನಿರ್ದೇಶಿಸಿದ್ದ 'ಭೀಮಾ' ಸಿನಿಮಾ ಮೂರನೇ ಭರ್ಜರಿ ಯಶಸ್ವಿ ಕಂಡಿದೆ. ಇದರ ಬೆನ್ನಲ್ಲೆ ಅವರ ಅಭಿಮಾನಿಗಳಿಗೆ ದೊಡ್ಡ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆರ್ಆರ್ ವೆಟ್ರಿವೇಲ್ (ತಂಬಿ) ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ.
ದುನಿಯಾ ವಿಜಯ್ ಅವರು ತಮ್ಮ ಮುಂದಿನ 30ನೇ ಸಿನಿಮಾ ಕುರಿತ ವಿಶೇಷ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮತ್ತೆ ಅದೆ ಗ್ಯಾಂಗ್ ಜೊತೆಗೆ ಹೊಸ ಸಿನಿಮಾ ಎಂದು ಅವರು ಬರೆದುಕೊಂಡಿದ್ದಾರೆ.

ಸಲಗ ಮತ್ತು ಭೀಮಾ ಸಿನಿಮಾವನ್ನು ನಟ ದುನಿಯಾ ವಿಜಯ್ ಅವರೇ ಸ್ವತಃ ನಿರ್ದೇಶಿಸಿ, ನಟಿಸಿದ್ದರು. ಆ ಎರಡು ಸಿನಿಮಾಗಳೂ ಹಿಟ್ ಲಿಸ್ಟ್ಗೆ ಸೇರಿವೆ. ಇದೇ ಚಿತ್ರಗಳ ತಂತ್ರಜ್ಞರು, ಸಹಾಯಕ ನಿರ್ದೇಶಕರ ತಂಡವು ಸೇರಿ ಮತ್ತೊಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ #VK30 ಸಿನಿಮಾ ಪೋಸ್ಟರ್ ವೈರಲ್ ಆಗುತ್ತಿದೆ.
Again with the gang#VK30 #VIJAYAKUMAR pic.twitter.com/VjMdMCw3Y0
— Duniya Vijay (@OfficialViji) August 26, 2024
ಚಿತ್ರದ ಪೋಸ್ಟರ್ನಲ್ಲಿ ಕೆಂಪು ಟೋಪಿ ಹಾಕಿರುವ ದುನಿಯಾ ವಿಜಯ್ ಹೆಗಲ ಮೇಲೆ 'ಉಡಾ' ಪ್ರಾಣಿ ಇದೆ. ಇದನ್ನು ನೋಡಿದ ಅಭಿಮಾನಿಗಳು ಇದು ಸಲಗಾ 2 ಸಿನಿಮಾ ಅಂತಲೂ ಹೇಳುತ್ತಿದ್ದಾರೆ.
ಆಗಸ್ಟ್ 09ರಂದು ಭೀಮಾ ಸಿನಿಮಾ ರಿಲೀಸ್ ಆಗಿತ್ತು. ನಟನಾಗಿ, ಎರಡನೇ ಬಾರಿಗೆ ನಿರ್ದೇಶಕನಾಗಿ ನಟ ದುನಿಯಾ ವಿಜಯ್ ಅವರು ಜನರಿಗೆ ಇಷ್ಟವಾಗಿದ್ದಾರೆ. ಡ್ರಗ್ಸ್ ನಿಂದ ಸಮಾಜ, ಯುವ ಸಮೂಹದ ಮೇಲಾಗುವ ದುಷ್ಪರಿಣಾಮ ಕುರಿತು ಎಳೆ ಎಳೆಯಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಇದು ಜನರಿಗೆ ಇಷ್ಟವಾಗಿದ್ದು, ಸಿನಿಮಾವನ್ನು ಗೆಲ್ಲಿಸಿದ್ದಾರೆ. ಭೀಮಾ ಸಿನಿಮಾ ಮೂಲಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿಗೆ ಜೀವ ಬಂದಂತಾಗಿದೆ.
ಭೀಮಾ ಸಿನಿಮಾ ಬಳಿಕ ತಂಬಿ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ನಟ ದುನಿಯಾ ವಿಜಯ್ ಅವರೇ ಸ್ವತಃ ಹೇಳಿದ್ದರು. ಆ ನೂತನ ಸಿನಿಮಾದ ಪೋಸ್ಟರ್ ಸೋಮವಾರ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ಫ್ಯಾನ್ಸ್ಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
-
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications