ರೇಣುಕಾ ಸೇರ್ಪಡೆ, ಕೆಜೆಪಿ 2ನೇ ಪಟ್ಟಿ ಬಿಡುಗಡೆ

ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪನವರ ಮುಖವಾಣಿಯಾಗಿದ್ದ ಹೊನ್ನಾಳಿ (ದಾವಣಗೆರೆ ಜಿಲ್ಲೆ) ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು. ರೇಣುಕಾಚಾರ್ಯ ಕೆಜೆಪಿ ಸೇರ್ಪಡೆಗೆ ಕೆಲವರ ವಿರೋಧವಿದೆ ಎಂಬ ಊಹಾಪೋಹಕ್ಕೆ ಅವರು ತೆರೆ ಎಳೆದರು.
ಮೊದಲ ಹಂತದಲ್ಲಿ 69 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಯಡಿಯೂರಪ್ಪ, ಶನಿವಾರ ಪತ್ರಿಕಾಗೋಷ್ಠಿ ನಡೆಸಿ, 33 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ 2 ಮಹಿಳೆಯರು, 4 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಮತ್ತು 1 ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.
ಪಕ್ಷ ಸೇರಿದ ನಂತರ, ಕೆಜೆಪಿ ಸೇರಿದ್ದು ತುಂಬಾ ಸಂತಸ ತಂದಿದೆ ಎಂದ ರೇಣುಕಾಚಾರ್ಯ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಕೇವಲ ರಬ್ಬರ್ ಸ್ಟಾಂಪ್ ಆಗಿದ್ದು, ಅನಂತ್ ಕುಮಾರ್ ಅವರ ಹಿಂಬಾಲಕರಾಗಿದ್ದಾರೆ. ಈಶ್ವರಪ್ಪ ಮತ್ತು ಅನಂತ್ ಕುಮಾರ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ಮೈಸೂರಿನಲ್ಲಿ ಕಿತ್ತಾಡಿಕೊಂಡಿದ್ದರು ಎಂದರು. ಸದಾನಂದ ಗೌಡ ಅವರು ತಮ್ಮಿಂದ ಹಣ ಪಡೆದಿದ್ದನ್ನು ಬಹಿರಂಗಪಡಿಸಿದ್ದಕ್ಕಾಗಿ ತಮ್ಮನ್ನು ಪಕ್ಷದಿಂದಲೇ ಉಚ್ಚಾಟಿಸಿದರು. ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಅವರು ನುಡಿದರು.
ಕೆಜೆಪಿಯ ಎರಡನೇ ಪಟ್ಟಿಯಲ್ಲಿರುವವರು
ಹೊನ್ನಾಳಿ - ಎಂ.ಪಿ. ರೇಣುಕಾಚಾರ್ಯ
ರಾಜರಾಜೇಶ್ವರಿ ನಗರ - ವೆಂಕಟೇಶ ಗೌಡ
ಭಟ್ಕಳ - ಶಿವಾನಂದ ನಾಯಕ್
ಟಿ ನರಸಿಪುರ - ಪುಟ್ಟ ನರಸಯ್ಯ
ಅರಸಿಕೆರೆ - ಡಾ. ಲೋಕೇಶ್
ಸಕಲೇಶಪುರ - ಉಮೇಶ್
ಬೈಲಹೊಂಗಲ - ಡಾ. ವಿಶ್ವನಾಥ್ ಪಾಟೀಲ
ತೀರ್ಥಹಳ್ಳಿ - ಮಂಜುನಾಥ ಗೌಡ
ಗುಲಬರ್ಗ ಗ್ರಾಮಾಂತರ - ಬಾಬುರಾವ್ ಚೌಹಾಣ್
ಸಾಗರ - ಬಿಆರ್ ಜಯಂತ್
ಸಿವಿ ರಾಮನ್ ನಗರ - ರವಿ ಕುಮಾರ್
ಮಂಡ್ಯ - ವೆಂಕಟೇಶ್ ಆಚಾರ್
ಗಂಗಾವತಿ - ಬಸವರಾಜ್ ಪಾಟೀಲ್ ಅನ್ವರಿ
ಮಾನ್ವಿ - ಗಂಗಾಧರ ನಾಯ್ಕ್
ಸೇಡಂ - ವೈಜನಾಥ್ ಪಾಟೀಲ
ಜೇವರ್ಗಿ - ಮಲ್ಲಿನಾಥಗೌಡ ಪಾಟೀಲ
ಮಲ್ಲೇಶ್ವರಂ - ಗುಟ್ಟಹಳ್ಳಿ ಕುಮಾರ್
ಬಸವಕಲ್ಯಾಣ - ಮಲ್ಲಮ್ಮ ಅಟ್ಟೂರು
ಚಿತ್ರದುರ್ಗ - ಸುನೀತಾ ಮಲ್ಲಿಕಾರ್ಜುನ್
ಕೆಆರ್ ನಗರ - ಬಸಂತ್
ಚಾಮರಾಜ - ಅರುಣ್ ಕುಮಾರ್ ಗೌಡ
ಹೂವಿನಹಡಗಲಿ - ಮಧು ನಾಯಕ್
ಶಿರಗುಪ್ಪ - ನರಸಿಂಹ ನಾಯಕ್
ಗದಗ - ಸಂಕಣ್ಣನವರ್
ಯಲಬುರ್ಗ - ಸಿಎಚ್ ಪೊಲೀಸ್ ಪಾಟೀಲ
ತುಮಕೂರು ಗ್ರಾಮಾಂತರ - ನಿಂಗಪ್ಪ
ಧಾರವಾಡ ಗ್ರಾಮಾಂತರ - ತವನಪ್ಪ ಅಷ್ಟಗಿ
ಶಿವಾಜಿನಗರ - ಪೆರುಮಾಳ್
ರಾಮದುರ್ಗ - ಪಂಚಗಟ್ಟಿಮಠ
ಕೊಪ್ಪಳ - ಕೆಎಂ ಸೈಯದ್
ಬೇಲೂರು - ವಿಶ್ವನಾಥ
ನವಲಗುಂದ - ಚಂದ್ರಶೇಖರ ದಾಡಿಬಾಯಿ
ಗೌರಿಬಿದನೂರು - ಟಿಎಸ್ ಮುರಳಿಧರ್
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications