ಕೆಜೆಪಿಯ 28 ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯ ಕುಮಾರ್ ಐದನೇ ಪಟ್ಟಿಯಲ್ಲಿ ಮೊದಲು ಘೋಷಿಸಿದ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿ.ಸೋಮಣ್ಣ ಸ್ಪರ್ಧಿಸುವ ವಿಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದ್ದು, ಪುಟ್ಟನರಸಪ್ಪ ಅವರ ಬದಲಾಗಿ ವೀರಶೈವ ಮುಖಂಡ ವಾಗೀಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.
ಶಿಗ್ಗಾವಿ ಕ್ಷೇತ್ರದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಬಾಪುಗೌಡ ಕಾಶೀನಾಥಗೌಡ ಪಾಟೀಲ್, ಜೆಡಿಎಸ್ನ ಮುಖಂಡ ಎಚ್.ಡಿ. ರೇವಣ್ಣ ವಿರುದ್ಧ ಎಚ್.ಎಲ್. ಯಮುನಾ ಅವರಿಗೆ ಟಿಕೆಟ್ ನೀಡಲಾಗಿದೆ. 28 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಮೂವರು ಮಹಿಳೆಯರು, ಮೂವರು ಮುಸ್ಲಿಮರು ಮತ್ತು ಒಬ್ಬ ಕ್ರಿಶ್ಚಿಯನ್ ಪಂಗಡದವರಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿಗಳ ಪಟ್ಟಿ
ಮುದ್ದೇಬಿಹಾಳ - ಮಂಗಳಾದೇವಿ ಬಿರಾದರ್
ನರಗುಂದ - ಕೆ.ಎಸ್. ಪರ್ವತಗೌಡ
ಶಿಗ್ಗಾವಿ - ಬಾಪುಗೌಡ ಕಾಶೀನಾಥ ಗೌಡ ಪಾಟೀಲ್
ಶ್ರವಣಬೆಳಗೊಳ - ಗೋಪಾಲಸ್ವಾಮಿ
ಬಾಗಲಕೋಟೆ - ಬಲರಾಮ್ ಪೂರಪ್ಪ ನಾಯಕ
ಬೊಮ್ಮನಹಳ್ಳಿ - ಬಿ. ರಮೇಶ್ ರೆಡ್ಡಿ
ಚಿಕ್ಕಮಗಳೂರು - ಡಾ.ಕೆ.ಬಿ. ವೇದಮೂರ್ತಿ
ಹನೂರು - ಪೊನ್ನಾಚಿ ಮಹದೇವಸ್ವಾಮಿ
ಮಾಲೂರು - ನಾರಾಯಣಸ್ವಾಮಿ
ಕೆಜಿಎಫ್ - ಭಾಸ್ಕರ್
ಕೋಲಾರ - ಅಬ್ದುಲ್ ರೆಹಮಾನ್ ಮುಜೀಬ್
ಯಲ್ಲಾಪುರ - ಮಹೇಶ್ ಹೊಸಕೊಪ್ಪ
ಪುತ್ತೂರು - ಜಯರಾಮ್ ಭಟ್
ದೇವನಹಳ್ಳಿ - ಹನುಮಂತಪ್ಪ
ಚನ್ನಪಟ್ಟಣ - ನೆರಳೂರು ನಾಗರಾಜಪ್ಪ
ಚಿಕ್ಕಪೇಟೆ - ಖಮರ್ ತಾಜ್
ಔರಾದ್ - ದಾದಾಜಿ ಭೀಮಜಾದವ್ ಚಿಮ್ಮೆಗಾಂವ್
ಮುಧೋಳ - ಕಿರಣ್ ವಿಠ್ಠಲ್ ಕಟ್ಟಿಮನಿ
ಬಿಜಾಪುರ ನಗರ - ಡಾ. ಕರಿಬಸವರಾಜ್ ಬಿ. ನಾಗೂರು
ರಾಯಚೂರು - ಕೆ.ಎಂ. ಬಸವರಾಜಪ್ಪ
ಬೆಂಗಳೂರು ದಕ್ಷಿಣ - ಜಗದೀಶ್ ರೆಡ್ಡಿ
ಹೊಸಕೋಟೆ - ಸೈಯದ್ ಗೌಸ್
ಹೊಳೇನರಸೀಪುರ - ಎಚ್.ಎಲ್. ಯಮುನಾ
ಕುಣಿಗಲ್ - ಪ್ರಕಾಶ್
ಮಹಾಲಕ್ಷ್ಮಿಲೇಔಟ್ - ವೀರೇಶ್ಕುಮಾರ್
ಬೈಂದೂರು - ನವೀನ್ಚಂದ್ರ ಉಪ್ಪುಂದ
ಮೂಡಬಿದರೆ - ವೆಲೇರಿಯನ್ ಕುಟಿನ್ಹಾ
ಬೀಳಗಿ - ಮಲ್ಲಿಕಾರ್ಜುನ ಅಂಗಡಿ
ಕೆಲವು ಅಭ್ಯರ್ಥಿಗಳ ಬದಲಾವಣೆ : ಚಿತ್ರದುರ್ಗ ಕ್ಷೇತ್ರದಲ್ಲಿ ಸುನೀತಾ ಮಲ್ಲಿಕಾರ್ಜುನ್ ಬದಲಾಗಿ ಮಾಜಿ ಶಾಸಕ ಉಮಾಪತಿ, ಗೋಕಾಕ್ ಕ್ಷೇತ್ರದಲ್ಲಿ ನಿಂಗಪ್ಪ ಬಿ. ನಿರ್ವಾಣಿ ಬದಲಾಗಿ ಉಮೇಶ್ ಬಿ. ನಿರ್ವಾಣಿ, ನೆಲಮಂಗಲದಲ್ಲಿ ವೆಂಕಟೇಶ್ ಬಾಬು ಬದಲಾಗಿ ಚೆಲುವರಾಜು, ರಾಯಭಾಗ ಕ್ಷೇತ್ರದಲ್ಲಿ ಅಶೋಕ್ ಕಾಂಬ್ಳೆ ಬದಲಾಗಿ ಬಾಳಾ ಸಾಹೇಬ್ ವಡ್ಡರ್ ಅವರನ್ನು ಕಣಕ್ಕಿಳಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications