ಹೈದರಾಬಾದಿನಿಂದ ಇಂದೇ ಹಿಂದಿರುಗುತ್ತಾರಾ ಶಾಸಕರು?

ಬೆಂಗಳೂರು, ಮೇ 18: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ನಿಗೂಢ ನಡೆಗಳು ನಡೆಯುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪತ್ತೆ ಮಾಡುವುದೇ ಒಂದು ಹರಸಾಹಸ ಎನ್ನಿಸಿದೆ.

ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಿಂದ ಹೊರಟ ಶಾಸಕರು ಕೊಚ್ಚಿಗೂ ಹೋಗದೆ ಎಲ್ಲಿ ಹೋದರು ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೋಟೆಲ್ ಗೆ ಶಾಸಕರು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Live: Karnataka election results political developments

May 18, 2018, 11:25 am IST

ಮೊದಲು ಯಾರು ವಿಶ್ವಾಸಮತ ಯಾಚಿಸಬೇಕು ಎಂಬುದನ್ನು ರಾಜ್ಯಪಾಲರು ನಿರ್ಧರಿಸಬೇಕು- ಸುಪ್ರೀಂ ಕೋರ್ಟ್
May 18, 2018, 11:23 am IST

ಅಕಸ್ಮಾತ್ ನಾಳೆಯೇ ವಿಶ್ವಾಸಮತ ಯಾಚಿಸಬೇಕಿದ್ದಲ್ಲಿ ಹೈದರಾಬಾದಿನಲ್ಲಿರುವ ಶಾಸಕರೆಲ್ಲರೂ ಇಂದೇ ರಾಜ್ಯಕ್ಕೆ ಹಿಂದಿರುಗಬೇಕಾಗುತ್ತದೆ.
May 18, 2018, 11:20 am IST

ಎಲ್ಲಾ ಶಾಸಕರಿಗೂ ಸೂಕ್ತ ರಕ್ಷಣೆ ನೀಡಿ. ಮತ್ತು ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದ ಸುಪ್ರೀಂ ಕೋರ್ಟ್.
May 18, 2018, 11:19 am IST

ನಾಳೆಯೇ ವಿಶ್ವಾಸಮತ ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿಕೆ.
May 18, 2018, 11:08 am IST

ನಾಳೆಯೇ ಸರ್ಕಾರ ತನ್ನ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
May 18, 2018, 11:02 am IST

ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಲಿಖಿತ ಬೆಂಬಲ ನೀಡಿಲ್ಲ: ಸುಪ್ರೀಂ ಕೋರ್ಟ್
May 18, 2018, 11:01 am IST

ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿರುವ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ
May 18, 2018, 10:45 am IST

ಯಡಿಯೂರಪ್ಪ ನೂತನ ಸರಕಾರದ ಹಣೆಬರಹ ಸಹ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ್ದರೆನ್ನಲಾದ ಎರಡು ಪತ್ರಗಳನ್ನು ಕೋರ್ಟೆಗೆ ಸಲ್ಲಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದು, ಯಡಿಯೂರಪ್ಪನವರಿಗೆ ಇಂದು ಅಗ್ನಿಪರೀಕ್ಷೆ ಎದುರಾಗಲಿದೆ
May 18, 2018, 10:37 am IST

ತಾಜ್ ಕೃಷ್ಣ ಹೋಟೆಲ್ ತಲುಪಿದ ಕಾಂಗ್ರೆಸ್ ಶಾಸಕರು. ಶಾಸಕರನ್ನು ಸ್ವಾಗತಿಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖಂಡ ಉತ್ತಮ್ ಕುಮಾರ್ ರೆಡ್ಡಿ.
May 18, 2018, 10:23 am IST

ಹೈದ್ರಾಬಾದ್ ನ ನೋವೋಟೆಲ್ ರೆಸಾರ್ಟ್ ತಲುಪಿದ ಜೆಡಿಎಸ್ ಶಾಸಕರ ತಂಡ. ಹೈದ್ರಾಬಾದ್ ಹೊರ ವಲಯದಲ್ಲಿರೋ ರೆಸಾರ್ಟ್.
May 18, 2018, 10:22 am IST

"ಮುಖ್ಯಮಂತ್ರಿಗಳ ಪತ್ರವನ್ನು ನಾವು ಸುಪ್ರೀಂ ಕೋರ್ಟಿಗೆ ತಲುಪಿಸುತ್ತೇವೆ. ಆ ಪತ್ರದಲ್ಲಿ ಮುಖ್ಯಮಂತ್ರಿಗಳ ಬಳಿ ಬಹುಮತವಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ನಾವು ಸದನದಲ್ಲೂ ಅದನ್ನು ಸಾಬೀತುಪಡಿಸುತ್ತೇವೆ. ಇಲ್ಲಿ ಕುದುರೆ ವ್ಯಾಪಾರದ ಪ್ರಶ್ನೆಯೇ ಇಲ್ಲ. ಶಾಸಕರನ್ನು ರೆಸಾರ್ಟಿಗೆ ಕರೆದೊಯ್ದಿದ್ದು ಮತ್ತೊಂದು ಮಾರ್ಗ"- ಮುಕುಲ್ ರೊಹಟ್ಗಿ, ಬಿಜೆಪಿ ಪರ ವಕೀಲ
May 18, 2018, 10:19 am IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಗುಪ್ತಚರ ಇಲಾಖೆ ಡಿಐಜಿ ಸಂದೀಪ್ ಪಾಟೀಲ್.
May 18, 2018, 10:17 am IST

"ಶಾಸಕರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರು ಮೂರ್ನಾಲ್ಕು ದಿನದಿಂದ ಜನರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ನಾವು ಹೇಗೆ ಬಹುಮತ ಸಾಬೀತುಪಡಿಸುತ್ತೇವೆ ಎಂಬುದನ್ನು ನೋಡುತ್ತಿರಿ. ಎಷ್ಟು ಶಾಸಕರು ನಮ್ಮನ್ನು ಬೆಂಬಲಿಸುತ್ತಾರೆ ನೋಡಿ. ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡುತ್ತೇವೆ"- ಬಸವರಾಜ್ ಬೊಮ್ಮಾಯಿ, ಬಿಜೆಪಿ ಮುಖಂಡ
May 18, 2018, 10:13 am IST

ಹೈದರಾಬಾದಿನಿಂದ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ನಿಂದ ತಾಜ್ ಕೃಷ್ಣ ಹೊಟೇಲ್ ಗೆ ಶಾಸಕರು ಶಿಫ್ಟ್
May 18, 2018, 10:07 am IST

ಬೆಳಿಗ್ಗೆ ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೊಟೇಲ್ ತಲುಪಿದ ಶಾಸಕರು.
May 18, 2018, 10:07 am IST

ನಿನ್ನೆ ರಾತ್ರಿಯೇ ಬೆಂಗಳೂರು ಬಿಟ್ಟ ಶಾಸಕರು. ಹೈದರಾಬಾದ್ ಹೈವೆಯಲ್ಲಿ ಬಸ್ಸು ಬದಲಿಸಿ ಹೈದರಾಬಾದಿನಂತ್ತ ಪ್ರಯಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+